This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

State News

ಈಶ್ವರಪ್ಪ ಅವರು ಹೇಳಿಕೊಂಡಿರುವ ನೋವನ್ನು ಪಕ್ಷದ ವರಿಷ್ಠರಿಗೆ ತಿಳಿಸುತ್ತೇನೆ: ಸಿಟಿ ರವಿ

ಈಶ್ವರಪ್ಪ ಅವರು ಹೇಳಿಕೊಂಡಿರುವ ನೋವನ್ನು ಪಕ್ಷದ ವರಿಷ್ಠರಿಗೆ ತಿಳಿಸುತ್ತೇನೆ: ಸಿಟಿ ರವಿ

ಬೆಂಗಳೂರು: ಹಿರಿಯ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪರ ಬೆಂಗಳೂರು ಮನೆಗೆ ಬಿಜೆಪಿ ನಾಯಕರು ಭೇಟಿ ನೀಡುತ್ತಿರೋದು ಯಾಕೆ ಅಂತ ಎಲ್ಲರಿಗೂ ಗೊತ್ತು. ಮಗ ಕಾಂತೇಶ್ ಗೆ ಟಿಕೆಟ್ ಸಿಗದ ಕಾರಣ ಭ್ರಮಮಿರಸನಗೊಂಡಿದ್ದಾರೆ ಮತ್ತು ಬೇಸರ ಕೂಡ ಆಗಿದೆ ಈಶ್ವರಪ್ಪರನ್ನು ಸಮಾಧಾನಪಡಿಸಲು ಸಿಟಿ ರವಿ ಮತ್ತು ಡಿವಿ ಸದಾನಂದ ಗೌಡ ಇಂದು ಮಾಜಿ ಸಚಿವನ ಬೆಂಗಳೂರು ನಿವಾಸಕ್ಕೆ ದೌಡಾಯಿಸಿದ್ದರು ಎಂದು ಮಾಹಿತಿ ತಿಳಿದು ಬಂದಿದೆ.

ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ರವಿ, ಕಳೆದ 4 ದಶಕಗಳಿಂದ ಪಕ್ಷದ ಸಂಘಟನೆಯಲ್ಲಿ ತೊಡಗಿ ಅದನ್ನು ಕಟ್ಟಿ ಬೆಳೆಸುವುದರಲ್ಲಿ ಈಶ್ವರಪ್ಪ ದೊಡ್ಡ ಪಾತ್ರ ನಿರ್ವಹಿಸಿದ್ದಾರೆ, ಟಿಕೆಟ್ ಸಿಗದಿರುವದು ಸಹಜವಾಗೇ ಅವರಲ್ಲಿ ನಿರಾಸೆ ಮೂಡಿಸಿದೆ, ತಮ್ಮ ನೋವನ್ನು ಅವರು ತೋಡಿಕೊಂಡಿದ್ದಾರೆ, ಅದನ್ನು ವಿಜಯೇಂದ್ರ ಮತ್ತು ಪಕ್ಷದ ವರಿಷ್ಠರಿಗೆ ತಿಳಿಸುವ ಕೆಲಸ ತಾನು ಮಾಡೋದಾಗಿ ಹೇಳಿದರು.

ತಾವೆಲ್ಲ ಸಿದ್ಧಾಂತಕ್ಕಾಗಿ ಬಿಜೆಪಿಯನ್ನು ಆರಿಸಿಕೊಂಡಿದ್ದು, ಕಳೆದ 10 ವರ್ಷಗಳ ಅವಧಿಯಲ್ಲಿ ಭಾರತ ಹಿಂದೆಂದೂ ಕಾಣದ ಅಭಿವೃದ್ಧಿಯನ್ನು ಕಂಡಿದೆ, ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಕೆಲಸವನ್ನು ಇಡೀ ವಿಶ್ವವೇ ಬೆರಗುಗಣ್ಣಿಂದ ನೋಡುತ್ತಿದೆ. ಅವರನ್ನು ಪುನಃ ಪ್ರಧಾನಿಯಾಗಿ ಮಾಡಲು ಮತ್ತು ಬಿಜೆಪಿಯನ್ನು ಅಧಿಕಾರಕ್ಕೆ ತರಲು ತಾವೆಲ್ಲ ಅದೇ ನಿಷ್ಠೆಯಿಂದ ಶ್ರಮಿಸುವುದಾಗಿ ರವಿ ತಿಳಿಸಿದರು.

Nimma Suddi
";