This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

State News

ದಾಸೋಹ ಮಠದಿಂದ ಶಿಕ್ಷಣಕ್ಕೆ ನೆರವು

ನಿಮ್ಮ ಸುದ್ದಿ ಬಾಗಲಕೋಟೆ

ಜಿಲ್ಲೆಯ ಇಳಕಲ್ ತಾಲೂಕಿನ  ಸುಕ್ಷೇತ್ರ ಸಿದ್ದನಕೊಳ್ಳದ ದಾಸೋಹ ಮಠದಿಂದ ವಿದ್ಯಾರ್ಥಿನಿಯೊಬ್ಬ ಕಲಿಕೆಗೆ ಹಣಕಾಸಿನ ನೆರವು ನೀಡಲಾಗಿದೆ.

ಸೂಳೇಬಾವಿ ಗ್ರಾಮದ ಬಿಎಸ್‌ಸಿ ನರ್ಸಿಂಗ್ ಓದುತ್ತಿರುವ ವಿದ್ಯಾರ್ಥಿ ಯಲ್ಲಪ್ಪ ಜಗ್ಗಲ ಅವರಿಗೆ ಸಿದ್ದನಕೊಳ್ಳದ ಧರ್ಮಾಕಾರಿ ಡಾ.ಶಿವಕುಮಾರ ಸ್ವಾಮೀಜಿ ಮಠದ ವತಿಯಿಂದ ೧೦ ಸಾವಿರ ರೂ.ಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ದಾಸೋಹ ಮಠ ಕೇವಲ ದಾಸೋಹಕ್ಕೆ ಮಾತ್ರ ಸೀಮಿತವಾಗದೆ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೂ ನೆರವು ನೀಡುತ್ತಿದೆ. ಇತ್ತೀಚೆಗೆ ಕಲಾ ಪೋಷಕ ಮಠವಾಗಿಯೋ ಹೊರಹೊಮ್ಮಿದೆ. ತೆರೆಮರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಲವು ಯುವ ಕಲಾವಿದರಿಗೆ ಆಸರೆಯಾಗಿ ಮುನ್ನಡೆಯುತ್ತಿದೆ. ಇದೆಲ್ಲಕ್ಕೂ ಭಕ್ತರ ಪ್ರೇರಣೆಯೇ ಕಾರಣ ಎಂದರು.

ಪಡೆದ ಹಣವನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ವಿದ್ಯಾಭ್ಯಾಸದೊಂದಿಗೆ ಮಠಕ್ಕೂ, ಕುಟುಂಬಕ್ಕೂ ಹಾಗೂ ಗ್ರಾಮಕ್ಕೂ ಹೆಸರು ತರಬೇಕೆಂದು ವಿದ್ಯಾರ್ಥಿ ಯಲ್ಲಪ್ಪನಿಗೆ ಕಿವಿ ಮಾತು ಹೇಳಿದರು.

ಕೆಲೂರಿನ ಮುಖಂಡ ಅಪ್ಪಾಸಾಹೇಬ ನಾಡಗೌಡರ, ಈರಯ್ಯ ಘಂಟಿಮಠ, ಈರಯ್ಯ ಬೆಲ್ಲದ, ಮಡಿವಾಳಯ್ಯ ಕಿತ್ತೂರ, ಬಸವರಾಜ ಗೊರವರ, ಬಸಣ್ಣ ಜುಟ್ಲದ್ ಸೇರಿದಂತೆ ಬೆನಕವಾರಿ, ಸಿದ್ದನಕೊಳ್ಳದ ಗ್ರಾಮಸ್ಥರು ಇದ್ದರು.

 

 

";