This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

National NewsPolitics NewsState News

ಕೇಂದ್ರದಲ್ಲಿ ಇಂಡಿ ಮೈತ್ರಿ ಕೂಟದ ಸರ್ಕಾರವು ಅಧಿಕಾರಕ್ಕೆ ಬಂದ ಕೂಡಲೇ ದೇಶದ ಆರ್ಥಿಕತೆಯನ್ನು ಪುನಾರಂಭ ಮಾಡಲಿದೆ: ರಾಹುಲ್ ಗಾಂಧಿ

ಕೇಂದ್ರದಲ್ಲಿ ಇಂಡಿ ಮೈತ್ರಿ ಕೂಟದ ಸರ್ಕಾರವು ಅಧಿಕಾರಕ್ಕೆ ಬಂದ ಕೂಡಲೇ ದೇಶದ ಆರ್ಥಿಕತೆಯನ್ನು ಪುನಾರಂಭ ಮಾಡಲಿದೆ: ರಾಹುಲ್ ಗಾಂಧಿ

ನವದೆಹಲಿ: ಅದಾನಿಯವರಿಗೆ ನೆರವಾಗಲು ಪ್ರಧಾನಿ ಮೋದಿ ಅವರನ್ನ ದೇವರೇ ಕಳಿಸಿದ್ದಾರೆ ಎಂದಿದ್ದಾರೆ. ಪ್ರಧಾನಿ ಮೋದಿ ಅವರನ್ನು ದೇವರು ಬಡವರಿಗೆ ನೆರವಾಗಲು ಕಳಿಸಿಲ್ಲ ಎಂದು ರಾಹುಲ್ ಗಾಂಧಿ ಟಾಂಗ್ ಕೊಟ್ಟಿದ್ದಾರೆ.

‘ತಮ್ಮನ್ನು ದೇವರೇ ಕಳಿಸಿದ್ದಾರೆ’ ಎಂಬ ಭಾವನೆ ಇದೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದ ಪ್ರಧಾನಿ ಮೋದಿ ಅವರಿಗೆ ತಿರುಗೇಟು ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇತ್ತೀಚೆಗೆ ಎರಡು ಮಾಧ್ಯಮ ಸಂದರ್ಶನಗಳಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ ಎರಡರಲ್ಲೂ ತಮ್ಮನ್ನು ಮಹತ್ಕಾರ್ಯವೊಂದಕ್ಕೆ ದೇವರೇ ಕಳಿಸಿದ್ದಾರೆ ಎಂದಿದ್ದರು. ಅಷ್ಟೇ ಅಲ್ಲ, ಸಂದರ್ಶನವೊಂದರಲ್ಲಿ ತಾವು ಜೈವಿಕ ಜನನಕ್ಕಿಂತಾ ದೈವಿಕ ಕಾರ್ಯವೊಂದಕ್ಕೆ ಆವಿರ್ಭವಿಸಿರುವ ಭಾವನೆ ವ್ಯಕ್ತಪಡಿಸಿದ್ದರು.

ಇದೇ ವಿಚಾರದ ಕುರಿತಾಗಿ ಪ್ರಧಾನಿ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಅವರು ದೈವಿಕ ಪ್ರೇರಣೆಯ ಕಥೆಗಳನ್ನು ಈಗ ಏಕೆ ಕಟ್ಟುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಬಹುಶಃ ಚುನಾವಣೆ ಬಳಿಕ ಅದಾನಿ ಜೊತೆಗಿನ ನಂಟಿನ ಕುರಿತಾಗಿ ಇಡಿ ಪ್ರಶ್ನೆ ಮಾಡಲಿದೆ. ಆ ವೇಳೆ ಪ್ರಧಾನಿ ಮೋದಿ ಅವರು ಇವೆಲ್ಲವೂ ದೈವಿಕ ಕಾರ್ಯ ಎಂದು ಹೇಳುತ್ತಾರಾ? ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.

ಪ್ರಧಾನಿ ಮೋದಿ ಅವರ ಸಂದರ್ಶನ ಪ್ರಸಾರವಾದ ಬಳಿಕ ವಿಪಕ್ಷಗಳು ಮುಗಿಬಿದ್ದಿದ್ದವು. ಅಷ್ಟೇ ಅಲ್ಲ, ಕಾಂಗ್ರೆಸ್ ನಾಯಕರು ಚುನಾವಣೆ ನಂತರ ಏನಾಗಲಿದೆ ಎಂದೂ ಭವಿಷ್ಯ ನುಡಿದಿದ್ದರು. ಲೋಕಸಭಾ ಚುನಾವಣೆ ಬಳಿಕ ಜಾರಿ ನಿರ್ದೇಶನಾಲಯವು ಪ್ರಧಾನಿ ಮೋದಿ ಅವರನ್ನು ಭ್ರಷ್ಟಾಚಾರ ವಿಚಾರವಾಗಿ ಪ್ರಶ್ನೆಗೆ ಒಳಪಡಿಸಲಿದ್ದು, ಈ ವೇಳೆ ಅವರು ತಮ್ಮ ಎಲ್ಲಾ ಕೃತ್ಯಗಳೂ ದೈವಿಕ ಪ್ರೇರಿತ ಎಂದು ಹೇಳಲಿ ಎಂದು ಕಾಲೆಳೆದಿದ್ದವು ಎಂದು ವಿವರಿಸಿದರು.

ಕೇಂದ್ರದಲ್ಲಿ ಇಂಡಿ ಮೈತ್ರಿ ಕೂಟದ ಸರ್ಕಾರವು ಅಧಿಕಾರಕ್ಕೆ ಬಂದ ಕೂಡಲೇ ದೇಶದ ಆರ್ಥಿಕತೆಯನ್ನು ಪುನಾರಂಭ ಮಾಡಲಿದೆ ಎಂದೂ ರಾಹುಲ್ ಗಾಂಧಿ ವಿವರಿಸಿದರು.

Nimma Suddi
";