This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Education NewsLocal NewsNational NewsPolitics NewsState News

ಕೇಂದ್ರದ ಹಲವು ಯೋಜನೆಗಳು ಬಡವರಿಗೆ ಉಪಯೋಗ

ಕೇಂದ್ರದ ಹಲವು ಯೋಜನೆಗಳು ಬಡವರಿಗೆ ಉಪಯೋಗ

ಅಮೀನಗಡ

ನರೇಂದ್ರ ಮೋದಿ ಪ್ರಧಾನಿ ಆಗುವುದಕ್ಕಿಂತ ಮುಂಚಿನ ಭಾರತ ಹಾಗೂ ಮೋದಿ ಪ್ರಧಾನಿ ಆದ ನಂತರ ಭಾರತ ಹೇಗಿದೆ ಎಂಬುದರ ಕುರಿತು ಎಲ್ಲರಿಗೂ ಅರಿವಿದೆ ಎಂದು ಐಹೊಳೆ ಗ್ರಾಪಂ ಅಧ್ಯಕ್ಷ ಹನಮಂತ ಆಡಿನ ಹೇಳಿದರು.

ಸಮೀಪದ ಐಹೊಳೆ ಗ್ರಾಮದಲ್ಲಿ ಕೇಂದ್ರ ಸರಕಾರದ ಯೋಜನೆಗಳ ಜಾಗೃತಿಯ ಹಿನ್ನೆಲೆಯಲ್ಲಿ ಹಮ್ಮಿಕೊಂಡ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜನರ ತೆರಿಗೆ ಹಣವನ್ನು ಹೇಗೆ ಉಪಯೋಗಿಸಬೇಕೆಂದು ತೋರಿಸಿಕೊಟ್ಟವರು ಪ್ರಧಾನಿ ಮೋದಿ. ಅವರ ಚಾಣಾಕ್ಷತನ, ಬುದ್ಧಿಮತ್ತೆಯಿಂದ ದೇಶದ ಪ್ರತಿ ಬಡವನಿಗೂ ಸರಕಾರದ ಯೋಜನೆಗಳು ತಲುಪುವಂತೆ ಮಾಡಿದ್ದಾರೆ ಎಂದರು.

ಸಹಾಯ ಮಾಡಿದವರನ್ನು ನೆನಪಿಸಿಕೊಳ್ಳದಿದ್ದರೆ ದೇವರು ಮೆಚ್ಚುವುದಿಲ್ಲ. ಆಯುಷ್ಮಾನ್ ಕಾರ್ಡ್ ಹೇಗೆ ಅನುಕೂಲತೆ ಇದೆ ಎಂಬುದಕ್ಕೆ ನಾನೇ ನಿದರ್ಶನ. ತಮ್ಮ ಮಗಳು ಅನಾರೋಗ್ಯಕ್ಕೀಡಾದಾಗ ಉಪಯೋಗಕ್ಕೆ ಬಂದಿದ್ದನ್ನು ತಿಳಿಸಿದರು.

ಪಿಡಿಒ ಮಹಾಂತೇಶ ಗೋಡಿ, ಲೆಕ್ಕಸಹಾಯಕ ಹನಮಂತ ಕುರಿ ಹಾಗೂ ಗ್ರಾಮಸ್ಥರು ಇದ್ದರು.

 

";