This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Politics NewsState News

ಆರ್ ಎಸ್ ಎಸ್, ಹಿಂದೂ ಮಹಾಸಭಾಗಳ ನಿಜ ಬಣ್ಣವನ್ನು ಬಯಲಿಗೆ ಎಳೆದವರು ನೆಹರು: ದಿನೇಶ್ ಗುಂಡೂರಾವ್

ಆರ್ ಎಸ್ ಎಸ್, ಹಿಂದೂ ಮಹಾಸಭಾಗಳ ನಿಜ ಬಣ್ಣವನ್ನು ಬಯಲಿಗೆ ಎಳೆದವರು ನೆಹರು: ದಿನೇಶ್ ಗುಂಡೂರಾವ್

ಬೆಂಗಳೂರು: ಆರ್ ಎಸ್ ಎಸ್, ಹಿಂದೂ ಮಹಾಸಭಾಗಳ ನಿಜ ಬಣ್ಣವನ್ನು ಬಯಲಿಗೆ ಎಳೆದವರು ನೆಹರು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ನೆಹರು ಅವರ ಪುಣ್ಯಸ್ಮರಣೆ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದ ಸಾಮಾಜಿಕ ಅಂತರಂಗದ ಶಕ್ತಿಯನ್ನು ಜಗತ್ತಿಗೆ ತೊರಿಸಿದವರು.

ಜೈಲಿನಲ್ಲಿ ಇದ್ದಾಗ ಇಂದಿರಾ ಗಾಂಧಿ ಅವರಿಗೆ ಪತ್ರ ಬರೆದು ಅದರ ಮೂಲಕ ಪ್ರಪಂಚದ ಆಗು ಹೋಗುಗಳ ಬಗ್ಗೆ ಬರೆದು ಜ್ಞಾನ ನೀಡಿದವರು. ಭಗತ್ ಸಿಂಗ್ ಅವರು ಸಹ ನೆಹರು ಅವರ ಅಭಿಮಾನಿ. ದೇಶದ ಜನರಿಗೆ ಆಕರ್ಷಕ ಶಕ್ತಿ ಇವರು. ಇವರ ಮಾತುಗಳು ಜನರನ್ನು ಹೆಚ್ಚು ಸೆಳೆಯುತ್ತಿದ್ದವು. ರೋಮಾಂಚನಕಾರಿ ಭಾಷಣಕಾರ ಇವರು ಎಂದರು.

ಆರ್ ಎಸ್ ಎಸ್, ಹಿಂದೂ ಮಹಾಸಭಾಗಳ ನಿಜ ಬಣ್ಣವನ್ನು ಬಯಲಿಗೆ ಎಳೆದವರು ನೆಹರು. ನೆಹರು ಅವರನ್ನು ಟೀಕಿಸುವ ಹಕ್ಕು ಇವರಿಗೆ ಇಲ್ಲ. ಇವರು ಕೇವಲ ಪ್ರಧಾನಿಗಳಲ್ಲ ತತ್ವಜ್ಞಾನಿ, ಇತಿಹಾಸಕಾರ, ಹೋರಾಟಗಾರ ಬಹುಮುಖ ಪ್ರತಿಭೆಯುಳ್ಳ ನಾಯಕ ಎಂದು ಬಣ್ಣಿಸಿದರು.

ಇವರದು ಅತ್ಯಂತ ವೈಜ್ಞಾನಿಕವಾಗಿ ಮುಂದಕ್ಕೆ ತರಲು ಪ್ರಯತ್ನ ಪಟ್ಟವರು. ನೆಹರು ಅವರನ್ನು ಟೀಕೆ ಮಾಡುವವರು ಸ್ವಾತಂತ್ರ್ಯ ಹೋರಾಟದಲ್ಲು ಭಾಗವಹಿಸದೆ ಈ ದೇಶದ ಸಂಪತ್ತನ್ನು ಕೊಳ್ಳೆ ಹೊಡೆಯಲು ಬಿಟ್ಟವರು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

Nimma Suddi
";