This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Politics NewsState News

ಬಿಜೆಪಿಯವರ ನಡವಳಿಕೆ ನನಗೆ ಹರ್ಟ್‌ ಆಗಿದೆ,ಇದುವರೆಗೂ ಒಬ್ಬರು ನನ್ನನ್ನು ಮಾತನಾಡಿಸಿಲ್ಲ ; ಸಂಗಣ್ಣ ಕರಡಿ ಕಿಡಿ

ಬಿಜೆಪಿಯವರ ನಡವಳಿಕೆ ನನಗೆ ಹರ್ಟ್‌ ಆಗಿದೆ,ಇದುವರೆಗೂ ಒಬ್ಬರು ನನ್ನನ್ನು ಮಾತನಾಡಿಸಿಲ್ಲ ; ಸಂಗಣ್ಣ ಕರಡಿ ಕಿಡಿ

ಕೊಪ್ಪಳ: ನಗರದ ಶಿವಶಾಂತವೀರ ಸಭಾಂಗಣದಲ್ಲಿ ಮಾ.21ರಂದು ಬೆಳಗ್ಗೆ 11 ಗಂಟೆಗೆ ಕಾರ್ಯಕರ್ತರ, ಬೆಂಬಲಿಗರ ಸಭೆ ಕರೆಯಲಾಗಿದ್ದು, ಅಲ್ಲಿ ಚರ್ಚಿಸಿದ ಬಳಿಕ ಮುಂದಿನ ನಿರ್ಧಾರ ಸ್ಪಷ್ಪಪಡಿಸುವೆ. ಬಿಜೆಪಿಯವರ ನಡವಳಿಕೆ ನನಗೆ ಹರ್ಟ್‌ ಆಗಿದೆ. ಇದುವರೆಗೂ ಒಬ್ಬರು ನನ್ನನ್ನು ಮಾತನಾಡಿಸಿಲ್ಲ ಎಂದು ಸಂಸದ ಸಂಗಣ್ಣ ಕರಡಿ ತಿಳಿಸಿದರು.

ನಗರದ ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಕೆಟ್ ತಪ್ಪಿರುವುದರಿಂದ ಕೊಪ್ಪಳ‌ ಲೋಕಸಭಾ ಕ್ಷೇತ್ರದ 8 ಕ್ಷೇತ್ರದ ಕಾರ್ಯಕರ್ತರು, ಮುಖಂಡರು ನಮಗೆ ಅನ್ಯಾಯವಾಗಿದೆ, ನಿಮ್ಮ ಮುಂದಿನ ನಡೆ ಏನು ಎಂದು ಬಂದು ಪ್ರಶ್ನಿಸುತ್ತಿದ್ದಾರೆ. ಹೀಗಾಗಿ ಗುರುವಾರ ಕಾರ್ಯಕರ್ತರ, ಬೆಂಬಲಿಗರ ಅಭಿಪ್ರಾಯ ಪಡೆಯಲಾಗುವುದು ಎಂದರು.

ಎರಡು ಬಾರಿ ಸಂಸದನಾಗಿ ಅನೇಕ ಕೆಲಸ ಮಾಡಿದ್ದರೂ ಟಿಕೆಟ್ ನೀಡಲಿಲ್ಲ. ಕೊನೆಗೆ ಟಿಕೆಟ್ ನೀಡದಿದ್ದರೂ ಅದಕ್ಕೆ ಕಾರಣ ಕೊಡಲಿಲ್ಲ. ಕನಿಷ್ಠ ಟಿಕೆಟ್ ತಪ್ಪಿದ ಬಳಿಕ ಈವರೆಗೆ ನನ್ನನ್ನು ಕರೆದು ಮಾತನಾಡಿಸಲಿಲ್ಲ. ಸೌಜನ್ಯಕ್ಕೂ ಕರೆ ಮಾಡಲಿಲ್ಲ. ದೊಡ್ಡನಗೌಡರು ಮನೆಗೆ ಬಂದಾಗ ಈ ಕುರಿತು ಪ್ರಶ್ನೆ ಮಾಡಿದ ಬಳಿಕ ಅವರು, ವಿಜಯೇಂದ್ರಗೆ ತಿಳಿಸಿದ ಮೇಲೆ ಸಂಘಟನಾ ಕಾರ್ಯದರ್ಶಿ ರಾಜೇಶ ಕರೆ ಮಾಡಿದರು ಎಂದು ವಿವರಿಸಿದರು.

ಈ ವೇಳೆ ರಾಜಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಬಿಎಸ್ ಯಡಿಯೂರಪ್ಪ ಕೂಡ ಮಾತನಾಡಿದ್ದು, , ದೊಡ್ಡನಗೌಡರು ಹೇಳಿದ ಮೇಲೆ ಇವರು ಕರೆ ಮಾಡಿದ್ದಾರೆ. ಅವರಿಗೆ ಕನಿಷ್ಠ ಸೌಜನ್ಯಕ್ಕೂ ಕರೆ ಮಾಡಬೇಕು ಎಂದು ಅನಿಸದಿದ್ದರೇ ಹೇಗೆ..? ಎಂದು ಅಭಿಪ್ರಾಯ ತಿಳಿಸಿದರು.

";