This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Politics NewsState News

ರಾಜ್ಯ ಸರ್ಕಾರದ ಡೈರಕ್ಷನ್ ನಿಂದ ಪೊಲೀಸರಿಗೆ ಆರೋಪಿಗಳ ಜಾಡು ಸಿಕ್ಕಿಲ್ಲ, ಎನ್ ಐ ಎ ಬಂದಿದ್ದರಿಂದ ಆರೋಪಿಗಳ ಪತ್ತೆಯಾಗಿದೆ: ಆರ್.ಅಶೋಕ್

ರಾಜ್ಯ ಸರ್ಕಾರದ ಡೈರಕ್ಷನ್ ನಿಂದ ಪೊಲೀಸರಿಗೆ ಆರೋಪಿಗಳ ಜಾಡು ಸಿಕ್ಕಿಲ್ಲ, ಎನ್ ಐ ಎ ಬಂದಿದ್ದರಿಂದ ಆರೋಪಿಗಳ ಪತ್ತೆಯಾಗಿದೆ: ಆರ್.ಅಶೋಕ್

ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟದ ಆರೋಪಿಗಳು ಕಾಂಗ್ರೆಸ್ ಸಿಸ್ಟರ್ ಮಮತಾ ಬ್ಯಾನರ್ಜಿ ರಾಜ್ಯದಲ್ಲಿ ಸಿಕ್ಕಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದರು. ಇಂತಹ ಕೃತ್ಯ ಎಸಗಿದ ಆರೋಪಿಗಳು ಏಕೆ ಕಾಂಗ್ರೆಸ್ ಅಥವಾ ಅವರ ಸ್ನೇಹಿತರು ಅಧಿಕಾರದಲ್ಲಿರುವ ರಾಜ್ಯವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ದೇಶದ ಭದ್ರತೆಗೆ ಒಂದು ರೀತಿಯ ಅಪಾಯ. ರಾಮೇಶ್ವರಂ ಘಟನೆ ರಾಜ್ಯವನ್ನು ತಲ್ಲಣಗೊಳಿದೆ. ಕಾಂಗ್ರೆಸ್ ಅವಧಿಯಲ್ಲಿ ಪದೇ ಪದೇ ಇಂತಹ ಘಟನೆ ನಡೆಯುತ್ತಿದೆ. ಎನ್ ಐ ಎ ಇವರನ್ನು ಬಂಧಿಸುವ ಮೂಲಕ ಭವಿಷ್ಯದ ಅಪಾಯ ತಪ್ಪಿಸಿದೆ ಎಂದರು.

ರಾಜ್ಯ ಸರ್ಕಾರದ ಡೈರಕ್ಷನ್ ನಿಂದ ಪೊಲೀಸರಿಗೆ ಆರೋಪಿಗಳ ಜಾಡು ಸಿಕ್ಕಿಲ್ಲ. ಎನ್ ಐ ಎ ಬಂದಿದ್ದರಿಂದ ಆರೋಪಿಗಳ ಪತ್ತೆಯಾಗಿದೆ. ಇವಾಗ ಕಾಂಗ್ರೆಸ್ ಸಿಸ್ಟರ್ ಮಮತಾ ಬ್ಯಾನರ್ಜಿ ರಾಜ್ಯದಲ್ಲಿ ಆರೋಪಿಗಳ ಪತ್ತೆಯಾಗಿದ್ದಾರೆ. ಬೇರೆ ಬೇರೆ ರಾಜ್ಯಗಳಿಗೆ ಹೋಗಬಹುದಿತ್ತು. ಆದರೆ ಹೋಗಿಲ್ಲ. ತೊಂದರೆ ಆಗಲ್ಲ ಎಂದು ವೆಸ್ಟ್ ಬಂಗಾಳಕ್ಕೆ ಹೋಗಿದ್ದಾರೆ ಎಂದು ತಿರುಗೇಟು ನೀಡಿದರು.

ಬಿಜೆಪಿ ಕಾರ್ಯಕರ್ತ ಪ್ರಮುಖ ಸಾಕ್ಷಿಯಾಗಿದ್ದಾರೆ. ಅವರನ್ನು ಎನ್ ಐ ಎ ವಿಚಾರಣೆ ನಡೆಸಿದಾಗ ಕಾಂಗ್ರೆಸ್ ದೊಡ್ಡ ವಿವಾದ ಮಾಡಿತ್ತು. ಸಾಯಿ ಪ್ರಸಾದ್ ಗೆ ಪ್ರಾಣ ಭಯ ಇದೆ. ದೇಶದ ಬಗ್ಗೆ ಕಾಳಜಿ ಇದ್ದಿದ್ದರೆ ಅವರು ಸಾಯಿಪ್ರಸಾದ್ ಹೆಸರು ಬಹಿರಂಗಪಡಿಸಬಾರದಿತ್ತು ಎಂದರು.

‘ ರಾಮೇಶ್ವರಂ ಕೆಫೆ ಸ್ಫೋಟದ ಆರೋಪಿಗಳ ಬಂಧನದಿಂದ ನಾಡಿನ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.ಘಟನೆಯ ಸ್ಥಳಕ್ಕೆ ಹೋಗಿದ್ದ ಡಿಕೆಶಿ ತಿರುಚುವ ಪ್ರಯತ್ನ ಮಾಡಿದ್ದರು. ಅಲ್ಪಸಂಖ್ಯಾತರ ವಿರುದ್ಧ ಆರೋಪ ಬಂದರೆ ಓಟ್ ಬ್ಯಾಂಕ್ ಖಾಲಿ ಆಗುತ್ತದೆ ಎಂಬ ಆತಂಕ ಕಾಂಗ್ರೆಸ್ ನಾಯಕರದ್ದು. ಅದಕ್ಕಾಗಿ ಪ್ರಕರಣ ತಿರುಚುವ ಪ್ರಯತ್ಮ ನಡೆಸಿದ್ದಾರೆ.

ವ್ಯಾಪಾರ ವ್ಯಾಜ್ಯ ಕಾರಣಕ್ಕಾಗಿ ಸ್ಫೋಟ ನಡೆದಿದೆ ಎಂದು ಹೇಳಿದ್ದರು. ಪೊಲೀಸರು ಅದೇ ಜಾಡಿನಲ್ಲಿ ತನಿಖೆ ನಡೆಸಿದ್ದರು. ಕುಕ್ಕರ್ ಬ್ಲ್ಯಾಸ್ಟ್ ಆದಾಗ ಬ್ರದರ್ಸ್ ಅಂದಿದ್ದರು. ಇಂತಹ ಘಟನೆ ಮುಚ್ಚಿ ಹಾಕುವ ಪ್ರಯತ್ನ ಸರ್ಕಾರ‌ ನಡೆಸುತ್ತಿದೆ’ ಎಂದು ಆರೋಪಿಸಿದ್ದಾರೆ.

Nimma Suddi
";