This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Local NewsPolitics NewsState News

ಮುಸ್ಲಿಂರ ಜಗದ್ಗುರು ಸಿದ್ದರಾಮಯ್ಯ : ಬಸವರಾಜ ಯತ್ನಾಳ್

ಮುಸ್ಲಿಂರ ಜಗದ್ಗುರು ಸಿದ್ದರಾಮಯ್ಯ : ಬಸವರಾಜ ಯತ್ನಾಳ್

ವಿಜಯಪುರ: ಶಿವಾಜಿ ಜಯಂತಿ ಹಿನ್ನೆಲೆ, ನಗರದಲ್ಲಿ ಭವ್ಯ ಶೋಭಾಯಾತ್ರೆ ಮೆರವಣಿಗೆ ನಡೆಯಿತು. ಮೆರವಣಿಗೆ ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ವಿಜಯಪುರ ನಗರ ಕ್ಷೇತ್ರದ ಶಾಸಕ ಯತ್ನಾಳ್ ಭಾಷಣ ಮಾಡಿದ್ದು, ಭಾಷಣ ಆರಂಭದಲ್ಲೇ ಓವೈಸಿ ವಿರುದ್ಧ ಕೆಂಡ ಕಾರಿದ್ರು .

ಪಾಕಿಸ್ತಾನದಲ್ಲಿ ತಿನ್ನೋಕೆ ಅನ್ನ ಇಲ್ಲ ನನ್ನ ಮಕ್ಕಳೇ.. ತಾಯಿಗಂಡರು, ಹರಾಮಕೋರ್ ಎಂದು ಪಾಕಿಸ್ತಾನ ಘೋಷಣೆ ಕೂಗಿದವರ ವಿರುದ್ಧ ವಾಗ್ದಾಳಿ ನಡೆಸಿದರು.

ಪಾಕಿಸ್ತಾನ ಪರ ಘೋಷಣೆ ಕೂಗಿದವರ ವಿರುದ್ಧ ಯಾವ ಪದದಲ್ಲಿ ಬೇಕಾದರೂ ಖಂಡಿಸಿ ಎಂದು ಸ್ಪೀಕರ್ ಯು ಟಿ ಖಾದರ್ ಹೇಳಿದ್ರು ಖಾದರ್ ಅವರನ್ನು ಮೆಚ್ಚಬೇಕು ಅವರೊಬ್ಬ ದೇಶಭಕ್ತರು ಎಂದರು.

ವಿಜಯಪುರದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಮಾಡಿದ್ದು, ಈ ವೇಳೆ ನನ್ನ ಭಾವಚಿತ್ರ ಇರುವ ಬ್ಯಾನರ್ ಹರಿದ್ರು ಜಮೀರ್ ಅಹಮದ್ ಖಾನ್ ಅವರೇ ಮುಸ್ಲಿಮರಷ್ಟೇ ಅಲ್ಪಸಂಖ್ಯಾತರಲ್ಲ‌‌..ಸಿಖ್ ,ಜೈನ್ ಅವರು ಅಲ್ಪಸಂಖ್ಯಾತರಿದ್ದಾರೆಂದು ಮತ್ತು
ಕರ್ನಾಟಕದ ಪೊಲೀಸರಿಗೆ ಧನ್ಯವಾದ ಹೇಳ್ತಿನಿ ಎಂದರು.

ಹಿಂದೆ ನಮ್ಮ ಸರ್ಕಾರವಿತ್ತು, ಆಗ ಗೃಹ ಸಚಿವರು ಕಠಿಣ ಕ್ರಮ ಅಂತಿದ್ರು ದೆಹಲಿಯಲ್ಲಿ ಓರ್ವ ನಾಯಕ ಕರೆದು ನನಗೆ ಹೇಳಿದ್ದು ಎಂದರು.

ನಮ್ಮ ಜೊತೆ ಇರಲಿಕ್ಕೆ ಆಗೋಲ್ಲ ಅಂದ್ರೆ ಪಾಕಿಸ್ತಾನಕ್ಕೆ ಹೋಗಿ. ಮುಸ್ಲಿಂರ ಜಗದ್ಗುರು ಸಿದ್ದರಾಮಯ್ಯ ಹಿಂದೂ ದೇವಸ್ಥಾನ ದುಡ್ಡು ತಗೊಂಡು ವಕ್ಫ್ ಆಸ್ತಿ ರಕ್ಷಣೆ ಮಾಡ್ತಾರಂತೆ..ಮುಸ್ಲಿಂರ ಅಭಿವೃದ್ಧಿಗೆ 100ಕೋಟಿ ಕೊಡ್ತಾರೆ,ಯಾರಪ್ಪನದು ದುಡ್ಡು ಎಂದು ಹೇಳಿದರು.

 

Nimma Suddi
";