This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

State News

ನಮ್ಮ ಹೋರಾಟ ಯಾವುದೇ ಪಕ್ಷದ ವಿರುದ್ಧ ಅಲ್ಲ, ಭ್ರಷ್ಟ ವ್ಯವಸ್ಥೆ ವಿರುದ್ಧ:ದಿಂಗಾಲೇಶ್ವರಶ್ರೀ

ನಮ್ಮ ಹೋರಾಟ ಯಾವುದೇ ಪಕ್ಷದ ವಿರುದ್ಧ ಅಲ್ಲ, ಭ್ರಷ್ಟ ವ್ಯವಸ್ಥೆ ವಿರುದ್ಧ:ದಿಂಗಾಲೇಶ್ವರಶ್ರೀ

ಹುಬ್ಬಳ್ಳಿ: ನನ್ನ ಸ್ಪರ್ಧೆಗೆ ಯಾವುದೇ ಪಕ್ಷದ ಬೆಂಬಲ ಇಲ್ಲ. ಕ್ಷೇತ್ರದ ಜನರೇ ನನಗೆ ಸಂಪೂರ್ಣ ಬೆಂಬಲ ಕೊಟ್ಟಿದ್ದಾರೆ ಎಂದು ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದರು.

ಧಾರವಾಡ ಲೋಕಸಭಾ ಕ್ಷೇತ್ರದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿ, ನಮ್ಮ ಹೋರಾಟ ಯಾವುದೇ ಪಕ್ಷದ ವಿರುದ್ಧ ಅಲ್ಲ, ಭ್ರಷ್ಟ ವ್ಯವಸ್ಥೆ ವಿರುದ್ಧ. ಮನುಷ್ಯ ತುಳಿದಾಳುವ ಕೆಟ್ಟ ಸಂಸ್ಕೃತಿ ವಿರುದ್ಧ ಹೋರಾಟ ಮಾಡಲು ಬಂದಿದ್ದೇನೆ. ಬಹಳಷ್ಟು ಜನರು ಅಸ್ತಿತ್ವ ಕಳೆದುಕೊಂಡು ದಾಸ್ಯತ್ವದಲ್ಲಿ ಬದುಕುತ್ತಿದ್ದಾರೆ. ಇದಕ್ಕೆ ಮುಕ್ತಿ ಕೊಡಲು ಕಣಕ್ಕಿಳಿದಿದ್ದೇನೆ ಎಂದರು.

ಅಧಿಕಾರ ಬಂದ ಸಂದರ್ಭದಲ್ಲಿ ಅಧಿಕಾರ, ಹಣ ಹಾಗೂ ಅಹಂ ಭಾವ ತಾಳಿದಲ್ಲಿ ಆಗ ಮತದಾರರು ಅಂಕುಶ ಹಾಕುತ್ತಾರೆ ಎಂಬುದು ಅವರಿಗೆ ತಿಳಿಯಬೇಕು. ಧಾರವಾಡ ಎಂಪಿಯ ಗುಣ ಮತ್ತು ಲಿಂಗಾಯತ ವಿರೋಧಿ ಗುಣ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೊತ್ತಾಗಿಲ್ಲ. ತಿಳಿಸುವ ಪ್ರಯತ್ನ ಯಾರೂ ಮಾಡಿಲ್ಲ. ರೈತರಿಗೆ ಮಹದಾಯಿ ಯೋಜನೆ ಜಾರಿ ಮಾಡದೇ, ರೈತ ವಿರೋಧಿ ನಾಯಕರಾಗಿದ್ದಾರೆ.

ಈ ನಾಡಿನಲ್ಲಿ ರೈತರು, ಬಹು ಸಂಖ್ಯಾತರು, ವ್ಯಾಪಾರಿಗಳು, ಮಹಿಳೆಯರು ಭಯದಲ್ಲಿ ಜೀವನ ಸಾಗಿಸುವಂತಾಗಿದೆ. ಧಾರವಾಡ ಜನತೆ 20 ವರ್ಷ ಅವಕಾಶ ನೀಡಿದ್ದರೂ ಯಾವುದೇ ಕೆಲಸ ಮಾಡಿಲ್ಲ. ಬರುವ ದಿನದಲ್ಲಿ ಜೋಶಿ ಮೂಲೆ ಗುಂಪು ಆಗುತ್ತಾರೆ. ಧಾರವಾಡ ಜಿಲ್ಲೆಗೆ ಏನನ್ನೂ ಮಾಡಿಲ್ಲ ಎಂದು ದೂರಿದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸ್ವಜನ ಪಕ್ಷಪಾತ ಮಾಡುತ್ತಿದ್ದಾರೆ. ತಮ್ಮನ್ನು ಬಿಟ್ಟು ಬೇರೆಯವರನ್ನು ಬೆಳೆಯಲು ಬಿಡುತ್ತಿಲ್ಲ. ಒಳ್ಳೆಯ ವಿಚಾರ ಇಟ್ಟುಕೊಂಡು ಕಣಕ್ಕೆ ಇಳಿದಿದ್ದೇನೆ. ಬಡವರಿಗೆ ಅನ್ನ, ಬಟ್ಟೆ, ನೀರು ಇಲ್ಲ. ರೈತರನ್ನು ಯಾರೂ ಕೇಳುತ್ತಿಲ್ಲ. ಬಹುತೇಕ ನಾಯಕರು ಮಠಗಳತ್ತ ಗಮನ ನೀಡದೇ ಕೇವಲ ಚುನಾವಣೆಗೆ ಮಾತ್ರ ಮಠ ಹಾಗೂ ಸ್ವಾಮಿಗಳನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ. ಮಠಾಧೀಶರು ಹಾಗೂ ಭಕ್ತರು ಅವರ ಕುತಂತ್ರಕ್ಕೆ ಬಲಿಯಾದಲ್ಲಿ ಮುಂದಿನ ಭವಿಷ್ಯ ಕಠಿಣವಾಗಿರಲಿದೆ ಎಂದು ಎಚ್ಚರಿಸಿದರು.

Nimma Suddi
";