This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Politics NewsState News

ಪೊಲೀಸ್‌ ಬಿಗಿಭದ್ರತೆಯಲ್ಲೇ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಿದ ಮಾಜಿ ಸಿಎಂ: ಬೊಮ್ಮಾಯಿ ಪ್ರಚಾರದಲ್ಲಿ ಗದ್ದಲ

ಪೊಲೀಸ್‌ ಬಿಗಿಭದ್ರತೆಯಲ್ಲೇ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಿದ ಮಾಜಿ ಸಿಎಂ: ಬೊಮ್ಮಾಯಿ ಪ್ರಚಾರದಲ್ಲಿ ಗದ್ದಲ

ಹಾವೇರಿ: ಹಾವೇರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಪ್ರಚಾರ ಸಭೆ ಅಕ್ಷರಶಃ ರಣಾಂಗಣವಾಗಿತ್ತು. ಗ್ರಾಮೀಣ ಅಧ್ಯಕ್ಷ ಸೇರಿದಂತೆ ವಿವಿಧ ಘಟಕ ಪದಾಧಿಕಾರಿಗಳ ನೇಮಕ ಹಿನ್ನೆಲೆಯಲ್ಲಿ ಅಸಮಾಧಾನ ಭುಗಿಲೆದ್ದು ಆಕ್ರೋಶಕ್ಕೆ ಕಾರಣವಾಗಿ ಬೊಮ್ಮಾಯಿ ಚುಟುಕಾಗಿ ಮಾತನಾಡಿ ಪೊಲೀಸ್‌ ಬಿಗಿ ಭದ್ರತೆಯಲ್ಲೇ ಹುಬ್ಬಳ್ಳಿಗೆ ಪ್ರಯಾಣ ಬೆಳೆಸುವಂತಾಯಿತು ಎಂದು ಮಾಹಿತಿ ತಿಳಿದು ಬಂದಿದೆ.

ಪೂಜಾರ ವೇದಿಕೆ ಮೇಲೇರುತ್ತಿದ್ದಂತೆ ಕೆರಳಿದ ಕೆಲ ಮುಖಂಡರು, ಕಾರ್ಯಕರ್ತರು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಲ್ಲದೇ ಮೊದಲು ಪದಾಧಿಕಾರಿಗಳ ಬದಲಾವಣೆ ಘೋಷಿಸುವಂತೆ ಪಟ್ಟು ಹಿಡಿದು, ‘ಸಭೆ ಮಾಡಲು ಬಿಡುವುದಿಲ್ಲ’ ಎಂದು ಘೋಷಣೆ ಕೂಗಲಾರಂಭಿಸಿದರು. ಏತನ್ಮಧ್ಯೆ, ಆಕ್ರೋಶಗೊಂಡವರನ್ನು ಸಮಾಧಾನಗೊಳಿಸುವ ಮಾಜಿ ಶಾಸಕ ಶಿವರಾಜ ಸಜ್ಜನರ ಪ್ರಯತ್ನ ಕೈಗೊಡದೆ ಇದ್ದಾಗ ಬೊಮ್ಮಾಯಿ ಅವರೇ ನೇರವಾಗಿ ಮೈಕ್‌ ತೆಗೆದುಕೊಂಡು ಮಾತನಾಡಲು ಮುಂದಾದರೂ ಅವಕಾಶವೇ ಕೊಡಲಿಲ್ಲ.

ಅಭ್ಯರ್ಥಿಯಾಗಿ ಘೋಷಣೆಯಾದ ನಂತರ ಶುಕ್ರವಾರ ಜಿಲ್ಲೆಗೆ ಮೊದಲ ಬಾರಿಗೆ ಭೇಟಿ ನೀಡಿದ ಬೊಮ್ಮಾಯಿ, ರಾಣೇಬೆನ್ನೂರ ಮತ್ತು ಬ್ಯಾಡಗಿ ಹಾಗೂ ಹಾವೇರಿ ಬಿಜೆಪಿ ಕಚೇರಿಯಲ್ಲಿ ಪಕ್ಷದ ಪದಾಧಿಕಾರಿಗಳ ಜತೆ ಪ್ರಚಾರ ಸಭೆ ನಡೆಸಬೇಕಿದ್ದು, ಹಾವೇರಿ ಜಿಲ್ಲಾ ಬಿಜೆಪಿ ಕಚೇರಿಗೆ ಬೈಕ್‌ ರ‍್ಯಾಲಿ ಮೂಲಕ ಎರಡೂವರೆ ಗಂಟೆ ತಡವಾಗಿ ಆಗಮಿಸಿದಾಗ ಕೆಲವರು ಜೈಕಾರ ಮತ್ತು ಧಿಕ್ಕಾರ ಕೂಗಿದರು. ಇದೇ ವೇಳೆ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ ಮೇಲೆ ಕೆಲವರು ಹಲ್ಲೆ ಮಾಡಲು ಮುಂದಾಗಿದ್ದರಿಂದ ಬೊಮ್ಮಾಯಿ ಅವರನ್ನು ಬಿಗಿ ಭದ್ರತೆಯೊಂದಿಗೆ ವೇದಿಕೆಗೆ ಕರೆದೊಯ್ಯಲಾಯಿತು.

ಬೊಮ್ಮಾಯಿ ಹೊರ ನಡೆದ ನಂತರವೂ ಗದ್ದಲ ಮುಂದುವರಿಯಿತು.ಹಾವೇರಿ ಗ್ರಾಮೀಣ ಘಟಕದ ಅಧ್ಯಕ್ಷರ ನೇಮಕದಲ್ಲಿ ವಿರೋಧ ಇದೆ. ನನ್ನ ಬಳಿ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದು ನಿಜ. ಸರಿ ಮಾಡಿಸ್ತೇವೆ, ನಾನೂ ಸರಿ ಮಾಡ್ತೀನಿ ಎಂದು ಮಾಜಿ ಸಿಎಂ, ಹಾವೇರಿ ಬಿಜೆಪಿ ಲೋಕಸಭಾ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಸೂಚಿಸಿದರು.

Nimma Suddi
";