This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Local NewsPolitics NewsState News

ಚುನಾವಣೆ ಮುಗಿಯುವವರೆಗೆ ಅಪ್ಪ-ಮಗನ ರಿಪೇರಿ ಕೆಲಸವನ್ನು ಬೇರೆಯವರಿಗೆ ವಹಿಸಿಕೊಟ್ಟಿದ್ದೇನೆ: ಬಸನಗೌಡ ಯತ್ನಾಳ್

ಚುನಾವಣೆ ಮುಗಿಯುವವರೆಗೆ ಅಪ್ಪ-ಮಗನ ರಿಪೇರಿ ಕೆಲಸವನ್ನು ಬೇರೆಯವರಿಗೆ ವಹಿಸಿಕೊಟ್ಟಿದ್ದೇನೆ: ಬಸನಗೌಡ ಯತ್ನಾಳ್

ಉಡುಪಿ: ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಪರ ಉಡುಪಿಯಲ್ಲಿ ಪ್ರಚಾರ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಸನಗೌಡ ಪಾಟೀಲ್ ಯತ್ನಾಳ್ ಅಪ್ಪ ಮಗನನ್ನು ರಿಪೇರಿ ಮಾಡುವ ಕೆಲಸವನ್ನು ಲೋಕಸಭಾ ಚುನಾವಣೆ ಮುಗಿಯುವವರೆಗೆ ಬೇರೆಯವರಿಗೆ ವಹಿಸಿಕೊಟ್ಟಿರುವೆ ಎಂದು ಹೇಳಿದರು. ಪರೋಕ್ಷವಾಗಿ ಅವರು ಆ ಕೆಲಸವನ್ನು ಕೆಎಸ್ ಈಶ್ವರಪ್ಪ ಮಾಡುತ್ತಿದ್ದಾರೆ ಎಂದರು.

ಸಾಮಾನ್ಯವಾಗಿ ಜಾತಿ ಬಗ್ಗೆ ಮಾತಾಡದ ಕಾಂಗ್ರೆಸ್ ನಾಯಕರು ಮೈಸೂರು-ಕೊಡಗು ಕ್ಷೇತ್ರದ ಅಭ್ಯರ್ಥಿಯ ಜಾತಿಯನ್ನೇ ಮುಖ್ಯ ಅಸ್ತ್ರವಾಗಿ ಬಳಸುತ್ತಿರುವ ಬಗ್ಗೆ ಕೇಳಿದಾಗ ಯತ್ನಾಳ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಈಗ ಯಾವುದೇ ನೈತಿಕತೆ ಉಳಿದಿಲ್ಲ, ಮೊದಲಿಂದಲೂ ಹಿಂದೂತ್ವನ್ನು ವಿರೋಧ ಮಾಡಿಕೊಂಡ ಬಂದ ಅವರು ತಮ್ಮ ಕುರ್ಚಿ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಎಂದರು.

ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಮತ್ತು ಮೈಸೂರು-ಕೊಡಗು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಉಮೇದುವಾರರು ಸೋತರೆ ಸಿದ್ದರಾಮಯ್ಯ ತಲೆದಂಡ ನಿಶ್ಚಿತ, ಹಾಗಾಗೇ ಅವರು ಹತಾಶರಾಗಿ ತಮ್ಮ ಕೈಹಿಡಿಯಿರಿ ಅಂತ ಮತದಾರರ ಬಳಿ ಅವಲತ್ತುಕೊಳ್ಳುತ್ತಿದ್ದಾರೆ ಎಂದು ತಿಳಿದರು.

Nimma Suddi
";