This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Politics NewsState News

ಉಕ್ರೇನ್ ಮತ್ತು‌ ರಷ್ಯಾ ಯುದ್ದದಲ್ಲಿ ಅಣುಬಾಂಬ್ ದಾಳಿ ತಪ್ಪಿದ್ದು ಮೋದಿ ಕಾರಣದಿಂದ: ಸಿ.ಟಿ ರವಿ

ಉಕ್ರೇನ್ ಮತ್ತು‌ ರಷ್ಯಾ ಯುದ್ದದಲ್ಲಿ ಅಣುಬಾಂಬ್ ದಾಳಿ ತಪ್ಪಿದ್ದು ಮೋದಿ ಕಾರಣದಿಂದ: ಸಿ.ಟಿ ರವಿ

ಬೆಂಗಳೂರು: ಸಿಎಂ ಸಿದ್ದರಾಮಯ್ಯಗೆ ರಾಜಕೀಯ ಅಭದ್ರತೆ ಕಾಡುತ್ತಿದೆ, ಅದಕ್ಕೆ ನಾನು ಸ್ಟ್ರಾಂಗ್ ಅಂತಿದ್ದಾರೆ ಎಂದು ಮಾಜಿ ಶಾಸಕ ಸಿ.ಟಿ ರವಿ ತಿಳಿಸಿದರು.

ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಸಿಎಂ ನಾನೇ ಸ್ಟ್ರಾಂಗ್ ಹೇಳಿದ್ದಾರೆ. ತನ್ನನ್ನು ತಾನು‌ ಸ್ಟ್ರಾಂಗ್ ಎಂದು ಹೇಳುವವರು ವೀಕ್ ಆಗಿರ್ತಾರೆ‌. ದೇಶದ ಜನರು ಹಾಗೂ ವಿಶ್ವದ ನಾಯಕರು ಮೋದಿಯನ್ನು ಪ್ರಬಲ ನಾಯಕ ಎನ್ನುತ್ತಾರೆ. ಆಸ್ಟ್ರೇಲಿಯಾ ನಾಯಕರು ಸಾರ್ವಜನಿಕವಾಗಿ ಮೋದಿ ಬಾಸ್ ಅಂದಿದ್ದರು. ಇಸ್ರೇಲ್ ಪಿಎಂ ನೀವು ನಮ್ಮ ದೇಶದಲ್ಲೂ ಚುನಾವಣೆಯಲ್ಲಿ ಗೆಲ್ಲಬಹುದು ಅಷ್ಟು ಪ್ರಸಿದ್ಧ ಇದ್ದೀರಿ ಎಂದಿದ್ದರು ಎಂಬುದನ್ನು ಉಲ್ಲೇಖಿಸಿದ್ದರು ಎಂದರು.

ಉಕ್ರೇನ್ ಮತ್ತು‌ ರಷ್ಯಾ ಯುದ್ದದಲ್ಲಿ ಅಣುಬಾಂಬ್ ದಾಳಿ ತಪ್ಪಿದ್ದು ಮೋದಿ ಕಾರಣದಿಂದ. ಕತಾರ್ ನಲ್ಲಿಮರಣದಂಡನೆಗೆ ಗುರಿಯಾದ ನೌಕಾಸೇನೆಯ ಅಧಿಕಾರಿಗಳನ್ನು ಜೈಲಿಂದ ಬಿಡಿಸಿ ಸುರಕ್ಷಿತವಾಗಿ ಕರೆದುಕೊಂಡು ಬಂದವರು ಮೋದಿ. ಉಕ್ರೇನಿಂದ ಆಪರೇಷನ್ ಗಂಗಾ ಮೂಲಕ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ‌‌ ದೇಶಕ್ಕೆ ಕರೆದುಕೊಂಡು ಬಂದರು ಎಂದು ಹೇಳಿದರು.

ಆದರೆ ಸಿಎಂ ಸಿದ್ದರಾಮಯ್ಯ ಅವರ ಪರಿಸ್ಥಿತಿ ಏನಿದೆ?‌ ನಾನೇ ಐದು ವರ್ಷ ಸಿಎಂ ಎಂದು ಹೇಳುವ, ಹೇಳಿಸಿಕೊಳ್ಳುವ ಸ್ಥಿತಿ ಸಿದ್ದರಾಮಯ್ಯದ್ದಾಗಿದೆ. ಹತ್ತು ತಿಂಗಳಲ್ಲಿ ಆಡಳಿತದ ಹಿಡಿತವೇ ಸಿಕ್ಕಿಲ್ಲ. ಅಭಿವೃದ್ಧಿಗೆ ಬಿಡಿಕಾಸು ಇಲ್ಲ ಎಂದು ಶಾಸಕರು, ಸಚಿವರು ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಸರ್ಕಾರದ ನೀತಿಯ ಪರಿಣಾಮ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ನಾವು ಯಾವ ದೇಶದಲ್ಲಿ ಇದ್ದೇವೆ ಎಂಬಷ್ಟು ಕಾನೂನು ‌ಹದಗೆಟ್ಟಿದೆ. ಕಾನೂನು‌ ಸುವ್ಯವಸ್ಥೆ ಹದಗೆಟ್ಟಿದೆ ಎಂಬುದಕ್ಕೆ ಇನ್ನೇನು‌ ಸಾಕ್ಷಿ ಬೇಕು ಎಂದರು.

ಸಿದ್ದರಾಮಯ್ಯ ಸರ್ಕಾರದಲ್ಲಿ‌ ನಗರ ನಕ್ಸಲರಿಗೆ ಆಯಕಟ್ಟಿನ ಜಾಗ ಕೊಡಲಾಗಿದ್ದು, ಇದರಿಂದ ರಾಜ್ಯದಲ್ಲಿ ನಕ್ಸಲ್ ಚಟುವಟಿಕೆ ಶುರುವಾಗಿದೆ ಎಂದು ಆರೋಪಿಸಿದರು. ಯಾವ ನಗರ ನಕ್ಸಲರಿಗೆ ಮಣೆ‌ ಹಾಕಿದೆ ಎಂಬ ಪ್ರಶ್ನೆಗೆ, ಅಕಾಡೆಮಿಗಳ ನೇಮಕಾತಿ ಪಟ್ಟಿಗಳನ್ನು ನೋಡಿ ಎಂದು ಸೂಚಿಸಿದರು.

";