This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Local NewsState News

ಗೋಡಿಹಾಳದಲ್ಲಿ ಕೃಷಿ ಚಿಂತನೆ

ಗೋಡಿಹಾಳದಲ್ಲಿ ಕೃಷಿ ಚಿಂತನೆ

ವಿಜಯಪುರ:

76ನೇ ಸ್ವಾತಂತ್ರ್ಯೋತ್ಸವ ನಿಮಿತ್ತ ಕೃಷಿ ಚಿಂತನಾ ಗೋಷ್ಠಿ, ದುಂಡು ಮೇಜಿನ ಸಭೆ, ಕವಿಗೋಷ್ಠಿ, ಸಸ್ಯ ಸಮ್ಮೇಳನ ಹಾಗೂ ರೈತ ಸಮ್ಮೇಳನ ಆ.15ರಂದು ಮಧ್ಯಾಹ್ನ 1.30ಕ್ಕೆ ಚಡಚಣ ತಾಲೂಕಿನ ಗೋಡಿಹಾಳದ ಕಲ್ಯಾಣ ನಗರದ ಆಳೂರ ತೋಟದಲ್ಲಿ ನಡೆಯಲಿದೆ.

ಚಡಚಣ ಗುರುದೇವ ಆಶ್ರಮದ ಶ್ರೀ ಯೋಗಾನಂದ ಸ್ವಾಮೀಜಿ, ವಿರಕ್ತಮಠದ ಶ್ರೀ ಷಡಕ್ಷರಿ ಸ್ವಾಮೀಜಿ, ಜ್ಞಾನಯೋಗಾಶ್ರಮದ ಜ್ಯೋತಿ ಪ್ರಕಾಶ ಸ್ವಾಮೀಜಿ, ತದ್ದೇವಾಡಿಯ ಮಹಾಂತ ಶ್ರೀಗಳು ಸಾನ್ನಿಧ್ಯ ವಹಿಸುವರು.
ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಅಧ್ಯಕ್ಷತೆ ವಹಿಸುವರು. ಇಂಡಿ ಪಿಎಲ್‌ಡಿಇ ಬ್ಯಾಂಕ್ ಅಧ್ಯಕ್ಷ ಬಿ.ಎಂ. ಕೋರೆ ಹಾಗೂ ಭೀಮಾಶಂಕರ ಸಕ್ಕರೆ ಕಾರ್ಖಾನೆ ನಿರ್ದೇಶಕ ಎಂ.ಆರ್. ಪಾಟೀಲ ಗ್ರಂಥ ಬಿಡುಗಡೆಗೊಳಿಸುವರು. ಚಡಚಣ ಠಾಣೆ ಪಿಎಸ್‌ಐ ಮಹಾದೇವ ಯಲಿಗಾರ ಸಸಿ ನೆಡುವರು. ದಾನಮ್ಮ ಪಾಟೀಲ, ಗುರುನಾಥ ಬಗಲಿ, ಮಲ್ಲನಗೌಡ ಪಾಟೀಲ, ನಾಗರಾಜ ನಿರಾಳೆ, ಸೋಮು ಬಡಗೇರ, ಎಚ್.ಎಸ್. ಪಾಟೀಲ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟಕ ಶ್ರೀಶೈಲ ಆಳೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Nimma Suddi
";