ನಿಮ್ಮ ಸುದ್ದಿ ಬಾಗಲಕೋಟೆ
ಮಾನವ ತಾನು ಅನುಭವಿಸುವ ಎಲ್ಲ ಸುಖ ಸೌಭಾಗ್ಯಗಳಿಗೂ ಮುಖ್ಯ ಕಾರಣ ದೇಹಾರೋಗ್ಯ ಭಾಗ್ಯ., ಅಂತಹ ದೇಹಾರೋಗ್ಯವು ಯೋಗಾಸನ ಮಾಡುವುದರಿಂದ ಲಭ್ಯವಾಗುತ್ತದೆ ಎಂದು ಇಳಕಲ್ನ ಯೋಗಪಟು ಗಿರೀಶ ಲದ್ವಾ ಹೇಳಿದರು.
ಇಳಕಲ್ ತಾಲೂಕಿನ ಗುಡೂರ (ಎಸ್ಸಿ) ಗ್ರಾಮದ ಜನಸ್ನೇಹಿ ಸ್ನೇಹಿತರ ಬಳಗ ಹಾಗೂ ಗ್ರಾಮದ ಯುವಕರ ಸಹಯೋಗದೊಂದಿಗೆ ನಡೆದ ಯೋಗ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದ ಅವರು, ಯೋಗವೆಂದರೆ ಇದು ಕೇವಲ ಶರೀರದ ಕಾಯಿಲೆಗಳ ಅವಶ್ಯಕತೆಗೆ ಅಷ್ಟೇ ಅಲ್ಲ. ಆತ್ಮದಲ್ಲಿ ಪರಮಾತ್ಮನನ್ನು ಕಾಣುವ ಸಾಧನೆ ಇದರಲ್ಲಿ ಅಡಕವಾಗಿದೆ. ಮತ್ತು ಯೋಗಾಸನ ಮಾಡುವುದರಿಂದ ಯಾವುದೇ ರೋಗಗಳು ನಮ್ಮತ್ತ ಸುಳಿಯುವುದಿಲ್ಲ ಎಂದು ಹೇಳಿದರು.
ಮುಖ್ಯ ಅತಿಥಿಗಳಾದ ಹೊಳಿಯಪ್ಪ ರಾಂಪೂರ, ಶಶಿಧರ ರಾಯಬಾಗಿ, ವೀರಣ್ಣ ಮಾಯಾಚಾರಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಗ್ರಾಮದ ಯೋಗ ಪಟುಗಳಾದ ರಮೇಶ ಹಾದಿಮನಿ, ನಾಗರಾಜ ಮಾಯಾಚಾರಿ ಹಾಗೂ ಶಿಕ್ಷಕರಾದ ಶರಣಪ್ಪ ತಾಳಿಕೋಟಿ ಅವರಿಗೆ ಬಳಗದ ವತಿಯಿಂದ ಸನ್ಮಾನಿಸಲಾಯಿತು. ಶಿಬಿರಾರ್ಥಿಗಳಿಗೆ ಯೋಗ ನಡಿಗೆ ಆರೋಗ್ಯದ ಕಡೆಗೆ ಎಂಬ ಪುಸ್ತಕ ವಿತರಿಸಲಾಯಿತು.
ಚಿದಾನಂದ ರುದ್ರಾಪೂರಮಠ, ಧರ್ಮಣ್ಣ ಕೂಗಡಿ, ಬಸವರಾಜ ಗಾರವಾಡ, ರಫೀಕ ಇಟಗಿ, ರಿಯಾಜ ತಾಳಿಕೋಟಿ, ಶಶಿಕಾಂತ ಅಡಿಹಾಳ, ರವಿ ಜಡ್ರಾಂಕುAಟಿ, ಭೀಮಸಿ ಹಡಪದ, ಗ್ರಾಮದ ಯುವಕರು, ಶೀಬಿರಾರ್ಥಿಗಳು ಇದ್ದರು.