This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Education NewsLocal NewsState News

ಪಿ.ಎಚ್.ಪೂಜಾರರಿಂದ ಆಮಂತ್ರಣ ಪತ್ರಿಕೆ

ಪಿ.ಎಚ್.ಪೂಜಾರರಿಂದ ಆಮಂತ್ರಣ ಪತ್ರಿಕೆ

ಬಾಗಲಕೋಟೆ

ಅಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆ, ಆಮಂತ್ರಣ, ಶ್ರೀರಾಮ ಮಂದಿರದ ಪೋಟೋಗಳನ್ನು ಅಂಬೇಡ್ಕರ್ ಕಾಲೋನಿಯಲ್ಲಿ ವಿಧಾನ ಪರಿಷತ್ ಶಾಸಕ ಪಿ.ಎಚ್.ಪೂಜಾರ ಹಾಗೂ ಸಂಘ ಪರಿವಾರದ ಕಾರ್ಯಕರ್ತರು ಮನೆಮನೆಗೆ ತಲುಪಿಸುವ ಮೂಲಕ ಅಭಿಯಾನ ನಡೆಸಿದರು.

ಜ.೨೨ರಂದು ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಉದ್ಘಾಟನೆಗೊಳ್ಳುತ್ತಿದ್ದು, ಅಂದು ಎಲ್ಲರೂ ತಮ್ಮತಮ್ಮ ಮನೆಯಲ್ಲಿ ಶ್ರೀರಾಮ ಪೂಜೆ ನೆರವೇರಿಸಿ, ಸಂಜೆ ಮನೆಯ ಆವರಣದಲ್ಲಿ ದೀಪಗಳಿಂದ ಅಲಂಕರಿಸಬೇಕು ಎಂದು ಮನವಿ ಮಾಡಿಕೊಂಡರು.

ಅಭಿಯಾನಕ್ಕೂ ಮುನ್ನ ಮೋಟಗಿ ಬಸವೇಶ್ವರ ದೇವಸ್ಥಾನದಲ್ಲಿ ಅಕ್ಷತೆ ಹಾಗೂ ಆಮಂತ್ರಣ ಪತ್ರಿಕೆಗಳಿಗೆ ಪೂಜೆ ಸಲ್ಲಿಸಲಾಯಿತು. ಕಾಲೋನಿಯಲ್ಲಿ ನಿವಾಸಿಗಳು ಸಂಭ್ರಮದಿAದ ಸ್ವಾಗತಿಸಿದರು.

ಸಂಜು ಡಿಗ್ಗಿ, ನೀತಿನ ಮಿರಜಕರ, ರಾಜು ನಾಯಕ, ಮಾಧವ ಮೇಲ್ನಾಡ, ರಾಮ ಗೌಳಿ, ಸುನೀಲ ಗೀರಡೆ, ರಾಜು ಮಿರಜಕರ, ವಿನೋದ ಮಿರಜಕರ, ಅಪ್ಪು ಕೊಪ್ಪದ, ಪವನ ಮಹೇಂದ್ರಕರ, ಮಂಜುನಾಥ ಮಿರಜಕರ, ಬಾಬು ರಾಮದುರ್ಗ, ಈರಣ್ಣ ಲಿಂಗದಳ್ಳಿ, ಮುತ್ತು ಅಂಬಗೇರ, ಶ್ರೀಧರ ಅಂಬಿಗೇರ ಇತರರಿದ್ದರು.

 

Nimma Suddi
";