This is the title of the web page
This is the title of the web page

Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

State News

ವೈವಿದ್ಯತೆಯಲ್ಲಿ ಏಕತೆ ಅದುವೇ ಭಾರತದ ಹಿರಿಮೆ

ನಿಮ್ಮ ಸುದ್ದಿ ಬಾಗಲಕೋಟೆ

ಪ್ರಪಂಚದ ಎಲ್ಲಿಯೂ ಕಾಣದ ವೈವಿದ್ಯತೆಯಲ್ಲಿ ಏಕತೆಯನ್ನು ನಮ್ಮ ಭಾರತದಲ್ಲಿ ಮಾತ್ರ ಕಾಣಬಹುದಾಗಿದೆ ಎಂದು  ಪಟ್ಟಣ ಪಂಚಾಯಿತಿ ನೂತನ ಮುಖ್ಯಾಧಿಕಾರಿ ಮಹೇಶ ನಿಡಶೇಶಿ ತಿಳಿಸಿದರು.

ಪಪಂ ಕಚೇರಿಯಲ್ಲಿ ನಡೆದ ೭೫ನೇ ಸ್ವಾತಂತ್ರೊತ್ಸವ ನಿಮಿತ್ತ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಭಾರತದಲ್ಲಿ ಎಲ್ಲ ಹಬ್ಬಗಳನ್ನು ಬೇರೆ ತರಹ ಆಚರಿಸಲಾಗುವುದು. ಆದರೆ ರಾಷ್ಟ್ರೀಯ ಹಬ್ಬವಾಗಿರುವ ಸ್ವಾತಂತ್ರ ಉತ್ಸವವನ್ನು ಎಲ್ಲರೂ ಸೇರಿ ಒಂದೇ ತರಹ ಆಚರಿಸುವದು ನಮ್ಮ ಭಾರತದ ಒಕ್ಕೂಟತೆಯನ್ನು ಎತ್ತಿ ಹಿಡಿದು ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದರು.

ಪಪಂ ಮಾಜಿ ಅಧ್ಯಕ್ಷ ಸಂಗಪ್ಪ ತಳವಾರ, ಮಾಜಿ ಸದಸ್ಯರಾದ ಬಿ.ಎಸ್.ನಿಡಗುಂದಿ, ವಿಜಯಕುಮಾರ ಕನ್ನೂರ, ಶಂಕ್ರಮ್ಮ ಗೌಡರ, ಶಾಂತವ್ವ ಯಂಕಂಚಿ, ಹುಸೇನ್ ಪಟೇಲ್, ಹಿರಿಯರಾದ ಶಿವಾನಂದ ಶೆಟ್ಟರ್, ಶರಣಪ್ಪ ಯರಗೇರಿ, ಸಿಬ್ಬಂದಿಗಳಾದ ಐ.ಎಲ್.ಗುಡ್ಡದ, ಎಂ.ಆರ್.ಕೆರೂರ, ಜೆ.ಡಿ.ಹೆಬ್ಳೀಕರ, ಸಂತೋಷ ವ್ಯಾಪಾರಿಮಠ, ಪಿ.ಬಿ.ರುದ್ರಸ್ವಾಮಿಮಠ, ಶ್ವೇತಾ ಚಲ್ಮಿ, ಮಂಜುನಾಥ ಪೂಜಾರ ಇತರರು ಇದ್ದರು.

Nimma Suddi
";