This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

State News

ಘೋಷಣೆ ಕೂಗಿದವರನ್ನು ವಿಧಾನಸಭೆ ಹೊರಗಡೆ ಹೋಗಲು ಪೊಲೀಸರು ಹೇಗೆ ಬಿಟ್ಟರು?: ಸುನೀಲ್ ಕುಮಾರ್

ಘೋಷಣೆ ಕೂಗಿದವರನ್ನು ವಿಧಾನಸಭೆ ಹೊರಗಡೆ ಹೋಗಲು ಪೊಲೀಸರು ಹೇಗೆ ಬಿಟ್ಟರು?: ಸುನೀಲ್ ಕುಮಾರ್

ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು‌ ಘೋಷಣೆ ಕೂಗಿರುವ ಆರೋಪದ ಹೊಣೆ ಸಿಎಂ ಸಿದ್ದರಾಮಯ್ಯ ಹೊರಬೇಕು ಎಂದು ಬಿಜೆಪಿ ಸದಸ್ಯ ಸುನೀಲ್ ಕುಮಾರ್ ಹೇಳಿದರು.

ವಿಧಾನಸಭೆಯಲ್ಲಿ ಮಾತನಾಡಿದ ಅವರು, ಘೋಷಣೆ ಕೂಗಿದವರನ್ನು ವಿಧಾನಸಭೆ ಹೊರಗಡೆ ಹೋಗಲು ಪೊಲೀಸರು ಹೇಗೆ ಬಿಟ್ಟರು? ಏಕೆ ಅವರ ಬಂಧನ ಈವರೆಗೆ ಆಗಿಲ್ಲ? ಇದರ ವಿರುದ್ಧ ಕ್ರಮ ಕೈಗೊಳ್ಳಬೇಡಿ ಎಂದು ಒತ್ತಡ ಹೇರುವ ಶಕ್ತಿ ಯಾವುದು? ಎಂದು ಪ್ರಶ್ನಿಸಿದರು.ಘಟನೆಯ ಬಗ್ಗೆ ಎಫ್ ಎಸ್ ಎಲ್ ವರದಿ ಬಗ್ಗೆ ನಾನು ಅನುಮಾನ ವ್ಯಕ್ತಪಡಿಸುತ್ತಿಲ್ಲ ಎಂದರು.

ಆದರೆ ಬೇರೆ ಎಫ್ ಎಸ್ ಎಲ್ ವರದಿ ಬರಲು ತಿಂಗಳುಗಟ್ಟಲೆ ಕಾಯಬೇಕು ಎಂದ ಅವರು, ಕಳೆದ ಒಂಬತ್ತು ತಿಂಗಳಲ್ಲಿ ಸರ್ಕಾರದ ಧೋರಣೆಯಿಂದ ಇಂತಹ ಘಟನೆ ನಡೆಯುತ್ತಿದ್ದು, ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಘಟನೆಯ ನೈತಿಕ ಹೊಣೆ ಸಿದ್ದರಾಮಯ್ಯ ಹೊರಬೇಕು ಎಂದು ಆಗ್ರಹಿಸಿದರು.

ಘಟನೆಯನ್ನು ಖಂಡಿಸಿ ರಾಷ್ಟ್ರ ಧ್ವಜ ಇಟ್ಟುಕೊಂಡು ಮೆರವಣಿಗೆ ಮಾಡಿದ್ದೇವೆ. 2022 ರಲ್ಲಿ ಹಿಜಾಬ್ ಗಲಾಟೆಯ ಸಂದರ್ಭದಲ್ಲಿ ಸದನದಲ್ಲಿ ರಾಷ್ಟ್ರ ಧ್ವಜ ಪ್ರದರ್ಶನ ಮಾಡಿದ್ದು, ವಿಜಯೋತ್ಸವದ ಸಂದರ್ಭದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದರೆ ದೊಡ್ಡ ಅಪರಾಧ. ಪಾಕಿಸ್ತಾನದ ಪರವಾಗಿ ಮಾನಸಿಕತೆ ಇರುವ ವ್ಯಕ್ತಿಗಳು ಯಾರೇ ಇದ್ದರೂ ಇದನ್ನು ಖಂಡಿಸಬೇಕು. ಇದರ ವಿರುದ್ಧ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.

Nimma Suddi
";