This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Crime NewsLocal NewsNational NewsState News

ಕಾರ್ ಗೆ ಬೆಂಕಿ:ಸುಟ್ಟು ಕರಕಲಾದ ವ್ಯಕ್ತಿ

ಕಾರ್ ಗೆ ಬೆಂಕಿ:ಸುಟ್ಟು ಕರಕಲಾದ ವ್ಯಕ್ತಿ

ಬಾಗಲಕೋಟೆ

ಚಲಿಸುತ್ತಿದ್ದ ಕಾರ್ ಒಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಬೆಂಕಿಯ ಕೆನ್ನಾಲಿಗೆಗೆ  ಕಾರ್ ನಲ್ಲಿದ್ದ ವ್ಯಕ್ತಿ ದೇಹ ಸಂಪೂರ್ಣ ಸುಟ್ಟು ಕರಕಲಾದ ಘಟನೆ ಶನಿವಾರ ಸಂಜೆ ನಡೆದಿದೆ.

ಹುನಗುಂದ ತಾಲೂಕಿನ ಚಿಕ್ಕಮಾಗಿ ಗ್ರಾಮದ ಗುತ್ತಿಗೆದಾರ ಸಂಗನಗೌಡ ಕೃಷ್ಣಗೌಡ ಪಾಟೀಲ (55) ಮೃತ ವ್ಯಕ್ತಿ.

ಶನಿವಾರ ಸಂಜೆ ಬಾಗಲಕೋಟೆಯಿಂದ ಸ್ವಗ್ರಾಮ ಚಿಕ್ಕಮಾಗಿಗೆ ತೆರಳುವಾಗ ಬಾಗಲಕೋಟೆ ತಾಲೂಕಿನ ಇಂಗಳಗಿ ಗ್ರಾಮದ ಬಳಿ ಈ ಘಟನೆ ನಡೆದಿದೆ.

ವಾಹನದಲ್ಲಿ ಅಕಸ್ಮಾತ್ ಬೆಂಕಿ ಕಾಣಿಸಿಕೊಂಡು ಇಡೀ ಕಾರ್ ಗೆ ವ್ಯಾಪಿಸಿಕೊಂಡಿದೆ. ಈ ಸಂದರ್ಭದಲ್ಲಿ ಕಾರ್ ನಲ್ಲಿದ್ದ ವ್ಯಕ್ತಿಗೆ ಹೊರಬರಲು ಅಗದೇ ಅಲ್ಲಿಯೇ ಇಡೀ ದೇಹ ಸುಟ್ಟು ಕರಕಲಾಗಿದೆ. ಬೇಸಿಗೆ ತಾಪಮಾನ ಹೆಚ್ಚಾಗಿದ್ದರಿಂದ ಕಾರ್ ನಲ್ಲಿ ಎಸಿ ಜೋರಾಗಿತ್ತು ಎಂಬ ಮಾತು ಕೇಳಿ ಬಂದಿದೆ.

ಮೃತ ವ್ಯಕ್ತಿ ಸಂಗನಗೌಡ ಈ ಹಿಂದೆ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ್ದು ಕಬ್ಬಡ್ಡಿ ಕೋಚ್ ಆಗಿಯೂ ಕಾರ್ಯ ನಿರ್ವಸಿಹಿದ್ದರು ಎಂದು ತಿಳಿದು ಬಂದಿದೆ.

Nimma Suddi
";