This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Politics NewsState News

ಒಕ್ಕಲಿಗರು ಸ್ವಾಭಿಮಾನಿಗಳು ಮತ್ತು ಯಾವ ಸರ್ಕಾರಕ್ಕೆ ಬೆಂಬಲಿಸಬೇಕು ಅನ್ನೋದನ್ನು ಚೆನ್ನಾಗಿ ತಿಳಿದಿದ್ದಾರೆ: ಡಿಕೆ ಸುರೇಶ್

ಒಕ್ಕಲಿಗರು ಸ್ವಾಭಿಮಾನಿಗಳು ಮತ್ತು ಯಾವ ಸರ್ಕಾರಕ್ಕೆ ಬೆಂಬಲಿಸಬೇಕು ಅನ್ನೋದನ್ನು ಚೆನ್ನಾಗಿ ತಿಳಿದಿದ್ದಾರೆ: ಡಿಕೆ ಸುರೇಶ್

ರಾಮನಗರ: ಡಿಕೆ ಶಿವಕುಮಾರ್ ಮತ್ತು ಹೆಚ್ ಡಿ ಕುಮಾರಸ್ವಾಮಿ ಇಬ್ಬರೂ ಒಕ್ಕಲಿಗ ಸುಮದಾಯದವರು ಮತ್ತು ಎರಡು ಬೇರೆ ಬೇರೆ ಪಕ್ಷಗಳ ರಾಜ್ಯಾಧ್ಯಕ್ಷರು. ತಾನೇ ಪ್ರಬಲ ಒಕ್ಕಲಿಗ ನಾಯಕ ಅಂತ ಸಾಧಿಸಲು ಅವರ ನಡುವೆ ಪೈಪೋಟಿ ನಡೆಯುತ್ತಿದೆಯೇ? ಎಂದು ಡಿಕೆ ಸುರೇಶ್ ರನ್ನು ಕೇಳಿದಾಗ ಅವರು, ಒಕ್ಕಲಿಗ ನಾಯಕತ್ವ ಯಾರದೇ ಸೊತ್ತಲ್ಲ, ಇಲ್ಲಿರೋದು ಒಕ್ಕಲಿಗ ಸಮುದಾಯ ನಾಯಕತ್ವದ ಪ್ರಶ್ನೆ ಅಲ್ಲ ಎಂದು ಮಾಹಿತಿಯನ್ನು ನೀಡಿದರು.

ಒಕ್ಕಲಿಗರು ಸ್ವಾಭಿಮಾನಿಗಳು ಮತ್ತು ಯಾವ ಸರ್ಕಾರಕ್ಕೆ ಬೆಂಬಲಿಸಬೇಕು ಅನ್ನೋದನ್ನು ಚೆನ್ನಾಗಿ ತಿಳಿದಿದ್ದಾರೆ ಎಂದ ಸುರೇಶ್; ನಿನ್ನೆ ಶಿವಕುಮಾರ್ ಹೇಳಿದ್ದು, ಹಿಂದೆ ತಮ್ಮ ಸರ್ಕಾರ ಪತನವಾಗಲು ಕಾರಣರಾದವರನ್ನು ಶ್ರೀಗಳ ಬೇಟಿಗೆ ಕರೆದೊಯ್ದ ವಿಚಾರವನ್ನು, ಎಂದರು.

ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದಾರೆ, ಎಲ್ಲ ಸಮುದಾಯಗಳನ್ನು ಜೊತೆಯಾಗಿ ಕರೆದೊಯ್ಯುವ ಜವಾಬ್ದಾರಿ ಅವರ ಮೇಲಿದೆ. ಕುಮಾರಸ್ವಾಮಿ ಅವರು ಹೇಳೋದೆಲ್ಲ ಸತ್ಯವೇ? ಅಸಲಿಗೆ ದೇವೇಗೌಡರ ಕುಟುಂಬಕ್ಕೆ ದಶಕಗಳಿಂದ ಶಿವಕುಮಾರ್ ಕುಟುಂಬದೊಂದಿಗೆ ಹಗೆತನವಿದೆ, ಅದರೆ ತಮ್ಮ ಕುಟುಂಬ ಯಾವತ್ತೂ ಹಗೆ ಸಾಧಿಸಿಲ್ಲ, ಅವರು ಅಧಿಕಾರದಲ್ಲಿದ್ದಾಗ ಎಲ್ಲ ರೀತಿಯ ಸಹಕಾರ ನೀಡಿದ್ದೇವೆ, ನಮ್ಮ ಹೇಳಿಕೆಗಳನ್ನು ಅವರು ಬೇರೆ ರೀತಿಯಲ್ಲಿ ವ್ಯಾಖ್ಯಾನಿಸಿದರೆ ತಾವೇನೂ ಮಾಡಲಾಗಲ್ಲ ಎಂದು ಸೂಚಿಸಿದರು.

Nimma Suddi
";