This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Local NewsState News

ರಂಗಾಯಣ ನಾಟಕ ತರಬೇತಿ ಕಾರ್ಯಾಗಾರ

ರಂಗಾಯಣ ನಾಟಕ ತರಬೇತಿ ಕಾರ್ಯಾಗಾರ

ಬಾಗಲಕೋಟೆ

ಹುನಗುಂದ ತಾಲೂಕಿನ ಸೂಳೇಬಾವಿಯಲ್ಲಿ ಧಾರವಾಡದ ರಂಗಾಯಣ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಅಲ್ಲಿನ ಮನುಜಮತ ಫೌಂಡೇಶನ್ ಸಹಯೋಗದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಅವರ ಜೋಕುಮಾರಸ್ವಾಮಿ ನಾಟಕಾಭಿನಯ ಕಾರ್ಯಗಾರ ಆರಂಭವಾಗಿದೆ.

ನಾಟಕದ ಸಂಭಾಷಣೆಯನ್ನು ರಂಗಾಯಣದ ಪರವಾಗಿ ರಂಗ ಸಮಾಜದ ಸದಸ್ಯ ಮಹಾಂತೇಶ ಗಜೇಂದ್ರಗಡ ಬುಧವಾರ ಸಂಘಟಕರಿಗೆ ವಿತರಿಸಿ ಮಾತನಾಡಿ, ಹೊಸ ಪ್ರತಿಭೆ ಗುರ್ತಿಸಿ ಅವಕಾಶ ಕಲ್ಪಿಸುವುದು, ಹವ್ಯಾಸಿ ಕಲಾ ತಂಡಗಳನ್ನು ಪ್ರೋತ್ಸಾಹಿಸಲು ರಂಗಾಯಣ ಈ ಯೋಜನೆ ಜಾರಿಗೊಳಿಸಿದೆ. ಕಲಾವಿದರು, ಸಂಘ ಸಂಸ್ಥೆಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಮನುಜಮತ ಫೌಂಡೇಶನ್ ಅಧ್ಯಕ್ಷ ಪಾಂಡುರಂಗ ಮಾಶಾಳ, ಗ್ರಾಮೀಣ ಭಾಗಗಳಲ್ಲಿ ರಂಗಾಯಣ ತನ್ನ ಚಟುವಟಿಕೆಗಳನ್ನು ವಿಸ್ತರಿಸಿಕೊಂಡಿರುವುದು ಸಂತಸದ ವಿಷಯ. ಕಾರ್ಯಾಗಾರ ಆರಂಭವಾಗಿದ್ದು ನಟರ ಆಯ್ಕೆ, ತಾಲೀಮು ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದರು.

ಕಸಾಪ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಸಜ್ಜನ, ನಟನೆಯಲ್ಲಿ ಆಸಕ್ತಿಯುಳ್ಳ ಕಲಾವಿದರು ಭಾಗವಹಿಸಬಹುದು. ರಂಗ ಸಮಾಜದ ಮಹಾಂತೇಶ ಗಜೇಂದ್ರಗಡ ಅವರ ಸಲಹೆ ಮಾರ್ಗದರ್ಶನದಲ್ಲಿ ತರಬೇತಿ ನಡೆಯಲಿದೆ. ಕಾರ್ಯಾಗಾರದ ನಂತರ ಸ್ಥಳೀಯ ಪ್ರದರ್ಶನ ಸೇರಿದಂತೆ ರಾಜ್ಯದ ನಾನಾ ಕಡೆ ನಾಟಕ ಪ್ರದರ್ಶನಗೊಳ್ಳಿಲಿದೆ ಎಂದರು.

ಕಲಾವಿದರಾದ ಲಕ್ಷ್ಮಣ ಕತ್ತಿ, ಗಂಗಾಧರ ಕಮ್ಮಾರ, ಷಣ್ಮುಖ ಮಡಿವಾಳರ, ಟಿ.ಬಿ.ಭಜಂತ್ರಿ, ರವಿ ರಾಮಥಾಳ, ಮಹಾಂತೇಶ ಕಂಬಾರ, ಬಸು ಒಡ್ಡೋಡಗಿ, ವಿಠ್ಠಲ ಮಾರಾ, ಮಹಾಂತೇಶ ಕಟಾಪುರ, ಮಲ್ಲಪ್ಪ ಕಮತಗಿ, ಶಿವು ಮಿಣಜಗಿ, ಶೇಖಪ್ಪ ಕಟಗೇರಿ, ಮಲ್ಲಪ್ಪ ಹಣಗಿ ಇದ್ದರು.

 

 

Nimma Suddi
";