This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Politics NewsState News

ದೇಶದ ಎಲ್ಲಾ ಕಾಂಗ್ರೆಸ್ ನಾಯಕರು ಮೋದಿಯವರು ಕೊಟ್ಟ ಕೊರೋನಾ ಲಸಿಕೆಯಿಂದ ಬದುಕುಳಿದಿದ್ದಾರೆ: ಸಂಸದ ಮುನಿಸ್ವಾಮಿ

ದೇಶದ ಎಲ್ಲಾ ಕಾಂಗ್ರೆಸ್ ನಾಯಕರು ಮೋದಿಯವರು ಕೊಟ್ಟ ಕೊರೋನಾ ಲಸಿಕೆಯಿಂದ ಬದುಕುಳಿದಿದ್ದಾರೆ: ಸಂಸದ ಮುನಿಸ್ವಾಮಿ

ಮುಳಬಾಗಿಲು: ರಾಜ್ಯದಲ್ಲಿ ಜೆಡಿಎಸ್ ಪಕ್ಷ ಎಲ್ಲಿದೆ ಎಂದು ಕೇಳುವ ಸಿದ್ದರಾಮಯ್ಯನವರೇ ಜೆಡಿಎಸ್ ಪಕ್ಷ ಇಲ್ಲದೇ ಇದ್ದಿದ್ದರೆ ನೀವು ಯಾರು ಅನ್ನೋದು ರಾಜ್ಯಕ್ಕೆ ಗೊತ್ತಾಗುತ್ತಲೇ ಇರಲಿಲ್ಲ, ದೇವೇಗೌಡರು ನಿಮ್ಮನ್ನು ಸಚಿವ, ಉಪಮುಖ್ಯಮಂತ್ರಿಯನ್ನಾಗಿ ಮಾಡಿದ್ದಕ್ಕೆ ಈಗ ಕಾಂಗ್ರೆಸ್‌ನಲ್ಲಿ ಯಾರೋ ಕಟ್ಟಿದ ಕೋಟೆಯಲ್ಲಿ ರಾಜನಾಗಿ ಮೆರೆಯುತ್ತಿದ್ದೀರಿ ಅಷ್ಟೇ. ಮೊದಲು ಮೇಲೇರಿದ ಏಣಿ ಒದಿಯುವ ನೀಚ ಬುದ್ದಿ ಬಿಟ್ಟರೆ ನಿಮಗೆ ಒಳ್ಳೆಯದಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯರಿಗೆ ಸಂಸದ ಎಸ್.ಮುನಿಸ್ವಾಮಿ ತಿರುಗೇಟು ನೀಡಿದರು.

ಮುಳಬಾಗಿಲು ತಾಲೂಕಿನಲ್ಲಿ ಬಿಜೆಪಿ-ಜೆಡಿಎಸ್ ಸಮನ್ವಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿದ್ದರಾಮಯ್ಯವರಿಗೆ ಕೊರೋನಾ ಸಮಯದಲ್ಲಿ ನರೇಂದ್ರ ಮೋದಿಯವರು ಕೊಟ್ಟ ಉಚಿತ ಲಸಿಕೆ ಹಾಕದಿದ್ದರೆ ಇಷ್ಟೊತ್ತಿಗೆ ಸಿದ್ದರಾಮಯ್ಯ ಇರುತ್ತಿರಲಿಲ್ಲ, ದೇಶದ ಎಲ್ಲಾ ಕಾಂಗ್ರೆಸ್ ನಾಯಕರು ಮೋದಿಯವರು ಕೊಟ್ಟ ಕೊರೋನಾ ಲಸಿಕೆಯಿಂದ ಬದುಕುಳಿದಿದ್ದಾರೆ, ಅಲ್ಲದೇ ಕೊರೋನಾ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಪ್ರತಿಯೊಬ್ಬರ ಹಸಿವು ನೀಗಿಸಲು ಉಚಿತ ಅಕ್ಕಿ ನೀಡಿ ಜನರಿಗೆ ಆಸರೆಯಾದರು ಎಂದರು.

ಡಿ.ಕೆ.ಶಿವಕುಮಾರ್‌ರಿಗೆ ಕಾಟ ಕೊಡುತ್ತಿರುವುದು, ಡಿಕೆಶಿನ ಜೈಲಿಗೆ ಕಳುಹಿಸಿದ್ದು ಸಿದ್ದರಾಮಯ್ಯನವರೇ ಅಂತ ಸ್ವತಃ ಡಿ.ಕೆ.ಶಿವಕುಮಾರ್ ತಾಯಿಯೇ ಹೇಳಿದ್ದಾರೆ. ಈ ಎಲ್ಲಾ ದೊಂಬರಾಟಗಳಿಗೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಮತ ಚಲಾಯಿಸುವ ಮೂಲಕ ಬುದ್ಧಿ ಕಲಿಸಬೇಕು ಎಂದರು. ಶಾಸಕ ಸಮೃದ್ಧಿ ಮಂಜುನಾಥ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಜೆಡಿಎಸ್ ಪಕ್ಷವನ್ನು ನಂಬಿ ರಾಜ್ಯದಲ್ಲಿ ಮೂರು ಸ್ಥಾನಗಳನ್ನು ಬಿಟ್ಟುಕೊಟ್ಟಿದ್ದಾರೆ.ಈ ಮೂರೂ ಸ್ಥಾನಗಳಲ್ಲಿ ಜೆಡಿಎಸ್ ಅನ್ನು ಗೆಲ್ಲಿಸಿಕೊಟ್ಟರೆ ಕುಮಾರಣ್ಣನವರು ಮೋದಿಯವರ ಮುಂದೆ ಧೈರ್ಯವಾಗಿ ತಲೆಯೆತ್ತಿ ನಿಲ್ಲಬಹುದು ಎಂದು ಮನವಿ ಮಾಡಿದರು.

ಮೂರು ತಲೆಮಾರಿಗಾಗುವಷ್ಟು ಹಣವನ್ನು ನಾವು ಮಾಡಿಕೊಂಡಿದ್ದೇವೆ ಮತ್ತು ಅಂಬೇಡ್ಕರ್‌ರನ್ನು ಹೀನಾಯವಾಗಿ ನಡೆಸಿಕೊಂಡಿದ್ದು ಕಾಂಗ್ರೆಸ್ ಪಕ್ಷ ಎಂದು ಕಾಂಗ್ರೆಸ್ ಹಿರಿಯ ನಾಯಕ ರಮೇಶ್ ಕುಮಾರ್‌ರವರೇ ಹೇಳಿದ್ದಾರೆ, ಇದು ಕಾಂಗ್ರೆಸ್ ಪಕ್ಷದ ನಿಜವಾದ ಬಣ್ಣ, ಅದಕ್ಕಾಗಿ ಮತ ಚಲಾಯಿಸುವಾಗ ಯೋಚಿಸಿ ಮತದಾನ ಮಾಡಲು ಮನವಿ ಮಾಡಿದರು.

ಬಲಗೈ, ಎಡಗೈ ಅಂತ ಕಿತ್ತಾಡಿ ಇಡೀ ದೇಶದ ಜನರ ಮುಂದೆ ರಾಜೀನಾಮೆಯ ನಾಟಕವಾಡಿ ಕೊನೆಗೆ ಸ್ಥಳೀಯರಿಗೆ ಟಿಕೆಟ್ ಕೊಡಿಸಲು ಯೋಗ್ಯತೆ ಇಲ್ಲದೆ ಎಲ್ಲಿಯೋ ಬೆಂಗಳೂರಿನಿಂದ ಸೂಟ್ ಕೇಸ್ ವ್ಯಕ್ತಿಯನ್ನು ಕರೆತಂದಿದ್ದಾರೆ, ಇನ್ನು ಇಪ್ಪತ್ತು ದಿನಗಳಲ್ಲಿ ಆ ವ್ಯಕ್ತಿ ಓಡಾಡಿ ಸೂಟ್ ಕೇಸ್ ನಲ್ಲಿರುವ ಹಣ ಖಾಲಿ ಮಾಡಿಕೊಂಡು ಸೋತು ವಾಪಸ್ ಬೆಂಗಳೂರಿಗೆ ಓಡಿಹೋಗುತ್ತಾರೆ ಎಂದು ಭವಿಷ್ಯ ನುಡಿದರು.

";