This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Local NewsState News

ಸಮಸ್ತ ಪತ್ರಿಕಾ ಸಂಪಾದಕರಿಗೆ ಹಾಗೂ ಗ್ರಾಮೀಣ ಪತ್ರಕರ್ತರಿಗೆ ಸಂತಸದ ಸುದ್ದಿ

ಸಮಸ್ತ ಪತ್ರಿಕಾ ಸಂಪಾದಕರಿಗೆ ಹಾಗೂ ಗ್ರಾಮೀಣ ಪತ್ರಕರ್ತರಿಗೆ ಸಂತಸದ ಸುದ್ದಿ

ಬೆಂಗಳೂರು

ಇಂದು ಸಂಘದ ನಿಯೋಗವು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್ ರವನ್ನು ಭೇಟಿ ಮಾಡಿ ಪತ್ರಕರ್ತರ ಅನೇಕ ಸಮಸ್ಯೆಗಳನ್ನು ಅವರ ಜೊತೆ ಚರ್ಚಿಸಲಾಯಿತು. ಬಹುತೇಕ ಸಮಸ್ಯೆಗಳಿಗೆ ಉತ್ತರವನ್ನು ನೀಡಿದ್ದಾರೆ.

# ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬಹುದಿನದ ಬೇಡಿಕೆಯಾದ ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ನೀಡಬೇಕೆಂಬ ಬೇಡಿಕೆಯನ್ನು ಈ ಭಾರಿ ಈಡೇರಿಸುವುದಾಗಿ ತಿಳಿಸಿದರು ಇದಕ್ಕೆ ಬೇಕಾದ ಅನುದಾನವನ್ನು ಈ ಸಾಲಿನ ಬಜೆಟ್ ನಲ್ಲಿ ಮೀಸಲಿರಿಸಿ ಬಜೆಟ್ ನಲ್ಲಿ ಘೋಷಿಸಿಲು ತೀರ್ಮಾನಿಸಲಾಗಿದೆ ಎಂದರು.

# ಪರಿಶಿಷ್ಟ ಜಾತಿ,ಹಿಂದುಳಿದ ವರ್ಗಗಳು,ಬ್ರಾಹ್ಮಣ ವರ್ಗಗಳು ಮತ್ತು ಏಜೆನ್ಸಿ ಮೂಲಕ ನೀಡಲಾಗಿರುವ ಜಾಹೀರಾತು ಮೊತ್ತಕ್ಕಾಗಿ 93 ಕೋಟಿ ರೂಗಳನ್ನು ಇನ್ನು ಒಂದೆರಡು ದಿನದಲ್ಲಿ ವಾರ್ತಾಇಲಾಖೆಗೆ ನೀಡಲಾಗುವುದು.

# ಉದ್ದೇಶ ಪೂರಕವಾಗಿ ಜಾಹೀರಾತು ನೀಡಿಕೆಯಲ್ಲಿ ವಿಳಂಬ ದೊರಣೆ ಮಾಡುತ್ತಿರುವ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

# ದರ ಪರಿಷ್ಕರಣೆಯನ್ನೂ ಸಧ್ಯದಲ್ಲಿಯೇ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ಜಾಹೀರಾತು ಬಾಕಿ ಮೊತ್ತವನ್ನು ಬಿಡುಗಡೆ ಮಾಡಿದ (93ಕೋಟಿ)ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಹಾಗೂ ನಮ್ಮ ಪರ ವಕಾಲತ್ತು ವಹಿಸಿದ ಮಾಧ್ಯಮ ಸ್ನೇಹಿಯಾದ ಕೆ.ವಿ.ಪ್ರಭಾಕರ್ ರವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು,ಅಭಿನಂದಿಸಿದರು

ಈ ನಿಯೋಗದಲ್ಲಿ KUWJ ಕಾರ್ಯದರ್ಶಿ ಸೋಮಶೇಖರ್ ಕೆರಗೋಡು,ರಾಜ್ಯ ನಿರ್ದೇಶಕ ರವಿಕುಮಾರ್ ಟೆಲೆಕ್ಸ್ ಮತ್ತು ಎಸ್ಸಿ ಎಸ್ಟಿ ಪತ್ರಿಕಾ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ಚೆಲುವರಾಜು ರವರು ಇದ್ದರು

";