This is the title of the web page
This is the title of the web page

Live Stream

February 2025
S M T W T F S
 1
2345678
9101112131415
16171819202122
232425262728  

| Latest Version 9.4.1 |

Crime NewsLocal NewsState News

ಡಿಸ್ಕೌಂಟ್‌ನಲ್ಲಿ ಬಂಗಾರದ ಆಮೀಷ, ವಂಚನೆ

ಡಿಸ್ಕೌಂಟ್‌ನಲ್ಲಿ ಬಂಗಾರದ ಆಮೀಷ, ವಂಚನೆ

ಖಾತೆಗೆ 8 ಲಕ್ಷ ರೂ. ಹಾಕಿಸಿಕೊಂಡು ವಂಚಕರು ಪರಾರಿ

ವಿಜಯಪುರ

ಡಿಸ್ಕೌಂಟ್‌ನಲ್ಲಿ ಬಂಗಾರ ಕೊಡಿಸುವುದಾಗಿ 8 ಲಕ್ಷ ರೂ. ಹಣ ಖಾತೆ ಹಾಕಿಸಿಕೊಂಡು ವಂಚಿಸಿದ ಘಟನೆ ನಗರದಲ್ಲಿ ನಡೆದಿದೆ.

ನಗರದ ನವರಸಪುರ ಕಾಲೊನಿ ನಿವಾಸಿ ಹುಸೇನಬಾದಷಾ ಮೋದಿನಬಾಷಾ ಸಜ್ಜಾದೆ ವಂಚನೆಗೀಡಾದವರು.

ಕೊಪ್ಪಳ ಭಾಗ್ಯ ನಗರದ ಶಶಿಧರ ಗೋವಿಂದಪ್ಪ ಪತ್ತಾರ ಹಾಗೂ ಶೇಖಯ್ಯ ಮಹಾಂತಯ್ಯ ಚಿಕ್ಕಮಠ ಎಂಬುವರೇ ಹುಸೇನ್‌ಬಾದಷಾಗೆ ವಂಚಿಸಿದ ಆರೋಪಿಗಳು.

ವಿಜಯಪುರದ ಚಾಲುಕ್ಯನಗರದ ಎಚ್‌ಡಿಎಫ್ ಸಿ ಬ್ಯಾಂಕ್ ಎಟಿಎಂನಲ್ಲಿ ಈ ಇಬ್ಬರು ಆರೋಪಿಗಳು ಹುಸೇನ್‌ಬಾದಷಾಗೆ ಕಡಿಮೆ ಡಿಸ್ಕೌಂಟ್‌ನಲ್ಲಿ ಬಂಗಾರ ಕೊಡಿಸುವುದಾಗಿ ನಂಬಿಸಿದ್ದಾರೆ.

ಅದಕ್ಕೆ ಅವರು ಒಪ್ಪಿದ್ದೇ ತಡ. 8 ಲಕ್ಷ ರೂ. ಹಣವನ್ನು ಎಚ್‌ಡಿಸಿಎಫ್ ಸಿ ಬ್ಯಾಂಕ್ ಖಾತೆ: 50200088251258 ಹಾಗೂ 50200060749082 ನಂಬರ್‌ಗಳಿಗೆ ಎಟಿಎಂ ಮೂಲಕ ಹಣ ಹಾಕಿಸಿಕೊಂಡಿದ್ದಾರೆ.

ಬಳಿಕ ಡಿಸ್ಕೌಂಟ್‌ನಲ್ಲಿ ಬಂಗಾರ ಕೊಡಿಸುತ್ತೇವೆ ಬನ್ನಿ ಎಂದು ಹುಸೇನ್‌ಬಾದಷಾ ಸಜ್ಜಾದೆ ಬೈಕ್ ಮೇಲೆ ಕುಳಿತರು. ನಂತರ ಮಲಬಾರ್ ಗೋಲ್ಡ್‌ನಲ್ಲಿ ಕೊಡಿಸುವುದಾಗಿ ಹೇಳಿ, ಬಳಿಕ ಬೈಕ್‌ನಿಂದ ಜಿಗಿದು ಪರಾರಿಯಾಗಿದ್ದಾರೆ ಎಂದು ವಂಚನೆಗೀಡಾದ ಹುಸೇನ್‌ಬಾದಷಾ ಆದರ್ಶನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Nimma Suddi
";