ಕಾರ್ ಪಲ್ಟಿ:ತಪ್ಪಿದ ಅನಾಹುತ
ಗದಗ ಜಿಲ್ಲೆಯ ನರಗುಂದದಿಂದ ನವಲಗುಂದ ತಾಲೂಕಿನ ಹೆಬಸೂರ ಗ್ರಾಮಕ್ಕೆ ಬರುತ್ತಿದ್ದ ಕಾರೊಂದು ರಸ್ತೆಯ ಪಕ್ಕದಲ್ಲಿ ಹಾಕಿದ್ದ ಮಣ್ಣಿನ ಗುಡ್ಡೆಯ ಮೇಲೆ ಹೋದ ಪರಿಣಾಮ ಕಾರು ಪಲ್ಟಿಯಾದ ಘಟನೆ ಬೆಳವಟಗಿ ಕ್ರಾಸ್ ಬಳಿ ಸಂಭವಿಸಿದೆ.
ನರಗುಂದ ಮೂಲದ ಅಶೋಕ ಹೊಸಮನಿ ಎಂಬುವವರಿದ್ದ ಕಾರ್ ಪಲ್ಟಿಯಾಗಿದ್ದು, ಅದೃಷ್ಠಾವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ರಸ್ತೆಯ ಪಕ್ಷದಲ್ಲಿ ಜೆಸಿಬಿಯನ್ನು ಲಾರಿಗೆ ಹಾಕುವುದಕ್ಕಾಗಿ ಮಣ್ಣು ಹಾಕಿ, ಅದನ್ನ ತೆಗೆಯದೆ ಹಾಗೆ ಅಲ್ಲಿಯೇ ಬಿಟ್ಟಿದ್ದರ ಪರಿಣಾಮ ಈ ಘಟನೆ ನಡೆದಿದೆ.
ಕಾರು ಸಂಪೂರ್ಣವಾಗಿ ಉಲ್ಟಾ ಆಗಿ ಬಿದ್ದಿದ್ದು, ರಸ್ತೆ ಸಂಚಾರಕ್ಕೆ ಕೆಲಕಾಲ ಅಡಚಣೆ ಉಂಟಾಗಿತ್ತು. ಬಸ್ ಸಂಚಾರಕ್ಕೂ ಅಡೆತಡೆಯಾಯಿತು.
Nimma Suddi > State News > ಕಾರ್ ಪಲ್ಟಿ:ತಪ್ಪಿದ ಅನಾಹುತ
ಕಾರ್ ಪಲ್ಟಿ:ತಪ್ಪಿದ ಅನಾಹುತ
Nimma Suddi Desk.01/11/2020
posted on
Leave a reply