This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

National NewsState News

ಹೈಕೋರ್ಟ್: ಹಂಚಿಕೆಯಾಗಿದ್ದ ಸೈಟ್‌ ನೋಂದಣಿಯಾಗಿದ್ದರೆ ಮಾತ್ರವೇ ಮಾನ್ಯ, ಹಕ್ಕು ಲಭ್ಯ

ಹೈಕೋರ್ಟ್: ಹಂಚಿಕೆಯಾಗಿದ್ದ ಸೈಟ್‌ ನೋಂದಣಿಯಾಗಿದ್ದರೆ ಮಾತ್ರವೇ ಮಾನ್ಯ, ಹಕ್ಕು ಲಭ್ಯ

ಬೆಂಗಳೂರು: ಕೇವಲ ನಿವೇಶನ ಹಂಚಿಕೆ, ನಿವೇಶನದ ಮೇಲೆ ಯಾವುದೇ ಹಕ್ಕು ನೀಡುವುದಿಲ್ಲ. ಹಂಚಿಕೆಯಾಗಿದ್ದ ನಿವೇಶನ ನೋಂದಣಿಯಾಗಿದ್ದರೆ ಮಾತ್ರ ಅದರ ಮೇಲಿನ ಹಕ್ಕು ಲಭ್ಯವಾಗುತ್ತದೆ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ ಎಂದು ಮಾಹಿತಿ ತಿಳಿದು ಬಂದಿದೆ‘

ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ, ” ಕೆ.ತಿಪ್ಪಣ್ಣ ಅವರಿಗೆ ನಿವೇಶನ ಹಂಚಿಕೆಯಾಗಿತ್ತು. ಆದರೆ, ಅದರ ನೋಂದಣಿಗೂ ಮುನ್ನ ಅವರು ಸಾವನ್ನಪ್ಪಿದ್ದಾರೆ ಮತ್ತು ಆನಂತರ ಪ್ರಾಧಿಕಾರಕ್ಕೆ ಹಣ ಪಾವತಿಸಿದ ನಂತರ ಮೂಲ ಹಂಚಿಕೆದಾರರ ಪತ್ನಿ ಹೆಸರಿಗೆ ನಿವೇಶನ ನೋಂದಣಿ ಮಾಡಿಕೊಡಲಾಗಿದೆ. ಹಾಗಾಗಿ, ಹಿಂದೂ ಉತ್ತರದಾಯಿತ್ವ ಕಾಯಿದೆ ಸೆಕ್ಷನ್‌ 8ರ ಪ್ರಕಾರ ಆ ನಿವೇಶನದ ಮೂಲ ಮಾಲೀಕರು ಲಕ್ಷ್ಮಮ್ಮ ಅವರಾಗಾಗಲಿದ್ದಾರೆ. ಕೆ.ತಿಪ್ಪಣ್ಣಗೆ ನಿವೇಶನ ಹಂಚಿಕೆ ಮಾಡಲಾಗಿತ್ತಾದರೂ ನೋಂದಣಿ ಆಗಿಲ್ಲವಾದ್ದರಿಂದ ಅವರಿಗೆ ಆಸ್ತಿ ಮೇಲೆ ಯಾವುದೇ ಹಕ್ಕು ಹೊಂದಿರುವುದಿಲ್ಲ,” ಎಂದು ಹೇಳಿದೆ.

”ಆಸ್ತಿಯು ಕುಟುಂಬದ ಮುಖ್ಯಸ್ಥ ಕೆ.ತಿಪ್ಪಣ್ಣ ಅವರಿಗೆ ಹಂಚಿಕೆಯಾಗಿತ್ತು. ಅವರ ಪುತ್ರ ಕೆ.ಮಹದೇವ ಅವರ ಒಪ್ಪಿಗೆ ಮೇರೆಗೆ ಬಿಡಿಎ ನಿವೇಶನವನ್ನು ತಿಪ್ಪಣ್ಣ ಅವರ ಪತ್ನಿ ಹೆಸರಿಗೆ ರಿಜಿಸ್ಟರ್‌ ಮಾಡಿಕೊಟ್ಟಿದೆ. ಆದ್ದರಿಂದ ಸಹ ಪಾಲುದಾರರಾದ ಕೆ.ಲಕ್ಷ್ಮಮ್ಮ ಇಡೀ ಆಸ್ತಿಯನ್ನು ವಿಲ್‌ ಮಾಡಲು ಬರುವುದಿಲ್ಲ. ಎಲ್ಲಾ ಕಾನೂನುಬದ್ಧ ವಾರಸುದಾರರಿಗೆ ಆಸ್ತಿ ಹಂಚಿಕೆಯಾಗಬೇಕು” ಎಂದು ನ್ಯಾಯಾಲಯ ಆದೇಶಿಸಿದೆ.

ಬಿಡಿಎಯಿಂದ ನಗರದ ಕೆ.ತಿಪ್ಪಣ್ಣ ಅವರಿಗೆ 1976-77ರಲ್ಲಿನಿವೇಶನ ಹಂಚಿಕೆಯಾಗಿತ್ತು. ಆದರೆ, ಅದು ನೋಂದಣಿಯಾಗುವ ಮುನ್ನವೇ ಅವರು ಸಾವನ್ನಪ್ಪಿದ್ದರು. ಆದರೂ, ಕಾನೂನುಬದ್ಧ ವಾರಸುದಾರರೆಲ್ಲಾಸೇರಿ ತಿಪ್ಪಣ್ಣ ಅವರ ಪತ್ನಿಗೆ ನಿವೇಶನ ನೀಡಲು ಒಪ್ಪಿದ್ದರು. ಅದರಂತೆ ಬಿಡಿಎ 1998ರಲ್ಲಿತಿಪ್ಪಣ್ಣ ಪತ್ನಿ ಲಕ್ಷ್ಮಮ್ಮಗೆ ನೋಂದಣಿ ಮಾಡಿಕೊಟ್ಟಿತ್ತು. ಲಕ್ಷ್ಮಮ್ಮ ಆ ಆಸ್ತಿಯನ್ನು ಕೆ.ಚಿದಾನಂದ ಎಂಬುವರಿಗೆ ವಿಲ್‌ ಮಾಡಿದ್ದು, ಅದನ್ನು ಅಧಿವರು ಅನುಭವಿಸುತ್ತಿದ್ದಾರೆ.

ಅರ್ಜಿದಾರರಾದ ಸೊಸೆ ನಿವೇಶನ ಖರೀದಿಗೆ ಹಣ ನೀಡಿದ್ದರೂ ಆಕೆಗೆ ಆಸ್ತಿಯ ಮೇಲೆ ಹಕ್ಕು ಹೊಂದಿರುವುದಿಲ್ಲ. ಒಂದು ವೇಳೆ ಆಸ್ತಿಯನ್ನು ಪಾಲು ಮಾಡಿದರೂ ತಿಪ್ಪಣ್ಣನ ಪುತ್ರನಾದ ಕೆ.ಮಹದೇವ ಜೀವಂತವಾಗಿರುವುದರಿಂದ ಅದರಲ್ಲಿಆತನ ಪತ್ನಿಗೆ ಪಾಲು ಬರುವುದಿಲ್ಲ. ಆದ್ದರಿಂದ ಅಧೀನ ನ್ಯಾಯಾಲಯ ಅರ್ಜಿ ವಜಾಗೊಳಿಸಿರುವ ಕ್ರಮ ಸರಿಯಾಗಿಯೇ ಇದೆ ಎಂದು ನ್ಯಾಯಪೀಠ ಹೇಳಿದೆ.

ಅಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಆದಿಲಕ್ಷ್ಮಮ್ಮ ಮತ್ತಿತರರು ಸಲ್ಲಿಸಿದ್ದ ಅರ್ಜಿ ಪಧಿರಿಧಿಶೀಧಿಲಿಧಿಸಿದ ನ್ಯಾ. ಎಸ್‌.ರಾಚಯ್ಯ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

Nimma Suddi
";