This is the title of the web page
This is the title of the web page

Live Stream

March 2025
S M T W T F S
 1
2345678
9101112131415
16171819202122
23242526272829
3031  

| Latest Version 9.4.1 |

Politics NewsState News

ಕಾಂಗ್ರೆಸ್ ನವರು, ಯುದ್ಧಕ್ಕೆ ಮುನ್ನವೇ ಸೋಲನ್ನು ಒಪ್ಪಿಕೊಂಡಿದ್ದಾರೆ: ಆರ‍್ ಅಶೋಕ್

ಕಾಂಗ್ರೆಸ್ ನವರು, ಯುದ್ಧಕ್ಕೆ ಮುನ್ನವೇ ಸೋಲನ್ನು ಒಪ್ಪಿಕೊಂಡಿದ್ದಾರೆ: ಆರ‍್ ಅಶೋಕ್

ಕಲಬುರಗಿ: ಸಮಾವೇಶದಲ್ಲಿ ಮಾತನಾಡಿದ ವಿಪಕ್ಷ ಆರ್ ಅಶೋಕ, ವಿಧಾನಸೌಧಧಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದವರ ಮೇಲೆ ಕಾಂಗ್ರೆಸ್ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದರು.

ದೇಶದ ಭದ್ರತೆಗಾಗಿ, ಪಾಕಿಸ್ತಾನ ಘೋಷಣೆ ಕೂಗಿದವರ ಹೆಡೆಮುರಿ ಕಟ್ಟಲು ಸಿಂಹದ ರೀತಿ ಘರ್ಜನೆ‌ ಮಾಡಿದವರು ನರೇಂದ್ರ ಮೋದಿ. ಕಾಂಗ್ರೆಸ್​ನಲ್ಲಿ ಯಾವುದೇ ಅಭ್ಯರ್ಥಿಗಳು ನಿಲ್ಲಲು ರೆಡಿ ಇಲ್ಲ. ಯುದ್ಧಕ್ಕೆ ಮುನ್ನವೇ ಸೋಲನ್ನು ಒಪ್ಪಿಕೊಂಡಿದ್ದಾರೆ. ಮೋದಿಯಿಂದ ಮಾತ್ರ ಈ ದೇಶ ರಕ್ಷಣೆ ಮಾಡಲು ಸಾಧ್ಯ. ಒಂದೇ ಒಂದು ಕಾಳು ಅಕ್ಕಿಯನ್ನೂ ಸಿದ್ದರಾಮಯ್ಯ ಕೊಟ್ಟಿಲ್ಲ, ಅದನ್ನು ಕೊಟ್ಟಿದ್ದು ನರೇಂದ್ರ ಮೋದಿ ಎಂದರು.

ಅನ್ನ ಅಲ್ಲ, ಕನ್ನ ಹಾಕಲು, ಲೂಟಿ ಮಾಡಲು ಸಿದ್ದರಾಮಯ್ಯ ಬಂದಿರುವುದು. ಸಿದ್ದರಾಮಯ್ಯ ಕಾಲಿಟ್ಟಿದ್ದೇ ಇಟ್ಟಿದ್ದು, ರಾಜ್ಯದಲ್ಲಿ ಬರಗಾಲ ಉಂಡಾಗಿದೆ. ನೀರಿಲ್ಲಾ ನೀರಿಲ್ಲಾ ಎಲ್ಲೆಲ್ಲೂ ನೀರಿಲ್ಲಾ. ಹಿಂದೆಯೂ ಸಿದ್ದರಾಮಯ್ಯ ಇದ್ದಾಗ ಬರಗಾಲ ಉಂಟಾಗಿದ್ದು,ಆಮೇಲೆ ಯಡಿಯೂರಪ್ಪ ಸಿಎಂ ಆದಾಗ ಎಲ್ಲೆಲ್ಲೂ ಮಳೆಯಾಗಿತ್ತು. ಸಿದ್ದರಾಮಯ್ಯರವರೇ ನಿಮಗೆ ಆತ್ಮಸಾಕ್ಷಿ ಇದ್ದರೆ, ಅಭಿವೃದ್ಧಿಗೆ ಒಂದು ರೂಪಾಯಿ ಕೊಟ್ಟಿದ್ದೀರಾ ಹೇಳಿ? ಒಂದು ರೂಪಾಯಿ ಕೆಲಸ ಇಲ್ಲ ಎಂದು ಹೇಳಿದರು.

ಆದರೆ ಫ್ರೀ ಫ್ರೀ ಅಂತೀರಿ. ಐನೂರು ಫ್ರೀ ಕೊಡಿ, ಆದರೆ ಗಂಡನಿಂದ ಕಿತ್ತು ಹೆಂಡತಿಗೆ ಕೊಡಬೇಡಿ. ದಿನಪೂರ್ತಿ‌ ದುಡಿದು ಸ್ವಲ್ಪ ಸಂಜೆ ಎಣ್ಣೆ ಹೊಡೆದರೆ ಅದಕ್ಕೆ 50 ರೂಪಾಯಿ ಟ್ಯಾಕ್ಸ್ ವಿಧಿಸುತ್ತಿದ್ದಾರೆ. ಕದ್ದು ಮುಚ್ಚಿ ಎಲ್ಲದಕ್ಕೂ ಟ್ಯಾಕ್ಸ್. ನನ್ನ ದುಡ್ಡು ತೆಗೆದುಕೊಂಡು ನನ್ನ ಹೆಂಡತಿಗೆ ಕೊಡಲು ನೀನು ಯಾರಯ್ಯಾ ಎಂದು ಸಿದ್ದರಾಮಯ್ಯಗೆ ಕೇಳಬೇಕು ಎಂದು ತಿಳಿಸಿದರು.

Nimma Suddi
";