This is the title of the web page
This is the title of the web page

Live Stream

October 2024
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Politics NewsState News

ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖೆ ನಡೆಸಲು ಎಸ್ಐಟಿ ಇದೆ, ಅದು ನೋಡಿಕೊಳ್ಳುತ್ತದೆ: ಡಿಕೆ ಶಿವಕುಮಾರ್

ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖೆ ನಡೆಸಲು ಎಸ್ಐಟಿ ಇದೆ, ಅದು ನೋಡಿಕೊಳ್ಳುತ್ತದೆ: ಡಿಕೆ ಶಿವಕುಮಾರ್

ರಾಮನಗರ: ಬಿಜೆಪಿ ಅಧಿಕಾರದಲ್ಲಿದ್ದಾಗ ಯಾವುದೋ ಒಂದು ಸಮಾರಂಭದ ಹಿನ್ನೆಲೆಯಲ್ಲಿ ಉಡುಪಿ ಮತ್ತು ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಬಿಜೆಪಿ ವಸ್ತ್ರಗಳನ್ನು ತೊಡಿಸಿದ್ದು ಅರ್ ಅಶೋಕ ಅವರಿಗೆ ಮರೆತಂತಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕುಹುಕವಾಡಿದರು.

ಇಂದು ರಾಮನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಶುಕ್ರವಾರ ಬೆಳಗಿನ ಜಾವ ಎಸ್ಐಟಿಯಿಂದ ಬಂಧನಕ್ಕೊಳಗಾದ ಪ್ರಜ್ವಲ್ ರೇವಣ್ಣ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದರು.

ಅವರು ನೀಡಿದ ಪ್ರತಿಕ್ರಿಯೆ ನಿರ್ವಿಕಾರ ಭಾವದಿಂದ ಕೂಡಿತ್ತು. ಪ್ರಜ್ವಲ್ ಬಂಧನದ ಸುದ್ದಿ ಇಂದು ಬೆಳಗ್ಗೆ ಪೇಪರಲ್ಲಿ ಓದಿದೆ. ಪ್ರಕರಣದ ತನಿಖೆ ನಡೆಸಲು ಎಸ್ಐಟಿ ಇದೆ, ಅದು ನೋಡಿಕೊಳ್ಳುತ್ತದೆ, ನಾನ್ಯಾಕೆ ತಲೆಕೆಡಿಸಿಕೊಳ್ಳಲಿ ಎಂದು ಅವರು ಹೇಳಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರನ್ ಅವರ ಸಾವಿನ ಬಗ್ಗೆ ಈಶ್ವರಪ್ಪ ಅವರು; ತಾನು ಸಚಿವನಾಗಿದ್ದಾಗ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಸುದ್ದಿ ಹೊರಬೀಳುತ್ತಿದಂತೆಯೇ ರಾಜೀನಾಮೆ ಸಲ್ಲಸಿದ್ದೆ, ಆದರೆ ಬಿ ನಾಗೇಂದ್ರ ಇನ್ನೂ ಯಾಕೆ ರಾಜೀನಾಮೆನ ಸಲ್ಲಿಸಿಲ್ಲ ಎಂದು ಕೇಳಿದ್ದಾರೆ ಅಂತ ಹೇಳಿದ್ದಕ್ಕೆ ಶಿವಕುಮಾರ್, ತಾನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಸ್ತವಾಂಶವನ್ನು ತಿಳಿಯುವ ಪ್ರಯತ್ನ ಮಾಡುತ್ತಿದ್ದೇವೆ, ಅದು ಮುಗಿದ ಬಳಿಕ ಒಂದು ನಿರ್ಧಾರ ತೆಗೆದುಕೊಳ್ಳುತ್ತೇವೆ, ಸರ್ಕಾರ ಯಾರನ್ನೂ ರಕ್ಷಣೆ ಮಾಡುತ್ತಿಲ್ಲ ಎಂದು ಶಿವಕುಮಾರ್ ಹೇಳಿದರು.

 

";