This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

State News

ಖಜ್ಜಿಡೋಣಿ-ಲೋಕಾಪೂರ ರೈಲು ಮಾರ್ಗಕ್ಕೆ ಶಂಕುಸ್ಥಾಪನೆ

ವರ್ಷದಲ್ಲಿ ರೈಲು ಮಾರ್ಗ ಪೂರ್ಣ : ಗದ್ದಿಗೌಡರ

ನಿಮ್ಮ ಸುದ್ದಿ ಬಾಗಲಕೋಟೆ

ಬಾಗಲಕೋಟೆ-ಕುಡಚಿ ರೈಲು ಮಾರ್ಗ ಯೋಜನೆಯ ಭಾಗವಾದ ಖಜ್ಜಿಡೋಣಿ-ಲೋಕಾಪೂರ ಹೊಸ ರೈಲು ಮಾರ್ಗದ ಕಾರ್ಯ ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದು ಸಂಸದ ಪಿ.ಸಿ.ಗದ್ದಿಗೌಡರ ತಿಳಿಸಿದರು.

ಲೋಕಾಪೂರ ಹೊರವಲಯದಲ್ಲಿ ನೈರುತ್ವ ರೇಲ್ವೆ ವತಿಯಿಂದ ಹಮ್ಮಿಕೊಂಡ ಖಜ್ಜಿಡೋಣಿ-ಲೋಕಾಪೂರ ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, 142 ಕಿ.ಮೀ ಇರುವ ಬಾಗಲಕೋಟೆ-ಕುಡಚಿ ಹೊಸ ರೈಲುಮಾರ್ಗ ಯೋಜನೆಗೆ 2010-11ರಲ್ಲಿ ಮಂಜೂರಾತಿ ದೊರೆತಿದ್ದು, ಈಗಾಗಲೇ ಬಾಗಲಕೋಟೆ-ಖಜ್ಜಿಡೋಣಿ 30 ಕಿ.ಮೀ ರೈಲು ಮಾರ್ಗ 2018ರಲ್ಲಿ ಕಾರ್ಯಾರಂಭಗೊಂಡಿದೆ. ಅದರ ಮುಂದುವರಿದ ಭಾಗವಾದ ಖಜ್ಜಿಡೋಣಿ-ಲೋಕಾಪೂರ 9 ಕಿ.ಮೀ ಮಾರ್ಗಕ್ಕೆ ಚಾಲನೆ ನೀಡಿದ್ದು, ವರ್ಷದಲ್ಲಿ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದರು.

ಲೋಕಾಪೂರ-ಯಾದವಾಡ 21 ಕಿ.ಮೀ ಮಾರ್ಗಕ್ಕೂ ಸಹ ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಒಂದೆರಡು ತಿಂಗಳಲ್ಲಿ ಕೆಲಸ ಪ್ರಾರಂಭಿಸಲಾಗುತ್ತಿದೆ ಎಂದು ರೇಲ್ವೆ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದರು. 2010-11ರಲ್ಲಿ ಬಾಗಲಕೋಟೆ-ಕುಡಚಿ ರೈಲು ಮಾರ್ಗದ ಯೋಜನೆಗೆ ಕೇಂದ್ರ ಸರಕಾರ ಶೇ.50 ರಾಜ್ಯ ಸರಕಾರ ಶೇ.50 ಅನುದಾನದಲ್ಲಿ ನಿರ್ಮಾಣಗೊಳ್ಳುವ ಈ ಕಾರ್ಯದಿಂದ ರೈತರಿಗೆ, ಉದ್ಯಮಿಗಳಿಗೆ ಅನುಕೂಲವಾಗಲಿದೆ. ಇದರಿಂದ ಈ ಭಾಗ ಅಭಿವೃದ್ದಿಹೊಂದಲಿದೆ ಎಂದರು. ಈ ಅಭಿವೃದ್ದಿ ಕಾರ್ಯಕ್ಕೆ ರೈತರು ಭೂಮಿ ನೀಡಿ ಅಭಿವೃದ್ದಿಗೆ ಕೈ ಜೋಡಿಸಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿ 140 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ 9 ಕಿ.ಮೀ ಖಜ್ಜಿಡೋಣಿ-ಲೋಕಾಪೂರ ರೈಲು ಮಾರ್ಗ ನಿರ್ಮಿಸಲಾಗುತ್ತಿದೆ. ಲೋಕಾಪೂರ ವಾಣಿಜ್ಯ ನಗರವಾಗಿ ಬೆಳೆತ್ತಿರುವದರಿಂದ ಇಲ್ಲಿ ಸುಣ್ಣ, ಸಿಮೆಂಟ್, ಹಣ್ಣು ಹಾಗೂ ಕೃತಿಯೇತರ ಬೆಳೆಗಳನ್ನು ರಪ್ತು, ಪ್ರವಾಸೋದ್ಯಮ ಅಭಿವೃದ್ದಿಗೆ ಸಹಕಾರವಾಗಲಿದ್ದು, ಆದಷ್ಟು ಬೇಗನೇ ಈ ಕಾರ್ಯ ಪೂರ್ಣಗೊಳಿಸುವುದಾಗಿ ಹೇಳಿದರು.

ಅತಿಥಿಗಳಾಗಿ ಆಗಮಿಸಿದ ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಮಾತನಾಡಿ ಬಾಗಲಕೋಟೆ-ಕುಡಚಿ ರೈಲು ಮಾರ್ಗ ಯೋಜನೆಯು ಅನೇಕ ವರ್ಷಗಳ ಕನಸಾಗಿದ್ದು, ಈ ಯೋಜನೆ ಪೂರ್ಣಗೊಂಡಲ್ಲಿ ಈ ಭಾಗದ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ. ಹಣ್ಣು ಹಂಪಲ ಸಾಗಾಣಿಕೆ, ಲೈನ್ ಸ್ಟೋನ್, ಸಿಮೆಂಟ್, ನೇಕಾರರ ಉತ್ಪನ್ನಗಳನ್ನು ಸಾಗಿಸಲು ಹಾಗೂ ಕೈಗಾರಿಕೋದ್ಯಮ ಬೆಳೆವಣಿಗೆಗೆ ಪೂರಕವಾಗಿದೆ ಎಂದರು.

ರಾಜ್ಯ ಕೈಮಗ್ಗ ಅಭಿವೃದ್ದಿ ನಿಗಮದ ಅಧ್ಯಕ್ಷ ಸಿದ್ದು ಸವದಿ, ವಿಧಾನ ಪರಿಷತ್ ಸದಸ್ಯರಾದ ಹನಮಂತ ನಿರಾಣಿ, ಪ್ರಕಾಶ ಹುಕ್ಕೇರಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ನೈರುತ್ಯ ರೇಲ್ವೆಯ ಅಪರ ವಿಭಾಗೀಯ ವ್ಯವಸ್ಥಾಪಕ ಸಂತೋಷ ಕುಮಾರ ವರ್ಮಾ, ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕಿ ಹಿರಿತಾ, ನಿರ್ಮಾಣದ ಮುಖ್ಯ ಇಂಜಿನೀಯರ್ ಮುರಳಿಕೃಷ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

";