This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Entertainment NewsState News

ರೈತ ಪುಟ್ಟರಾಜು ಅವರ ರಾಸುಗಳಿಗೆ ನಟ ವಿನೋದ್‌ರಾಜ್‌ ಉಚಿತವಾಗಿ ಮೇವು ವಿತರಣೆ

ರೈತ ಪುಟ್ಟರಾಜು ಅವರ ರಾಸುಗಳಿಗೆ ನಟ ವಿನೋದ್‌ರಾಜ್‌ ಉಚಿತವಾಗಿ ಮೇವು ವಿತರಣೆ

ಕೆ.ಆರ್‌.ಪೇಟೆ: ತಾಲೂಕಿನ ಸಿಂದಘಟ್ಟ ಗ್ರಾಮದ ಪ್ರಗತಿಪರ ರೈತ ಪುಟ್ಟರಾಜು ಅವರ ರಾಸುಗಳಿಗೆ ನಟ ವಿನೋದ್‌ರಾಜ್‌ ಉಚಿತವಾಗಿ ಮೇವು ವಿತರಣೆ ಮಾಡಿ ಮಾದರಿಯಾಗಿದ್ದಾರೆ. ಬೇಸಿಗೆಯಲ್ಲಿ ಜಾನುವಾರಿಗೆ ಮೇವಿಲ್ಲದೆ ತೀವ್ರ ಸಂಕಷ್ಟದಲ್ಲಿದ್ದ ರೈತ ಪುಟ್ಟರಾಜು ಅವರಿಗೆ ಸುಮಾರು 1 ಲಕ್ಷ ರೂ. ಬೆಲೆಬಾಳುವ ಒಂದು ಲಾರಿ ಲೋಡ್‌ ಒಣ ಹುಲ್ಲನ್ನು ಖರೀದಿ ಮಾಡಿ ವಿತರಿಸಿದ್ದಾರೆ ಎಂದು ಮಾಹಿತಿ ಬೆಳಕಿಗೆ ಬಂದಿದೆ.

ಈ ವೇಳೆ ನಟ ವಿನೋದ್‌ ರಾಜ್‌ ಮಾತನಾಡಿ, ‘‘ದೈವ ಸ್ವರೂಪವಾದ, ಮಾತು ಬಾರದ ಜಾನುವಾರು ಮತ್ತು ಪ್ರಾಣಿಗಳಿಗೆ ಸಹಾಯ ಮಾಡಬೇಕು ಎಂಬುದು ನನ್ನ ತಾಯಿ ಲೀಲಾವತಿ ಕಲಿಸಿಕೊಟ್ಟ ಪಾಠವಾಗಿದೆ. ಜಾನುವಾರು ಸೇವೆಗೆಂದೆ ಸುಸಜ್ಜಿತವಾದ ಒಂದು ಪಶು ಆಸ್ಪತ್ರೆಯನ್ನು ನನ್ನ ತಾಯಿ ನಿರ್ಮಿಸಿಕೊಟ್ಟಿದ್ದಾರೆ. ಪಶು, ಪಕ್ಷಿಗಳು ಹಾಗೂ ಪ್ರಾಣಿಗಳನ್ನು ಪ್ರೀತಿಸುವುದನ್ನು ನನ್ನ ತಾಯಿಯಿಂದ ಕಲಿತಿದ್ದೇನೆ. ಸ್ನೇಹಿತರ ಮೂಲಕ ವಿಚಾರ ತಿಳಿದು ನನ್ನ ಕೈಲಾದ ಸಹಾಯ ಮಾಡಿದ್ದೇನೆ,’’ ಎಂದು ಹೇಳಿದರು.

ಇತ್ತೀಚೆಗೆ ಅವರು, ಮಂಡ್ಯ ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಮೇವು ವಿತರಣೆ ಮಾಡಿದ್ದರು. ಆಗ, ಪುಟ್ಟರಾಜು ಅವರಿಗೆ ಮೇವು ಸಿಕ್ಕಿರಲಿಲ್ಲ. ಆ ಹಿನ್ನೆಲೆಯಲ್ಲಿ ಪುಟ್ಟರಾಜು ಅವರಿಗೆ ಮೇವು ಸರಬರಾಜು ಮಾಡಿದ್ದಾರೆ ಎಂದು ಮಾಹಿತಿ ಕಂಡು ಬಂದಿದೆ.

Nimma Suddi
";