This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Health & FitnessLocal NewsState News

ಕರಕುಶಲ ವಸ್ತುಗಳ ಪ್ರದರ್ಶನ & ಜಾಗೃತಿ

ಕರಕುಶಲ ವಸ್ತುಗಳ ಪ್ರದರ್ಶನ & ಜಾಗೃತಿ

ಬಾಗಲಕೋಟೆ:

ಧಾರವಾಡದ ಕರಕುಶಲ ಸೇವಾ ಕೇಂದ್ರದಿಂದ ಬವಿವ ಸಂಘದ ಬಸವೇಶ್ವರ ಇಂಜಿನೀಯರಿಂಗ್ ಕಾಲೇಜನಲ್ಲಿ ಮೂರು ದಿನಗಳ ಕಾಲ ಕರಕುಶಲ ಪ್ರದರ್ಶನ ಮತ್ತು ಜಾಗೃತಿ ಕಾರ್ಯಕ್ರಮ ಜರುಗಿತು.

ಪ್ರದರ್ಶನದಲ್ಲಿ ನುರಿತ ಕರಕುಶಕರ್ಮಿಗಳ ಕೋಲ್ಹಾಪುರಿ ಚಪ್ಪಲ್ಸ್, ಕುಂಬಾರಿಕೆ, ಟೆರಾಕೋಟಾ, ಲಂಬಾಣಿ ಕಸೂತಿ ಸೆಣಬುಗಳಲ್ಲಿ ಕರಕುಶಲಗಳನ್ನು ಪ್ರದರ್ಶಿಸಲಾಯಿತು. ಕಾರ್ಯಕ್ರಮವನ್ನು ಬಸವೇಶ್ವರ ಇಂಜಿನೀಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಡಿ.ಎಸ್.ಜಂಗಮಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು.

ದಾರವಾಡದ ಎಚ್.ಎಸ್.ಸಿ (ಕರಕುಶಲ) ಸಹಾಯಕ ನಿರ್ದೇಶಕ ದರ್ಶನ ರಾಘವನ್, ಇಂಜಿನೀಯರಿಂಗ್ ಕಾಲೇಜಿನ ವಾಣಿಜ್ಯ ಮತ್ತು ಉತ್ಪಾದನೆ ವಿಭಾಗದ ಪ್ರೊ.ಡಾ.ಎಸ್.ಎಂ.ಪರಶಿಯವರ ಉಪಸ್ಥಿತರಿದ್ದರು.
ಭಾರತ ಸರ್ಕಾರದ ಜವಳಿ ಸಚಿವಾಲಯದ ಅಡಿಯಲ್ಲಿ ದೇಶದಲ್ಲಿ ಕರಕುಶಲ ಅಭಿವೃದ್ದಿಯ ಗುರಿಯನ್ನು ಹೊಂದಿರುವ ನೀತಿಗಳ ರಚನೆ ಮತ್ತು ಅನುಷ್ಠಾನದಲ್ಲಿ ಸರ್ಕಾರಕ್ಕೆ ಸಹಾಯ ಮಾಡುತ್ತದೆ. ಇದು ದೇಶದಾದ್ಯಂತ 6 ಪ್ರಾದೇಶಿಕ ಕಚೇರಿಗಳು ಮತ್ತು 67 ಕ್ಷೇತ್ರ ಘಟಕಗಳನ್ನು ಹೊಂದಿದೆ. ಅಂತಹ ನಾಲ್ಕು ಕ್ಷೇತ್ರ ಘಟಕಗಳು ಕರ್ನಾಟಕ ರಾಜ್ಯದಲ್ಲಿ ಧಾರವಾಡ, ಬೆಂಗಳೂರು, ಮಂಗಳೂರು ಮತ್ತು ಮೈಸೂರು ದಕ್ಷಿಣ ಪ್ರಾದೇಶಿಕ ಕಚೇರಿ ಚೈನ್ಯೈ ಅಡಿಯಲ್ಲಿ ನೆಲೆಗೊಂಡಿರುತ್ತವೆ.

ಕರಕುಶಲ ಸೇವಾ ಕೇಂದ್ರ ಧಾರವಾಡವು 8 ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದೆ. ಬೆಳಗಾವಿ, ಬೀದರ್, ಬಾಗಲಕೋಟೆ, ವಿಜಯಪುರ, ಧಾರವಾಡ, ಕಲಬುರಗಿ, ರಾಯಚೂರು, ಯಾದಗಿರಿ ಮತ್ತು ಇಲಾಖೆಯ ವಿವಿಧ ಯೋಜನೆಗಳಾದ ಮಾರ್ಕೆಟಿಂಗ್ ಈವೆಂಟ್ಸ್, ಕೌಶಲ್ಯ ಉನ್ನತೀಕರಣ ತರಬೇತಿ, ವಿನ್ಯಾಸ ಮತ್ತು ತಾಂತ್ರಿಕತೆಯ ಮೂಲಕ ಕುಶಲಕರ್ಮಿಗಳನ್ನು ಬೆಂಬಲಿಸುವ ಉದ್ದೇಶ ಹೊಂದಿದೆ.

";