This is the title of the web page
This is the title of the web page

Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

State News

ನಾಗಠಾಣದಲ್ಲಿ ಬಂಡಾರದಲ್ಲಿ ಮಿಂದೆದ್ದ ಭಕ್ತರು

ನಾಗಠಾಣದಲ್ಲಿ ಬಂಡಾರದಲ್ಲಿ ಮಿಂದೆದ್ದ ಭಕ್ತರು

ವಿಜಯಪುರ: ತಾಲೂಕಿನ ನಾಗಠಾಣ ಗ್ರಾಮದಲ್ಲಿ ಭಾನುವಾರ ನಾಗರ ಅಮಾವಾಸ್ಯೆ ನಿಮಿತ್ತ ಗೂಳಪ್ಪ ಮುತ್ಯಾ ಜಾತ್ರೆ ಅಪಾರ ಭಕ್ತ ಸಮೂಹದ ನಡುವೆ ಸಂಭ್ರಮದಿಂದ ಜರುಗಿತು.

ನಸುಕಿನ ಜಾವ 4ಗಂಟೆಗೆ ಗೂಳಪ್ಪ ಮುತ್ಯಾನ ಪಲ್ಲಕ್ಕಿಯು ಗ್ರಾಮದ ಬೀರದೇವರ ಪಲ್ಲಕ್ಕಿ, ಕಗ್ಗೋಡ ತಿಪರಾಯ ಮತ್ತು ಲಕ್ಷ್ಮೀ ದೇವರ, ತಿಡಗುಂದಿ ಬೀರದೇವರ ಪಲ್ಲಕ್ಕಿಯೊಂದಿಗೆ ಡೊಳ್ಳಿನ ವಾಲಗ, ಗೊಂಬೆ ಕುಣಿತ ಹಾಗೂ ಸಕಲ ವಾದ್ಯ ಮೇಳದೊಂದಿಗೆ ಮೆರವಣಿಗೆ ಮೂಲಕ ಹಾಲ ಹಳ್ಳಕ್ಕೆ ಹೋಗಿ ಅಲ್ಲಿ ಗಂಗೆ ಸೀತಾಳ ಮಾಡಿಕೊಂಡು ಬಜಾರ್ದಲ್ಲಿರುವ ದೇವರ ಕಟ್ಟೆಗೆ ಆಗಮಿಸಿತು. ಭಕ್ತರು ದರ್ಶನ ಪಡೆದು, ಆರತಿ ಬೆಳಗಿ, ಕಾಯಿ ಕರ್ಪೂರ ನೈವೇದ್ಯ ಅರ್ಪಿಸಿದರು.

ನಂತರ ಭವ್ಯ ಮೆರವಣಿಗೆ ಮೂಲಕ ಮೂಲ ದೇವಸ್ಥಾನಕ್ಕೆ ಬಂದು ತಲುಪುವ ಮಾರ್ಗದಲ್ಲಿ ಭಕ್ತ ಸಮೂಹ ಭಂಡಾರ, ಬರ್ಫಿ, ಉಣ್ಣೆ ಎಸೆಯುವ ದೃಶ್ಯ ಮನಮೋಹಕವಾಗಿತ್ತು.
ಜಾತ್ರೆ ನಿಮಿತ್ತ ಭಾರ ಎತ್ತುವ ಸ್ಪರ್ಧೆ, ದೇವಸ್ಥಾನದ ಆವರಣದಲ್ಲಿ ಮಾಯಮ್ಮನ ಆಟ, ಡೊಳ್ಳಿನ ಪದಗಳ ಗಾಯನ ಭಕ್ತರ ಮನಸೆಳೆಯಿತು.

ಮಹಾರಾಷ್ಟ್ರ, ಆಂಧ್ರ ಪ್ರದೇಶ, ಗೋವಾ ಹಾಗೂ ಕರ್ನಾಟಕದ ನಾನಾ ಜಿಲ್ಲೆಗಳಿಂದ ಭಕ್ತರು ಆಗಮಿಸಿದ್ದರು.

ಜಾತ್ರಾ ಸಮಿತಿಯ ತಿಪರಾಯ ಪೂಜಾರಿ, ಸಿದ್ರಾಮ ಹೊಸಟ್ಟಿ, ಹನಮಂತ ವಾಲೀಕಾರ, ಶಿವಲಿಂಗಪ್ಪ ಹಂಡಿ, ಹನುಮಂತ ಬಂಥನಾಳ, ಅಮೋಘಸಿದ್ದ ಗಿರಿಸಾಗರ, ಶ್ರೀಶೈಲ ಪೂಜಾರಿ ಸೇರಿದಂತೆ ಅನೇಕ ಸದಸ್ಯರು ಮತ್ತು ಸಾವಿರಾರು ಗ್ರಾಮಸ್ಥರಿದ್ದರು.

Nimma Suddi
";