This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

State News

ಬಿಜೆಪಿಗೆ ಮತ್ತೊಂದು ಬಂಡಾಯದ ಬಿಸಿ : ಕಿತ್ತೂರು ರಾಜ್ಯದ ವರ್ಚಸ್ವೀ ನಾಯಕ ಪಕ್ಷಕ್ಕೆ ಗುಡ್‌ಬೈ?

ಬಿಜೆಪಿಗೆ ಮತ್ತೊಂದು ಬಂಡಾಯದ ಬಿಸಿ : ಕಿತ್ತೂರು ರಾಜ್ಯದ ವರ್ಚಸ್ವೀ ನಾಯಕ ಪಕ್ಷಕ್ಕೆ ಗುಡ್‌ಬೈ?

ಮಧ್ಯ ಕರ್ನಾಟಕದ ಭಾಗವಾಗಿರುವ ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮತ್ತೆ ಜಿ.ಎಂ.ಸಿದ್ದೇಶ್ವರ ಕುಟುಂಬಕ್ಕೆ ಟಿಕೆಟ್ ನೀಡಿದ್ದನ್ನು ವಿರೋಧಿಸಿ ಅಲ್ಲಿ ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ಬಿಜೆಪಿಯ ಇನ್ನೊಂದು ಬಣ ದೊಡ್ದ ಮಟ್ಟದ ಅಸಮಾಧಾವನ್ನು ಹೊರಹಾಕುತ್ತಿದೆ.

ಮತ್ತು, ಕ್ಷೇತ್ರದ ಅಭ್ಯರ್ಥಿಯನ್ನು ಬದಲಿಸಲು ಮೂರು ದಿನಗಳ ಗಡುವನ್ನು ನೀಡಿದ್ದು, ಶಿವಮೊಗ್ಗದಲ್ಲಿ ಇಂದು ( ಮಾ 18 ) ಪ್ರಧಾನಿ ಮೋದಿಯವರ ಸಾರ್ವಜನಿಕ ಸಭೆ ನಿಗದಿಯಾಗಿದೆ, ಆದರೆ, ದಾವಣಗೆರೆ ಭಾಗದ ಕೆಲವು ಬಿಜೆಪಿ ಮುಖಂಡರು ಸಭೆಯಲ್ಲಿ ಭಾಗವಹಿಸದೇ ಇರುವ ನಿರ್ಧಾರಕ್ಕೆ ಬಂದಿದ್ದಾರೆ. ಈ ನಡುವೆ, ಲೋಕಸಭಾ ಟಿಕೆಟ್ ಆಕಾಂಕ್ಷಿಯಾಗಿದ್ದ ರಮೇಶ್ ಕತ್ತಿ ಕೇಸರಿ ಪಕ್ಷವನ್ನು ತೊರೆಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕೋಡಿಯಿಂದ ಸ್ಪರ್ಧಿಸಿದ್ದ ರಮೇಶ್ ಕತ್ತಿ, ಕಾಂಗ್ರೆಸ್ ಪ್ರತಿಸ್ಪರ್ಧಿ ಗಣೇಶ್ ಹುಕ್ಕೇರಿ ವಿರುದ್ದ 78,509 ಮತಗಳ ಭಾರೀ ಅಂತರದಿಂದ ಸೋಲುಂಡಿದ್ದರು. ಇದಾದ ನಂತರ ಇವರು ಚಿಕ್ಕೋಡಿ ಅಥವಾ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಟಿಕೆಟಿನಿಂದ ಸ್ಪರ್ಧಿಸಲು ಭಾರೀ ಲಾಬಿ ನಡೆಸಿದ್ದರು.

ಚಿಕ್ಕೋಡಿಯಲ್ಲಿ ಹಾಲೀ ಸಂಸದ ಅಣ್ಣಾ ಸಾಹೇಬ ಜೊಲ್ಲೆಯವರಿಗೆ ಬಿಜೆಪಿ ಈಗಾಗಲೇ ಟಿಕೆಟ್ ಘೋಷಿಸಿಯಾಗಿದೆ. ಇನ್ನು, ಬೆಳಗಾವಿಯಲ್ಲಿ ಬಹುತೇಕ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅಭ್ಯರ್ಥಿಯಾಗಲಿದ್ದಾರೆ. ಅಲ್ಲಿನ ಹಾಲೀ ಸಂಸದೆ ಮತ್ತು ಶೆಟ್ಟರ್ ಕುಟುಂಬದವರೇ ಆದ ಮಂಗಳಾ ಅಂಗಡಿಗೆ ಟಿಕೆಟ್ ಕೈತಪ್ಪಲಿದೆ ಎಂದು ಮಾಹಿತಿ ಕಂಡು ಬಂದಿದೆ.

";