This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Local NewsPolitics NewsState News

ಯತ್ನಾಳ್ ವಿರುದ್ಧ ಕ್ರಮ:ಇನ್ನೂ ಚಿಂತಿಸಿಲ್ಲ

ಯತ್ನಾಳ್ ವಿರುದ್ಧ ಕ್ರಮ:ಇನ್ನೂ ಚಿಂತಿಸಿಲ್ಲ

ಬಾಗಲಕೋಟೆ

ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರ, ಈ ದಿಕ್ಕಿನಲ್ಲಿ ನಾವು ಯೋಚನೆ ಮಾಡಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು

ಬಾಗಲಕೋಟೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು   ನೀವೇನಾದರೂ ಯೋಚನೆ ಮಾಡಿದ್ದರೆ ಹೇಳಬೇಕು,
ಕ್ರಮ ಸಂಬಂಧ ಕಾರ್ಯಕಾರಿಣಿಯಲ್ಲಿ
ಅಭಿಪ್ರಾಯ ವ್ಯಕ್ತವಾಗಿದ್ದು ಸತ್ಯ,
ಯತ್ನಾಳ ಆದಿಯಾಗಿ ಯಾರೇ ಇರಬಹುದು,
ಯಾರೇ ಇರಬಹುದು ಅನ್ನೋದಕ್ಕಿಂತಲೂ ಯಾರೂ ಉಳಿದಿಲ್ಲ.

ಎಲ್ಲ ಹಿರಿಯರನ್ನ ವಿಶ್ವಾಸಕ್ಕೆ ತೆಗೆದುಕೊಂಡಿದ್ದೇನೆ,
ಒಬ್ಬರೋ ಇಬ್ಬರೋ ಸಣ್ಣಪುಟ್ಟ ಏನೇ ವ್ಯತ್ಯಾಸ ಇದ್ದರೂ ತಾವು ಕರೆದು ಮಾತನಾಡಿ ಪರಿಹರಿಸುತ್ತೇವೆ‌‌.
ಏನೇ ಸಮಸ್ಯೆ ಇದ್ದರೂ ಕರೆದು ಮಾತನಾಡುವಂತೆ ವರಿಷ್ಠ ರಿಗೆ ಮನವಿ ಮಾಡಿದ್ದೇನೆ.

ಲೋಕಸಭೆ ಚುನಾವಣೆ ನಮ್ಮ ಮುಂದಿರುವ ಗುರಿಯಾಗಿದೆ. ಪುಣ್ಯಾತ್ಮ ಮೋದಿಯವರು ತಪಸ್ಸಿನ ರೀತಿಯಲ್ಲಿ ದೇಶದ ಅಭಿವೃದ್ಧಿ ಮಾಡ್ತಿದ್ದಾರೆ,
ಈಗಾಗಲೇ ಎಲ್ಲರೂ ಕೈ ಜೋಡಿಸಿದ್ದಾರೆ, ಅವರು ಸಹ ಕೈ ಜೋಡಿಸ್ತಾರೆ ಅನ್ನೋ ವಿಶ್ವಾಸ ಇದೆ ಎಂದು ವಿಜಯೇಂದ್ರ ಹೇಳಿದರು‌.

—–

ರಾಜ್ಯದಲ್ಲಿ ಸರ್ಕಾರವೇ ಇಲ್ಲದಂತಾಗಿದೆ,
ರಾಜ್ಯದಲ್ಲಿ ಬರಗಾಲ ಇದೆ, ರೈತರ ಸಂಕಷ್ಟ ಇದೆ. ರಾಜ್ಯ ಸರ್ಕಾರ ತನ್ನ ಕರ್ತವ್ಯ ಮರೆತಿದೆ. ಸರ್ಕಾರಕ್ಕೂ ಬರಗಾಲಕ್ಕೂ ಯಾವುದೇ ಸಂಭಂದ ಇಲ್ಲ ಎಂಬಂತೆ ಇದೆ.

ಮಂತ್ರಿಗಳ ಹೇಳಿಕೆಗಳು ಉದ್ಧಟತನದಿಂದ ಕೂಡಿವೆ…ಕೈ  ಶಾಸಕರು ಸಹ ತಲೆ ಎತ್ತಿ ಓಡಾಡಲು ಆಗ್ತಿಲ್ಲ, ಬಿಜೆಪಿ, ಜೆಡಿಎಸ್ ಶಾಸಕರ ಕ್ಷೇತ್ರಗಳಿಗೂ ಅನುದಾನ ಇಲ್ಲ.

ಸಿಎಂ ಅಲ್ಪಸಂಖ್ಯಾತರಿಗೆ ನೂರಾರು ಕೋಟಿ ಬಿಡುಗಡೆ ಮಾಡ್ತಾರೆ, ರಾಜ್ಯದಲ್ಲಿ ರೈತರ ಪರಿಸ್ಥಿತಿ ಅರಿವಾಗುತ್ತಿಲ್ಲ. ಜನರಿಗೆ ಕೈ ಗ್ಯಾರಂಟಿ ಅಲ್ಲ, ಮೋದಿ ಗ್ಯಾರಂಟಿ ಬೇಕಿದೆ, ಗ್ಯಾರಂಟಿಗಳು ಸ್ವತಃ ಸಿಎಂ ಗೆ ನುಂಗಲಾರದ ತುತ್ತಾಗಿವೆ, ಗ್ಯಾರಂಟಿ ಭ್ರಮೆ ಯಲ್ಲಿರೋ ಕಾಂಗ್ರೆಸ್ ಗೆ ರಾಜ್ಯದ ಜನ ಲೋಕಸಭೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡ್ತಾರೆ ಎಂದ ವಿಜಯೇಂದ್ರ.

—-
ಜಿಲ್ಲಾ ಉಸ್ತುವಾರಿ ಸಚಿವರು ಏನು ಮಾಡ್ತಿದ್ದಾರೆ ಅಂತ ಯಾರಿಗೂ ಗೊತ್ತಿಲ್ಲ.‌ಇಂತಹ ಬರ ಪರಿಸ್ಥಿತಿಯಲ್ಲಿ ಜಿಲ್ಲಾ ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಹಾರ ನೀಡ್ತಾರೆ ಅಂತ ಅಂದುಕೊಳ್ಳಲಾಗಿತ್ತು ಆದ್ರೆ ಅದು ಯಾವುದೇ ಆಗಲಿಲ್ಲ.‌ಕಾಂಗ್ರೆಸ್ ಪಕ್ಷದ ಶಾಸಕರು ತಲೆ ಎತ್ತಿ ಓಡಾಡದ ಪರಿಸ್ಥಿತಿ ಇದೆ.ಇವರೆಗೂ ಅಭಿವೃದ್ಧಿ ಗೆ ಒಂದು ರೂ ಅನುದಾನ ನೀಡಿಲ್ಲ.‌ ರಾಜ್ಯದಲ್ಲಿ ಸರ್ಕಾರ ಬರೋಕೆ ಸ್ಪಂದನೆ ಮಾಡಿದ್ದಾರೆ.

ಅಲ್ಲ ಸಂಖ್ಯಾತರಿಗೆ ನಿಮ್ಮ ಆದ್ಯತೆಗಳೇನು ? ರೈತರು, ಬಡವರು, ಅಭಿವೃದ್ಧಿ ಕೆಲಸಗಳು ಆದ್ಯತೆ ಅಲ್ವಾ ?ಇವರೆಗೂ ಒಂದೂ ಹೊಸ ಯೋಜನೆ ಘೋಷಣೆ ಮಾಡಿಲ್ಲ.

ಕಾಂಗ್ರೆಸ್ ಪಕ್ಷದ ಗ್ಯಾರಂಟಿ ನೋಡಿ ಬಿಜೆಪಿಗೆ ಗಾಬರಿ ಆಗಿದೆ ಅಂತ ಸಿಎಂ ಹೇಳ್ತಾರೆ. ಮುಖ್ಯಮಂತ್ರಿ ಭ್ರಮೆಯಲ್ಲಿದ್ದಾರೆ. ಸಿಎಂ ಅವ್ರಿಗೆ ನೆನಪಿಸಿಕೊಡ್ತೇನೆ.
ಕೈ ಗ್ಯಾರಂಟಿ ಸ್ವತಃ ಮುಖ್ಯಮಂತ್ರಿಗೆ ನುಂಗಲಾರದ ತುತ್ತಾಗಿದೆ.

ಸರ್ಕಾರಿ ನೌಕರರ ಸಂಬಳ ಕೊಡದ ಸ್ಥಿತಿಗೆ ಬಂದಿದೆ..
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಜನತೆ ಉತ್ತರ ಕೊಡ್ತಾರೆ ಎಂದ ವಿಜಯೇಂದ್ರ…

Nimma Suddi
";