This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Education NewsLocal NewsNational NewsState News

ಶ್ರೀಶೈಲದಲ್ಲಿ ಬಿವಿವಿ ಸಂಘದಿಂದ ಕಲ್ಯಾಣ ಮಂಟಪದ ನಿರ್ಮಾಣ ಭೂಮಿ ಪೂಜೆ

ಶ್ರೀಶೈಲದಲ್ಲಿ ಬಿವಿವಿ ಸಂಘದಿಂದ ಕಲ್ಯಾಣ ಮಂಟಪದ ನಿರ್ಮಾಣ ಭೂಮಿ ಪೂಜೆ

ಗ್ರಾಮೀಣ ಬಾಗದ ಭಕ್ತಾಧಿಗಳ ಕಲ್ಯಾಣ ಕಾರ್ಯಗಳಿಗೆ ಮಂಗಲ ಪಂಟಪ ಭಕ್ತರ ಅನುಕೂಲ : ಚರಂತಿಮಠ

ಬಾಗಲಕೋಟೆ: ಗ್ರಾಮೀಣ ಬಾಗದ ಭಕ್ತಾಧಿಗಳ ಕಲ್ಯಾಣ ಕಾರ್ಯಗಳಿಗೆ ಸುಸಜ್ಜಿತವಾದ ಮಂಗಲ ಭವನ ಅನುಕೂಲವಾಗಲಿದೆ ಎಂದು ಮಾಜಿ ಶಾಸಕ ಬಿ.ವ್ಹಿ.ವ್ಹಿ.ಸಂಘದ ಕಾರ್ಯಧ್ಯಕ್ಷರು ತಿಳಿಸದರು.

ಅವರು ಶ್ರೀಶೈಲದಲ್ಲಿ ಬಾಗಲಕೊಟೆಯ ಪ್ರತಿಷ್ಠಿತ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಅನ್ನ ಛತ್ರದ ಆವರಣದಲ್ಲಿ ಕಲ್ಯಾಣ ಮಂಟಪ ನಿರ್ಮಾಣದ ಕಾಮಗಾರಿಯ ಭೂಮಿಪೂಜೆಯನ್ನು ನೆರವೇರಿಸಿ ಮಾತನಾಡಿದರು.

ಭಕ್ತಾಧಿಗಳ ಕಲ್ಯಾಣ ಕಾರ್ಯಗಳಿಗೆ ಅನುಕೂಲವಾಗುವ ದೃಷ್ಠಿಯಿಂದ ಸುಸಜ್ಜಿತವಾದ ಕಲ್ಯಾಣ ಮಂಟಪವನ್ನು ನಿರ್ಮಾಣ ಮಾಡಲಾಗುತ್ತಿದ್ದು, ವಾಹನಗಳಿಗಾಗಿ ಪ್ರತ್ಯೆಕ ಸ್ಥಳ, ಸುಮಾರು 10 ರೂಮಗಳು ಸೇರಿದಂತೆ ಅಡುಗೆಮನೆ. ಅತ್ಯಾಧುನಿಕ ಸಭಾಭವವನ ನಿರ್ಮಾಣ ಮಾಡಿ ಇಲ್ಲಿ ಎಲ್ಲ ತರಹದ ಸೌಲಭ್ಯ ಕಲ್ಪಿಸಲಾಗುವುದು,

ಬಾಗಲಕೋಟೆ ಜಿಲ್ಲೆಯ ಗ್ರಾಮೀಣ ಬಾಗದ ಜನರು ಸೇರಿದಂತೆ ಕರ್ನಾಟಕ,ಮಹಾರಾಷ್ಟ್ರ ತಮಿಳನಾಡು,ಕೆರಳ ಸೇರಿದಂತೆ ಬೆರೆ ಬೆರೆ ರಾಜ್ಯಗಳಿಂದ ಬರುವ ಭಕ್ತಾಧಿಗಳಿಗೆ ಅನುಕೂಲವಾಗಲಿದೆ,

ಈಗಾಗಲೆ ಶ್ರೀಶೈಲದಲ್ಲಿ ಬೃಹತ ಅನ್ನಛತ್ರ ಲೋಕಾರ್ಪಣೆ ಮಾಡಿದ್ದು, ಇಲ್ಲಿ ವಸತಿ ಸೌಲಭ್ಯ ನಿಡುವುದರ ಜೋತಗೆ ನಿತ್ಯ ಊಚಿತ ಅನ್ನದಾಸೊಹ ಜರುಗುತ್ತಿದೆ, ಇದಿಗ ಸುಸಜ್ಜಿತ ಕಲ್ಯಾಣ ಮಂಟಪ ನಿರ್ಮಾಣ ಮಾಡುತ್ತಿದ್ದೆವೆ ಎಂದರು.

ಈ ಸಂಧರ್ಭದಲ್ಲಿ
ಶ್ರೀ ಶಿವಲಿಂಗೇಶ್ವರಮಹಾಸ್ವಾಮಿಗಳು, ಬಿಜೆಪಿ ಮುಖಂಡ ಲಕ್ಷ್ಮೀ ನಾರಾಯಣ ಕಾಸಟ್, ಬಿ.ವ್ಹಿ.ವ್ಹಿ.ಸಂಘ ಕಟ್ಟಡ ವಿಭಾಗದ ಕಾರ್ಯಾಧ್ಯಕ್ಷ ಮಹೇಶ ಕಕರೆಡ್ಡಿ, ವಿಜಯ ಅಂಗಡಿ. ಬಾಬು ಕೊಳ್ಳಿ, ಬಿ.ಟಿ.ಅಂಗಡಿ ಸೇರಿದಂತೆ ಅನೇಕರು ಇದ್ದರು.

";