This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

Agriculture NewsState News

ರೈತರಿಗೆ ಗುಡ್‌ ನ್ಯೂಸ್‌ : ಕೆಆರ್‌ಎಸ್‌ ಸೇರಿ ಕರ್ನಾಟಕದ ಪ್ರಮುಖ ಡ್ಯಾಂಗಳಿಗೆ ಒಳ ಹರಿವು ಆರಂಭ!

ರೈತರಿಗೆ ಗುಡ್‌ ನ್ಯೂಸ್‌ : ಕೆಆರ್‌ಎಸ್‌ ಸೇರಿ ಕರ್ನಾಟಕದ ಪ್ರಮುಖ ಡ್ಯಾಂಗಳಿಗೆ ಒಳ ಹರಿವು ಆರಂಭ!

ಬೆಂಗಳೂರು : ಕರ್ನಾಟಕದಲ್ಲಿ ವರುಣನ ಅಬ್ಬರ ಜೋರಾಗಿದ್ದು, ತೀವ್ರ ಬರದಿಂದ ಬತ್ತಿ ಹೋಗಿದ್ದ ನದಿಗಳಿಗೆ ಮುಂಗಾರು ಪೂರ್ವ ಮಳೆಯಿಂದ ಜೀವ ಕಳೆ ಬಂದಿದ್ದು, ನೀರಿಲ್ಲದೇ ಭಣಗುಡುತ್ತಿದ್ದ ಜಲಾಶಯಗಳಿಗೆ ಒಳ ಹರಿವು ಬರಲಾರಂಭಿಸಿದೆ.

ದಕ್ಷಿಣ ಒಳನಾಡು ಹಾಗೂ ಮಲೆನಾಡಿನಲ್ಲಿ ಉತ್ತಮ ಮಳೆಯಾಗಿರುವುದರಿಂದ ಕಾವೇರಿ ಕಣಿವೆಯ ಹಾರಂಗಿ, ಹೇಮಾವತಿ ಹಾಗೂ ಕೆಆರ್‌ಎಸ್‌ ಜಲಾಶಯಗಳಿಗೆ ನೀರು ಬರಲು ಶುರುವಾಗಿದ್ದು, ಮಲೆನಾಡು ಭಾಗದಲ್ಲಿರುವ ಕೃಷ್ಣಾ ಕಣಿವೆಯ ಭದ್ರಾ ಜಲಾಶಯಕ್ಕೆ ಮಾತ್ರ ಒಳಹರಿವು ಬರುತ್ತಿದ್ದು, ಉಳಿದ ಯಾವುದೇ ಜಲಾಶಯದಲ್ಲಿ ಒಳಹರಿವು ದಾಖಲಾಗಿಲ್ಲ. ಲಿಂಗನಮಕ್ಕಿ ಹಾಗೂ ಸೂಪಾ ಜಲಾಶಯದ ಒಳಹರಿವಿನಲ್ಲಿಯೂ ಸ್ವಲ್ಪ ಏರಿಕೆಯಾಗಿದೆ.

ಮೇ 19ರ ಮಾಹಿತಿಯಂತೆ ಕೆಆರ್‌ಎಸ್‌ ಜಲಾಶಯಕ್ಕೆ 1153 ಕ್ಯೂಸೆಕ್‌ ಒಳಹರಿವು ಇದ್ದರೆ, ಲಿಂಗನಮಕ್ಕಿ ಜಲಾಶಯಕ್ಕೆ 544 ಕ್ಯೂಸೆಕ್‌, ಭದ್ರಾ ಜಲಾಶಯಕ್ಕೆ 571 ಕ್ಯೂಸೆಕ್‌, ಹೇಮಾವತಿ ಜಲಾಶಯಕ್ಕೆ 393 ಕ್ಯೂಸೆಕ್‌, ಹಾರಂಗಿ ಜಲಾಶಯಕ್ಕೆ 308 ಕ್ಯೂಸೆಕ್‌, ಸೂಪಾ ಜಲಾಶಯಕ್ಕೆ 547 ಕ್ಯೂಸೆಕ್‌ ಹಾಗೂ ಕಬಿನಿ ಜಲಾಶಯಕ್ಕೆ 43 ಕ್ಯೂಸೆಕ್‌ ಒಳಹರಿವು ದಾಖಲಾಗಿದೆ. ಉತ್ತರ ಕರ್ನಾಟಕದ ಆಲಮಟ್ಟಿ, ತುಂಗಭದ್ರಾ ಹಾಗೂ ಮಲಪ್ರಭಾ ಜಲಾಶಯಗಳಿಗೆ ಯಾವುದೇ ರೀತಿಯ ನೀರು ಹರಿದುಬಂದಿಲ್ಲ.

ಕಳೆದ ವರ್ಷ ತೀವ್ರ ಮಳೆಯ ಕೊರತೆ ಹಿನ್ನೆಲೆ ಕೆಆರ್‌ಎಸ್, ತುಂಗಭದ್ರಾ, ಭದ್ರಾ ಜಲಾಶಯ ಸೇರಿ ಕರ್ನಾಟಕ ಪ್ರಮುಖ ಅಣೆಕಟ್ಟುಗಳಲ್ಲಿ ಅತಿ ಕಡಿಮೆ ನೀರಿನ ಸಂಗ್ರಹವಾಗಿತ್ತು. ಆದರೆ, ಇದೀಗ ಕಳೆದ ಎರಡು ವಾರಗಳಿಂದ ರಾಜ್ಯದಲ್ಲಿ ಭರ್ಜರಿ ಮಳೆ ಸುರಿಯುತ್ತಿರುವುದರಿಂದ ಡ್ಯಾಂಗಳಿಗೆ ನೀರು ಹರಿದುಬರಲು ಶುರುವಾಗಿದೆ. ಮೇ ತಿಂಗಳಿನಲ್ಲಿಯೇ ಜಲಾಶಯಗಳಿಗೆ ಒಳ ಹರಿವು ಹರಿದು ಬರುತ್ತಿರುವುದರಿಂದ ಈ ವರ್ಷ ಡ್ಯಾಂಗಳು ಶೀಘ್ರ ತುಂಬಲಿವೆ ಎಂಬ ನಂಬಿಕೆ ಹುಟ್ಟಿದೆ.