This is the title of the web page
This is the title of the web page

Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

State News

ಕಣಜೇನಹಳ್ಳಿಯಲ್ಲಿ ಅಮಾವ್ಯಾಸೆಯ ದಿನ ಕಾಳಿಕಾಂಭದೇವಿ ಗುಡಿಯಲ್ಲಿ ದೃಷ್ಟಿದೋಷ ತೆಗೆಸಿಕೊಂಡರೆ ಮನಃಶಾಂತಿ ಖಂಡಿತ

ಕಣಜೇನಹಳ್ಳಿಯಲ್ಲಿ ಅಮಾವ್ಯಾಸೆಯ ದಿನ ಕಾಳಿಕಾಂಭದೇವಿ ಗುಡಿಯಲ್ಲಿ ದೃಷ್ಟಿದೋಷ ತೆಗೆಸಿಕೊಂಡರೆ ಮನಃಶಾಂತಿ ಖಂಡಿತ

ಕಣಜೇನಹಳ್ಳಿಯ ಆದಿಶಕ್ತಿ ಶ್ರೀ ಕಾಳಿಕಾಂಭದೇವಿ ಚೌಡೇಶ್ವರಿ ದೇವಸ್ಥಾನದಲ್ಲಿ ದೇವಿ ಮರಳೋ, ಜನ ಮರಳೋ ಗೊತ್ತಿಲ್ಲ, ದೇವಸ್ಥಾನಕ್ಕೆ ಬಂದು ಇಲ್ಲಿ ದೃಷ್ಟಿದೋಷ ತೆಗೆಸಿಕೊಂಡರೆ ಮನಃಶಾಂತಿಯಾಗುತ್ತದೆನ್ನುವ ನಂಬಿಕೆ ಇದೆ. ಇದರಿಂದ ಅಮಾವ್ಯಾಸೆ ಬಂದರೆ ಸಾಕು ಸಾವಿರಾರು ಜನ ಭಕ್ತರು ಇಲ್ಲಿರುವ ದೇವಿಯ ಮೊರೆ ಹೋಗುತ್ತಾರೆ ಎಂದು ಮಾಹಿತಿ ತಿಳಿದು ಬಂದಿದೆ.

ಅದೊಂದು ಪವರ್​​ಫುಲ್ ದೇವಿಯ ಮುಂದೆ ಕಹಿಬೇವಿನ ಸೊಪ್ಪನ್ನು ಸಕ್ಕರೆಯಂತೆ ಸವಿಯುತ್ತಿದ್ದರೆ, ಮಾನಸಿಕ ಕಾಯಿಲೆಗಳು, ಮಾಟ-ಮಂತ್ರ-ದುಷ್ಟಶಕ್ತಿ ಕಾಟಗಳು ವಾಸಿಯಾಗುತ್ತವಂತೆ ಮಾಟ, ಮಂತ್ರ, ದುಷ್ಟರ ಕಾಟ ದೃಷ್ಟಿ ತೆಗೆಸಿಕೊಳ್ಳಲು ಜನ ಅದೊಂದು ದೇವಿಯ ಮೊರೆ ಹೋಗಿದ್ದಾರೆ. ಕಹಿಬೇವಿನ ಸೊಪ್ಪನ್ನು ಸಕ್ಕರೆಯಂತೆ ರೋಷ-ಆಕ್ರೋಶ, ದುಃಖ ದುಮ್ಮಾನದಿಂದ ಸವಿಯುತ್ತಿರುವುದು ಚಿಕ್ಕಬಳ್ಳಾಪುರ ತಾಲ್ಲೂಕಿನ ಕಣಜೇನಹಳ್ಳಿ ಗ್ರಾಮದ ಬಳಿ ಇರುವ ಆದಿಶಕ್ತಿ ಶ್ರೀ ಕಾಳಿಕಾಂಭದೇವಿ ಚೌಡೇಶ್ವರಿ ದೇವಸ್ಥಾನದಲ್ಲಿಕೆಲವು ಮಾನಸಿಕ ಕಾಯಿಲೆಗಳು ಆಸ್ಪತ್ರೆ ಹಾಗೂ ವೈದ್ಯರ ಬಳಿ ತೋರಿಸಿದ್ದರೂ ವಾಸಿಯಾಗುತ್ತಿಲ್ಲವೆಂದು ಕೆಲವರು ಇಲ್ಲಿಗೆ ಆಗಮಿಸಿ ಇಲ್ಲಿರುವ ದೇವಿಯ ಮುಂದೆ ತನಗೆ ಅಂಟಿರುವ ಪಿಡುಗನ್ನು ತೊಲಗಿಸುವಂತೆ ಬೇಡಿಕೊಳ್ಳುತ್ತಾರೆ.

ದೇವಸ್ಥಾನದ ಅರ್ಚಕರಾದ ಸುಬ್ರಹ್ಮಣ್ಯಸ್ವಾಮಿ ಎನ್ನುವವರು ನಿಂಬೆಹಣ್ಣುಗಳಿಂದ ಮಂತ್ರಿಸಿ ಕಹಿಬೇವಿನ ಸೊಪ್ಪನ್ನು ತಿನ್ನಲು ಹೇಳುತ್ತಿದ್ದು, ಬೇವಿನ ಸೊಪ್ಪಿನ ಎಫೆಕ್ಟ್, ಸ್ವಾಮಿಯ ಮಂತ್ರದ ಎಫೆಕ್ಟೋ ಕೆಲವೇ ಕ್ಷಣಗಳಲ್ಲಿ ಪೀಡೆ ಮಾಯವಾಗುತ್ತಂತೆ. ಇನ್ನು ಕಣಜೇನಹಳ್ಳಿಯ ಆದಿಶಕ್ತಿ ಶ್ರೀ ಕಾಳಿಕಾಂಭದೇವಿ ಚೌಡೇಶ್ವರಿ ದೇವಸ್ಥಾನದಲ್ಲಿ ಪ್ರತಿ ಅಮಾವ್ಯಾಸೆ ದಿನ ಮಾತ್ರ ಸಂಜೆಯಿಂದ ಮಧ್ಯರಾತ್ರಿವರೆಗೂ ದೃಷ್ಟಿದೋಷ, ಮಾಟ-ಮಂತ್ರ, ಮಾನಸಿಕ ಕಾಯಿಲೆಗಳಿಗೆ ಪರಿಹಾರ ಸೂಚಿಸುತ್ತಾರೆ.ದೇವಸ್ಥಾನಕ್ಕೆ ಬರುವವರಿಂದ ಯಾವುದೇ ಶುಲ್ಕ ಪಡೆಯುವುದಿಲ್ಲ. ಇದರಿಂದ ದಿನದಿಂದ ದಿನಕ್ಕೆ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿದೆ ಎನ್ನುತ್ತಾರೆ ದೇವಸ್ಥಾನದ ಅರ್ಚಕರಾದ ಸುಬ್ರಹ್ಮಣ್ಯಸ್ವಾಮಿ.ಕಣಜೇನಹಳ್ಳಿಯ ಆದಿಶಕ್ತಿ ಶ್ರೀ ಕಾಳಿಕಾಂಭದೇವಿ ಚೌಡೇಶ್ವರಿ ದೇವಸ್ಥಾನದಲ್ಲಿ ದೇವಿ ಮರಳೋ, ಜನ ಮರಳೋ ಗೊತ್ತಿಲ್ಲ, ದೇವಸ್ಥಾನಕ್ಕೆ ಬಂದು ಇಲ್ಲಿ ದೃಷ್ಟಿದೋಷ ತೆಗೆಸಿಕೊಂಡರೆ ಮನಃಶಾಂತಿಯಾಗುತ್ತದೆನ್ನುವ ನಂಬಿಕೆ ಇದೆ.

 

Nimma Suddi
";