This is the title of the web page
This is the title of the web page

Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Politics NewsState News

ಆರ್‌ಎಸ್‌ಎಸ್ ಸ್ವಾತಂತ್ರ್ಯ ಹೋರಾಟದಲ್ಲೂ ಭಾಗಿ ಆಗಿರಲಿಲ್ಲ : ಖರ್ಗೆ

ಆರ್‌ಎಸ್‌ಎಸ್ ಸ್ವಾತಂತ್ರ್ಯ ಹೋರಾಟದಲ್ಲೂ ಭಾಗಿ ಆಗಿರಲಿಲ್ಲ : ಖರ್ಗೆ

ತಿರುವನಂತಪುರಂ (ಕೇರಳ): ಕಾಂಗ್ರೆಸ್ ಪಕ್ಷ ಗೆದ್ದರೆ ನಿಮ್ಮ ಮಂಗಳಸೂತ್ರ ಕಿತ್ತು ಮುಸ್ಲಿಮರಿಗೆ ಕೊಡುತ್ತೆ ಎಂಬ ಪ್ರಧಾನಿ ಮೋದಿ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ, 1962ರಲ್ಲಿ ಭಾರತ – ಚೀನಾ ಯುದ್ಧ ನಡೆದ ವೇಳೆ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರು ತಮ್ಮ ಒಡವೆಗಳನ್ನು ದಾನವಾಗಿ ನೀಡಿದ್ದರು ಎಂದು ತಿಳಿಸಿದರು.

ಈ ರೀತಿಯ ಯಾವುದಾದರೂ ದಾನವನ್ನು ಬಿಜೆಪಿ ಅಥವಾ ಆರ್‌ಎಸ್‌ಎಸ್ ಮಾಡಿದೆಯೇ ಎಂದೂ ಖರ್ಗೆ ಪ್ರಶ್ನೆ ಮಾಡಿದ್ದು, ಇದೇ ವೇಳೆ ಪಂಡಿತ್ ಮೋತಿಲಾಲ್ ನೆಹರೂ ಹಾಗೂ ಪಂಡಿತ್ ಜವಹರ ಲಾಲ್ ನೆಹರೂ ಅವರು ತಮ್ಮ ಮನೆಯನ್ನೇ ಸ್ವಾತಂತ್ರ್ಯ ಹೋರಾಟಕ್ಕೆ ದಾನವಾಗಿ ನೀಡಿದ್ದರು. ಅಲಹಾಬಾದ್‌ನಲ್ಲಿದ್ದ ಆನಂದ ಭವನವನ್ನು ದಾನ ಮಾಡಿದ್ದರು. ನಮ್ಮ ನಾಯಕರು ದೇಶಕ್ಕಾಗಿ ಬದುಕಿದ್ದರು, ದೇಶಕ್ಕಾಗಿ ತಮ್ಮ ಜೀವ ಹಾಗೂ ರಕ್ತ ಕೊಟ್ಟಿದ್ದಾರೆ ಎಂದು ಖರ್ಗೆ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಕಳೆದ ವಾರ ಪ್ರಧಾನಿ ಮೋದಿ ಅವರು ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ದರು. ಕಾಂಗ್ರೆಸ್ ಪಕ್ಷವು ನಿಮ್ಮ ಬಳಿ ಇರುವ ಚಿನ್ನ ಹಾಗೂ ಆಸ್ತಿಯನ್ನು ಕಿತ್ತುಕೊಂಡು ಯಾರಿಗೆ ಹೆಚ್ಚು ಮಕ್ಕಳು ಇದ್ದಾರೋ ಅವರಿಗೆ ಹಂಚುತ್ತಾರೆ ಎಂದು ಹೇಳಿಕೆ ನೀಡಿದ್ದರು.

ಆರ್‌ಎಸ್‌ಎಸ್ – ಬಿಜೆಪಿ ನಾಯಕರು ಯಾವುದೇ ರೀತಿಯಾದ ತ್ಯಾಗವನ್ನಾದರೂ ದೇಶಕ್ಕೆ ಮಾಡಿದ್ದಾರಾ ಎಂದು ಪ್ರಶ್ನಿಸಿದ ಮಲ್ಲಿಕಾರ್ಜುನ ಖರ್ಗೆ, ಆರ್‌ಎಸ್‌ಎಸ್ ಸ್ವಾತಂತ್ರ್ಯ ಹೋರಾಟದಲ್ಲೂ ಭಾಗಿ ಆಗಿರಲಿಲ್ಲ ಎಂದು ಚಾಟಿ ಬೀಸಿದರು.

ನಿಮ್ಮ ಮಂಗಳಸೂತ್ರವೇ ಸುರಕ್ಷಿತವಾಗಿ ಇರೋದಿಲ್ಲ ಎಂದು ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ ಹೇಳುತ್ತಿದ್ದಾರೆ. ಈ ಹಿಂದೆ 55 ವರ್ಷಗಳ ಕಾಲ ಕಾಂಗ್ರೆಸ್ ದೇಶವನ್ನು ಆಳಿದೆ. ಎಂದಾದರೂ ಆ ರೀತಿ ಆಗಿತ್ತಾ? ಎಂದು ಪ್ರಶ್ನಿಸಿದ ಖರ್ಗೆ, ಇಂದಿರಾ ಗಾಂಧಿ ಅವರು ತಮ್ಮ ಒಡವೆಗಳನ್ನ 1962ರ ಯುದ್ಧಕ್ಕೆ ದಾನ ಮಾಡಿದ್ದರು ಎಂದರು.

Nimma Suddi
";