This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Local NewsPolitics NewsState News

ಬಿಜೆಪಿ, ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ.

ಬಿಜೆಪಿ, ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ.

ಸಚಿವ ಆರ್. ಬಿ ತಿಮ್ಮಾಪೂರ ಭವಿಷ್ಯ

ಕೊಪ್ಪಳ: ಲೋಕಸಭೆ ಚುನಾವಣೆ ವೇಳೆಗೆ ಬಿಜೆಪಿ, ಜೆಡಿಎಸ್ ನ 12 ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಅಬಕಾರಿ ಸಚಿವ ಆರ್.ಬಿ ತಿಮ್ಮಾಪೂರ ಹೇಳಿದರು.

ನಗರದಲ್ಲಿ ಲೋಕಸಭೆ ಚುನಾವಣೆ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪಕ್ಷದ ಸಭೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.

ಬಿಜೆಪಿ ಹಾಗೂ ಜೆಡಿಎಸ್ ಕೆಲವು ಶಾಸಕರು ಬೇಸತ್ತಿದ್ದಾರೆ‌. ಚುನಾವಣೆ ಸಮಯದಲ್ಲಿ ಬರುವುದಾಗಿ ತಿಳಿಸಿದ್ದಾರೆ ಎಂದರು.

ಬರ ಪರಿಹಾರದ ವಿಚಾರವಾಗಿ, ರಾಜ್ಯ ಸರಕಾರದಿಂದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಸ್.ಡಿ.ಆರ್.ಎಫ್ ನಿಂದ ಕೊಡಬೇಕಾದದ್ದನ್ನು ಕೊಡುತ್ತಿದ್ದೇವೆ. ಆದರೆ, ಕೇಂದ್ರದಿಂದ ಪರಿಹಾರ ಬರುತ್ತಿಲ್ಲ. ಅವರು ರಾಜಕಾರಣ ಮಾಡುತ್ತಿದ್ದಾರೆ. ಈ ಕುರಿತು ನಳಿನ್ ಕುಮಾರ್ ಕಟೀಲ್ ಮಾತನಾಡುವುದು ಬಿಟ್ಟು ಪರಿಹಾರ ಕೊಡಿಸಲಿ ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ಅವರಿಗೆ ‘ರಾಜ್ಯದಲ್ಲಿ ಹುಚ್ಚು ದೊರೆ ಆಡಳಿತ ವಿದೆ’ ಎಂಬ ಕೆ.ಎಸ್ ಈಶ್ವರಪ್ಪ ಹೇಳಿಕೆ ವಿಚಾರವಾಗಿ, ‘ಈಶ್ವರಪ್ಪನ ನಡವಳಿಕೆ ಜನರು ಒಪ್ಪಲ್ಲ. ಅವನ ನಾಲಿಗೆ ಕಂಡು ಜನ ಅವನನ್ನೇ ಬೈಯುತ್ತಾರೆ ಎಂದ ಅವರು, ಚುನಾವಣೆ ವಿಷಯವಾಗಿ, ಈ ಬಾರಿ ಕೊಪ್ಪಳ ಲೋಕಸಭೆ ನಿಶ್ಚಿತವಾಗಿ ಗೆಲ್ಲುತ್ತೇವೆ ಎಂದರು.

";