This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Education NewsLocal NewsState News

ಸರಕಾರದ ಮೇಲೆ ವಿಶ್ವಾಸವಿರಲಿ:ಆರ್.ಬಿ.ತಿಮ್ಮಾಪೂರ

ಸರಕಾರದ ಮೇಲೆ ವಿಶ್ವಾಸವಿರಲಿ:ಆರ್.ಬಿ.ತಿಮ್ಮಾಪೂರ

ಬಾಗಲಕೋಟೆ

ರಾಜ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು ನ್ಯಾಯಯುತ ಬೇಡಿಕೆಗೆ ಸಂಬಂಸಿದಂತೆ ಸರಕಾರ ನುಡಿದಂತೆ ನಡೆಯುತ್ತದೆ. ಸರಕಾರದ ಮೇಲೆ ವಿಶ್ವಾಸವಿಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.

ನಗರದ ನವನಗರದ ಜಿಲ್ಲಾಡಳಿತ ಭವನದ ಎದುರು ಹಲವು ದಿನಗಳಿಂದ ನಡೆಸುತ್ತಿರುವ ಅತಿಥಿ ಉಪನ್ಯಾಸಕರ ಅರ್ನಿಷ್ಟಾವ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಶುಕ್ರವಾರ ಸಂಜೆ ಭೇಟಿ ನೀಡಿ, ನಮ್ಮ ಕಾಂಗ್ರೆಸ್ ಪಕ್ಷದ ಚುನಾವಣೆ ಪ್ರಣಾಳಿಕೆಯಲ್ಲಿ ಅತಿಥಿ ಉಪನ್ಯಾಸಕರ ವಿಷಯ ಕುರಿತು ಪ್ರಕಟಿಸಿದ್ದೇವೆ. ಅದರಂತೆ ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದ್ದು ಅತಿಥಿ ಉಪನ್ಯಾಸಕರ ಬೇಡಿಕೆಗಳು ಗಮನಕ್ಕಿವೆ. ಈ ಕುರಿತು ಸಿಎಂ ಅವರೊಂದಿಗೆ ಚರ್ಚಿಸಿ ಪರಿಹಾರ ಕೊಡಿಸುವ ಪ್ರಯತ್ನ ಮಾಡುತ್ತೇವೆ ಎಂದರು.

ನಾವು ಸಾಮಾಜಿಕ ನ್ಯಾಯದ ಪರವಾಗಿದ್ದೇವೆ. ಬಹು ದಿನಗಳ ಬೇಡಿಕೆಯಾದ ಅತಿಥಿ ಉಪನ್ಯಾಸಕರ ಸೇವಾ ಭದ್ರತೆ, ಕಾಯಂಮಾತಿ ಕುರಿತು ಸರಕಾರ ಅತಿಥಿ ಉಪನ್ಯಾಸಕರಿಗೆ ಒಳ್ಳೆಯದನ್ನ ಮಾಡುತ್ತೇವೆ ಎಂದು ಹೇಳಿದರು.

ಅತಿಥಿ ಉಪನ್ಯಾಸಕರ ಸಂಘದ ರಾಜ್ಯ ಸದಸ್ಯ ಡಾ.ಚಂದ್ರಶೇಖರ ಕಾಳನ್ನವರ, ಪ್ರೊ.ಸಂಗಮೇಶ ಬ್ಯಾಳಿ, ಡಾ.ಮನೋಹರ ಪೂಜಾರ, ಭಾರತಿ ರಾಠೋಡ, ವಿಜಯಕುಮಾರ ಗಂಗಲ್, ಮುತ್ತು ಬಡಿಗೇರ, ಹನಮಂತ ಬೋವಿ, ಗುರುರಾಜ ರಾಠೋಡ, ಶಶಿಧರ ಪೂಜಾರ, ಸುನೀಲ ಮಠಪತಿ, ಭಾರತಿ ರಾಠೋಡ, ಕರಿಗೌಡರ, ನಾರಾಯಣ ಪತ್ತಾರ ಸೇರಿದಂತೆ ಜಿಲ್ಲೆಯ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಇದ್ದರು.

 

";