This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Education NewsLocal NewsState News

ಸಮಾನತೆಯ ಸಮಾಜದಲ್ಲಿ ಮಹಿಳೆಗೆ ಅಗೌರವ: ಕಳವಳ

ಸಮಾನತೆಯ ಸಮಾಜದಲ್ಲಿ ಮಹಿಳೆಗೆ ಅಗೌರವ: ಕಳವಳ

ರಾಮ ಮನಗೂಳಿ ವೇದಿಕೆ(ಬಾಗಲಕೋಟೆ):

ಪ್ರಸ್ತುತ ಸಮಾಜದಲ್ಲಿ ಸಮಾನತೆ ಇದ್ದರೂ ಮಹಿಳೆಯರಿಗೆ ಎಲ್ಲಾ ಕ್ಷೇತ್ರದಲ್ಲಿ ಪ್ರಾತಿನಿಧ್ಯ ಕಡಿಮೆ ಇದೆ. ಇಂದಿಗೂ ಮಹಿಳೆಯನ್ನು ಅಗೌರವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಜಾಸ್ಮೀನ ಕಿಲ್ಲೇದಾರ ಕಳವಳ ವ್ಯಕ್ತಪಡಿಸಿದರು.

ನವನಗರ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ಹಮ್ಮಿಕೊಂಡಿರುವ ಬಾಗಲಕೋಟೆ ಜಿಲ್ಲಾ ೧೧ನೇ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇಯ ದಿನದ ಕಾರ್ಯಕ್ರಮದಲ್ಲಿ ಮಹಿಳಾಗೋಷ್ಠಿಯಲ್ಲಿ ಅವರು ಮಾತನಾಡಿದರು

ಇಂದಿಗೂ ಬಾಲ್ಯವಿವಾಹ, ಹೆಣ್ಣು ಭ್ರ‍್ರೂಣಹತ್ಯೆ ಪ್ರಕರಣಗಳು ಕಂಡು ಬರುತ್ತಿವೆ. ಹೆಣ್ಣು ಎಂದರೆ ಸೆರಗಿನ ಕೆಂಡವಾಗಿ ಭಾಸವಾಗುತ್ತದೆ. ಹೀಗಾಗಿ ಪುರಷ ಪ್ರಧಾನ ವ್ಯವಸ್ಥೆ ಮಹಿಳೆಯ ಬೆಳೆವಣಿಗೆಗೆ ಆಧ್ಯತೆ ನೀಡಬೇಕು. ಮಹಿಳೆಯ ಸಾಮರ್ಥ್ಯ ಅರ್ಹತೆ ಅನುಗುಣವಾಗಿ ಸಮಾಜದಲ್ಲಿ ಸ್ಥಾನಮಾನಗಳು ಸಿಗಬೇಕು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಕ್ಷಿತಾ ಭ. ಈಟಿ ಮಾತನಾಡಿ, ಮಹಿಳೆ ಇಂದಿಗೂ ಪುರುಷನ ಅಡಿಯೊಳಗಡೆ ಕೆಲಸ ನಿರ್ವಹಿಸುವ ವ್ಯವಸ್ಥೆ ಇದೆ. ಅವಳು ಸಮಾಜದಲ್ಲಿ ಸ್ವತಂತ್ರವಾಗಿ ಬದಕಲು ಹಲವು ಅಡೆತಡೆಗಳು ಇಂದಿಗೂ ಜೀವಂತವಾಗಿ ಕಂಡುಬರುತ್ತದೆ ಎಂದರು.

ಡಾ.ವೀಣಾ ಕಲ್ಮಠ ಅವರು ಸಾಹಿತ್ಯ ಕ್ಷೇತ್ರದಲ್ಲಿ ಮಹಿಳಾ ಸಾಧನೆ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು. ಶ್ರೀಮತಿ ಎಚ್.ಟಿ.ಕೊಡ್ಡನ್ನವರ ಅವರು ಮಹಿಳೆಯರ ಸಬಲೀಕರಣ ಕುರಿತು ಮಾತನಾಡಿದರು. ಉಮಾ ರೇವಡಿಗಾರ, ಜಿಲ್ಲಾ ಕಸಾಪ ಮಹಿಳಾ ಪ್ರತಿನಿಧಿಗಳು ವೇದಿಕೆಯಲ್ಲಿದ್ದರು.
ವಿಜಯಶ್ರೀ ಮುರನಾಳ ಸ್ವಾಗತಿಸಿದರು. ಪ್ರಿಯಾ ಕಟ್ಟಿ ನಿರೂಪಿಸಿದರು. ಸುಶೀಲಾ ಅಣ್ಣಿಗೇರಿ ವಂದಿಸಿದರು.

Nimma Suddi
";