This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Education NewsLocal NewsState News

ಸಂಸ್ಥೆಗೆ ಧನಸಹಾಯ

ಸಂಸ್ಥೆಗೆ ಧನಸಹಾಯ

ಬಾಗಲಕೋಟೆ

ಜಿಲ್ಲೆಯ ಬಾದಾಮಿಯ ಜಿ.ಎಂ.ಕಲ್ಯಾಣಶೆಟ್ಟಿ ಪದವಿ ಪೂರ್ವ ಕಾಲೇಜ್‌ನ ಪ್ರಯೋಗಾಲಯ ಸಹಾಯಕ ಬಸವರಾಜ ಪಂಚಾಕ್ಷರಿ ಕೊಣ್ಣುರ ಸಂಸ್ಥೆಗೆ ೧ ಲಕ್ಷ ರೂ ಸಹಾಯಧನ ನೀಡಿದ್ದಾರೆ.

ಸಂಸ್ಥೆಯಲ್ಲಿ ೩೮ ವರ್ಷ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಅಂಚಿನಲ್ಲಿರುವ ಅವರು ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗೆ ಅನುಕೂಲವಾಗಲೆಂದು ತಮ್ಮ ಸೋದರತ್ತೆ ದಿ.ಗಂಗವ್ವ ಕಂಟೆಪ್ಪ ರಾಮದುರ್ಗ ಸ್ಮರಣಾರ್ಥ ಸಂಸ್ಥೆಗೆ ೧ ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಈ ಮೊತ್ತದ ಠೇವಣಿಯಿಂದ ಬರುವ ಬಡ್ಡಿ ಹಣವನ್ನು ಪ್ರತಿಭಾನ್ವಿತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ಬಹುಮಾನದ ರೂಪದಲ್ಲಿ ಕೊಡಲು ಅಪೇಕ್ಷಿಸಿರುತ್ತಾರೆ.

ದೇಣಿಗೆ ನೀಡಿದ ಸಿಬ್ಬಂದಿ ಕಾರ್ಯವನ್ನು ವೀರಪುಲಕೇಶಿ ವಿದ್ಯಾವರ್ಧಕ ಸಂಸ್ಥೆ ಕಾರ್ಯಧ್ಯಕ್ಷ ಎ.ಸಿ.ಪಟ್ಟಣದ, ಆಡಳಿತ ಮಂಡಳಿ, ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯ ಪಿ.ಎಸ್.ಜವಳಿ ಹಾಗೂ ಕಾಲೇಜ್ ಸಿಬ್ಬಂದಿ ಶ್ಲಾಘಿಸಿದ್ದಾರೆ.

 

Nimma Suddi
";