This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Politics NewsState News

ಪಾರ್ಲಿಮೆಂಟ್‌ ಚುನಾವಣೆ ಬಳಿಕ ಕಾಂಗ್ರೆಸ್‌ ಇರಲಿದೆಯೆ ಎಂಬ ಬಗ್ಗೆ ಚಿಂತಿಸಲಿ: ಎಚ್‌ಡಿಕೆ

ಪಾರ್ಲಿಮೆಂಟ್‌ ಚುನಾವಣೆ ಬಳಿಕ ಕಾಂಗ್ರೆಸ್‌ ಇರಲಿದೆಯೆ ಎಂಬ ಬಗ್ಗೆ ಚಿಂತಿಸಲಿ: ಎಚ್‌ಡಿಕೆ

ಮೈಸೂರು: ಜೆಡಿಎಸ್‌ ಸ್ಪರ್ಧಿಗಳೆಲ್ಲರೂ ಸೋಲುತ್ತಾರೆ ಎಂದು ಭವಿಷ್ಯ ನುಡಿದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್‌ ಇರಲಿದೆಯೇ ಎಂಬುದನ್ನು ಚಿಂತಿಸಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ”ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಎಂ ಹುದ್ದೆಯ ಜತೆಗೆ ಜ್ಯೋತಿಷಿ ಆಗಿದ್ದಾರೆ. ಜ್ಯೋತಿಷ್ಯ ಹೇಳುವುದನ್ನೂ ಕಲಿತಿದ್ದಾರೆ. ಇದನ್ನು ಪಕ್ಕಕ್ಕಿಟ್ಟು ಪಾರ್ಲಿಮೆಂಟ್‌ ಚುನಾವಣೆ ಬಳಿಕ ಕಾಂಗ್ರೆಸ್‌ ಇರಲಿದೆಯೆ ಎಂಬ ಬಗ್ಗೆ ಚಿಂತಿಸಲಿ,” ಎಂದು ಟೀಕಿಸಿದರು.”

”ಕಾಂಗ್ರೆಸ್‌ನವರು ನಮ್ಮ ರಕ್ತದ ಕಣ ಕಣದಲ್ಲೂ ಕನ್ನಡ ಅಂತಾರೆ. ಕಾವೇರಿ ವಿಚಾರದಲ್ಲಿಅವರ ಕೊಡುಗೆ ಏನು? ಕಾವೇರಿ ವಿಚಾರದಲ್ಲಿ ದೇವೇಗೌಡರು ರಾಜಕಾರಣ ಮಾಡುವಾಗ ಇವರೇನು ಮಾಡುತ್ತಿದ್ದರು” ಎಂದು ಕಿಡಿಕಾರಿದರು.

”ಈಗ ಕಾಂತರಾಜ ವರದಿ ಬಿಡುಗಡೆ ಮಾಡಿದರೆ ಕಾಂಗ್ರೆಸ್‌ ಸರ್ವನಾಶವಾಗಲಿದೆ ಎಂದು ಚುನಾವಣೆ ಬಳಿಕ ಬಿಡುಗಡೆಗೆ ಸಿದ್ದರಾಮಯ್ಯ ಕಾಯುತ್ತಿದ್ದಾರೆ. ಇವರಿಗೆ ಒಕ್ಕಲಿಗರ ಮೇಲೆ ಈಗ ಪ್ರೀತಿ ಬಂದಿದೆ. ಸಿಎಂ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಏನು ಕಡಿದು ಕಟ್ಟಿಹಾಕಿದ್ದಾರೆ. ನಾನು ಅವರಿಗೆ ಓಪನ್‌ ಚಾಲೆಂಜ್‌ ಮಾಡುತ್ತೇನೆ. ನಾವು ನೀಡಿರುವ ಕೊಡುಗೆ ಅವರ ಕೊಡುಗೆ ಬಗ್ಗೆ ಚರ್ಚೆ ಆಗಲೇಬೇಕು,” ಎಂದು ಸವಾಲು ಹಾಕಿದರು.

ಪ್ರತಾಪ್‌ ಸಿಂಹಗೆ ಟಿಕೆಟ್‌ ತಪ್ಪಿಸಿದ್ದು ದೇವೇಗೌಡರು ಎಂಬ ಸಚಿವ ವೆಂಕಟೇಶ್‌ ಹೇಳಿಕೆಗೆ ಪ್ರತಿಕ್ರಿಯಿಸಿ, ವೆಂಕಟೇಶ್‌ ನಮ್ಮ ನೆಂಟರು. ಜತೆಗೆ ಹಳೇ ಸ್ನೇಹಿತರು. ಅವರು ಯಾರ್ಯಾರಿಗೆ ಟೋಪಿ ಹಾಕಿ ಹೋಗಿದ್ದರು ಎಂಬುದು ಗೊತ್ತಿದೆ. 2004ರಲ್ಲಿ ಮಂತ್ರಿ ಮಾಡಲಿಲ್ಲ ಎಂದು ಪಕ್ಷ ತೊರೆದರು. ನಮ್ಮ ಪಕ್ಷಕ್ಕೆ ದುಡಿಮೆ ಮಾಡಿದ್ದರೆ ಬರೀ 8 ಜನ ಮಾತ್ರ ಯಾಕೆ ಹೋದರು. ಎಲ್ಲಾ 52 ಮಂದಿಯೂ ಹೋಗಬೇಕಿತ್ತಲ್ಲವೇ? ಮಾತೆತ್ತಿದರೆ ಪಕ್ಷದಿಂದ ಹೊರ ಹಾಕಿದರು ಎಂದು ಹೇಳುತ್ತಾರೆ. ಆದರೆ, ಅವರ ರಾಜಕೀಯ ಬೆಳವಣಿಗೆಗೆ ಜೆಡಿಎಸ್‌ ಕೊಡುಗೆ ಅಪಾರ,” ಎಂದರು.

Nimma Suddi
";