This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

State News

ಸುಮಲತಾ ಅಂಬರೀಶ್ ಅವರಿಗೆ ಅವಶ್ಯಕತೆ ಬಿದ್ದರೆ ಫೋನ್ ಮಾಡ್ತೀನಿ: ಎನ್ ಚಲುವರಾಯಸ್ವಾಮಿ

ಸುಮಲತಾ ಅಂಬರೀಶ್ ಅವರಿಗೆ ಅವಶ್ಯಕತೆ ಬಿದ್ದರೆ ಫೋನ್ ಮಾಡ್ತೀನಿ: ಎನ್ ಚಲುವರಾಯಸ್ವಾಮಿ

ಮಂಡ್ಯ: ಸಚಿವ ಮತ್ತು ಮಂಡ್ಯ ಭಾಗದ ಪ್ರಮುಖ ನಾಯಕರಲ್ಲಿ ಒಬ್ಬರೆನಿಸಿಕೊಂಡಿರುವ ಎನ್ ಚಲುವರಾಯಸ್ವಾಮಿ ಮತ್ತು ಸಂಸದೆ ಸುಮಲತಾ ಅಂಬರೀಶ್ ನಡುವೆ ಶೀತಲ ಸಮರ ಶುರುವಾದಂತಿದೆ ಎಂದು ಮಾಹಿತಿ ತಿಳಿದು ಬಂದಿದೆ.

ಅವರಿಗೆ ಫೋನ್ ಮಾಡಿದ್ರಾ ಸರ್ ಅಂತ ಸಚಿವನನ್ನು ಕೇಳಿದಾಗ, ಇಲ್ಲ ಅವಶ್ಯಕತೆ ಬಿದ್ರೆ ಮಾಡ್ತೀನಿ ಅಂತ ಚುಟುಕಾಗಿ ಹೇಳಿದರು. ಚಲುವರಾಯಸ್ವಾಮಿ ಒಂದು ಸಂದರ್ಭದಲ್ಲಿ ನಾಟಿ ಅಂತ ಶಬ್ದ ಬಳಸಿದ್ದಕ್ಕೆ, ಸುಮಲತಾ ಅವರು ನಾಟಿ ಪಾರ್ಲಿಮೆಂಟ್ ಗೆ ಸೂಟ್ ಆಗಲ್ಲ ಅಂತ ಪ್ರತಿಕ್ರಿಯಿಸಿದ್ದಾರೆ.

ಅವರ ಮಾತಿಗೆ ಇವರು, ಇವರ ಹೇಳಿಕೆಗೆ ಅವರು ಕೌಂಟರ್ ನೀಡುವ ಕಾರ್ಯ ಕೆಲದಿನಗಳಿಂದ ಜಾರಿಯಲ್ಲಿದೆ. ಮೊನ್ನೆ ಸುಮಲತಾ ಅವರು ಕೆಲ ವಿಷಯಗಳಿಗೆ ಸಂಬಂಧಿಸಿದಂತೆ ಚಲುವರಾಯಸ್ವಾಮಿ ಅವರೊಂದಿಗೆ ಚರ್ಚಿಸಬೇಕಿದೆ ಎಂದು ಹೇಳಿದ್ದರು.

ಕೌಂಟರ್ ನೀಡಿದ ಚಲುವರಾಯಸ್ವಾಮಿ, ಸಂಸದರು ಬುದ್ಧಿವಂತರು ಮತ್ತು ಈಗ ಬಿಜೆಪಿ ಟಿಕೆಟ್ ಗಾಗಿ ಫೈಟ್ ಬೇರೆ ಮಾಡುತ್ತಿದ್ದಾರೆ ಅವರಿಗೆ ಒಳ್ಳೆಯದಾಗಲಿ, ಯಾರು ಯಾವುದಕ್ಕೆ ಸೂಟ್ ಅಗುತ್ತಾರೆ ಅಂತ ಮಂಡ್ಯದ 8 ವಿಧಾನಸಭಾ ಕ್ಷೇತ್ರಗಳ ಜನ ತೀರ್ಮಾನ ಮಾಡುತ್ತಾರೆ, ನಾನು ಇಲ್ಲಿ ಕೂತ್ಕೊಂಡು ಕುಮಾರಸ್ವಾಮಿ ಆಗಲಿ ಸುಮಲತಾ ಅಗಲಿ ಅಂತ ಹೇಳಿದರೆ ಅದು ನಡೆಯಲ್ಲ ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ ಎಂದು ಹೇಳಿದರು.

";