This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Politics NewsState News

ಬಿಜೆಪಿ ನಾಯಕರಿಗೆ ಗೊತ್ತಿಲ್ಲ. ಅವರು ತೆಗೆದುಕೊಳ್ಳುವ ತೀರ್ಮಾನ ಬಗ್ಗೆ ಯಾವುದೇ ದೂಸ್ರಾ ಮಾತು ಇರಲ್ಲ : ಆರ್ ಅಶೋಕ

ಬಿಜೆಪಿ ನಾಯಕರಿಗೆ ಗೊತ್ತಿಲ್ಲ. ಅವರು ತೆಗೆದುಕೊಳ್ಳುವ ತೀರ್ಮಾನ ಬಗ್ಗೆ ಯಾವುದೇ ದೂಸ್ರಾ ಮಾತು ಇರಲ್ಲ : ಆರ್ ಅಶೋಕ

ಬೆಂಗಳೂರು: ಸುಮಲತಾ ಅಂಬರೀಶ್ ಅವರಿಗೆ ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡುವ ಕುರಿತು ರಾಜ್ಯದ ನಾಯಕರಿಗೆ ಏನೇ ಪ್ರಶ್ನೆ ಕೇಳಿದರು ಅವರಿಂದ ಹಾರಿಕೆಯ ಉತ್ತರ ಬರುತ್ತದೆ ಇಲ್ಲವೇ ಅದನ್ನು ಮೆತ್ತಗೆ ಕೇಂದ್ರದ ವರಿಷ್ಠರ ಮೇಲೆ ಜಾರಿಸಿಬಿಡುತ್ತಾರೆ ಎಂದು ಮಾಹಿತಿ ತಿಳಿದು ಬಂದಿದೆ.

ಇವತ್ತು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ರಾಜ್ಯ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿರುವ ಅರ್ ಅಶೋಕ ಹಾರಿಕೆಯ ಉತ್ತರ ನೀಡುವ ಬದಲು ಬಾಲು ಈಗ ದೆಹಲಿ ವರಿಷ್ಠರ ಕೋರ್ಟ್ ನಲ್ಲಿದೆ ಎಂದು ತಿಳಿಸಿದರು.

ಕೇಂದ್ರ ಸಂಸದೀಯ ಮಂಡಳಿ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ, ಅದಕ್ಕಿಂತ ಮಿಗಿಲಾಗಿ ತಾನೇನೂ ಹೇಳುವುದು ಸಾಧ್ಯವಿಲ್ಲ ಎಂದು ಅಶೋಕ ಹೇಳಿದರು. ವಿಷಯ ಸ್ಪಷ್ಟವಾಗಿದೆ, ಸುಮಲತಾ ಅವರು ಮಂಡ್ಯ ಟಿಕೆಟ್ ಬಗ್ಗೆ ಕೇಂದ್ರದ ನಾಯಕರೊಂದಿಗೆ ಮಾತಾಡಿದರು.

ಅವರ ನಡುವೆ ನಡೆದಿರುವ ಮಾತುಕತೆಯ ವಿವರ ರಾಜ್ಯ ಬಿಜೆಪಿ ನಾಯಕರಿಗೆ ಗೊತ್ತಿಲ್ಲ. ಅವರು ತೆಗೆದುಕೊಳ್ಳುವ ತೀರ್ಮಾನ ಬಗ್ಗೆ ಯಾವುದೇ ದೂಸ್ರಾ ಮಾತು ಇರಲ್ಲ ಎಂದು ವಿವರಿಸಿದರು.

Nimma Suddi
";