This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

State News

ಅಳಿವಿನಂಚಿನಲ್ಲಿರುವ ಕೊಡಗಿನ ಕಿತ್ತಳೆಯ ಪುನಶ್ಚೇತನ; 2 ಕೋಟಿ ರೂ. ವೆಚ್ಚದಲ್ಲಿ ಮರುಜೀವ

ಅಳಿವಿನಂಚಿನಲ್ಲಿರುವ ಕೊಡಗಿನ ಕಿತ್ತಳೆಯ ಪುನಶ್ಚೇತನ; 2 ಕೋಟಿ ರೂ. ವೆಚ್ಚದಲ್ಲಿ ಮರುಜೀವ

ಮಡಿಕೇರಿ: ಅಳಿವಿನಂಚಿನಲ್ಲಿರುವ ಕೊಡಗಿನ ಕಿತ್ತಳೆಯ ಪುನಶ್ಚೇತನಕ್ಕೆ ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ ಹೊಸ ಯೋಜನೆಯನ್ನು ರೂಪಿಸಿದ್ದು, 2 ಕೋಟಿ ರೂ. ವೆಚ್ಚದಲ್ಲಿ ಕೊಡಗಿನ ಕಿತ್ತಳೆಗೆ ಮರುಜೀವ ತುಂಬಲು ಸಿದ್ಧತೆ ನಡೆಸಿದೆ ಎಂದು ಮಾಹಿತಿ ತಿಳಿದು ಬಂದಿದೆ.

ಕೂರ್ಗ್‌ ಮ್ಯಾಂಡರಿನ್‌ (ಕೊಡಗಿನ ಕಿತ್ತಳೆ) ಗಾತ್ರದಲ್ಲಿ ಸ್ವಲ್ಪ ಸಣ್ಣದಾಗಿದ್ದರೂ, ಉತ್ಕೃಷ್ಟ ರುಚಿ ಹೊಂದಿದೆ. ಕೊಡಗಿನ ಕಿತ್ತಳೆಯನ್ನು ದಕ್ಷಿಣ ಭಾರತದ ವಿವಿಧೆಡೆಗಳಲ್ಲಿ ಬೆಳೆಯುತ್ತಿದ್ದರಾದರೂ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಂಡಿಲ್ಲ. ಕೊಡಗಿನ ಹವಾಮಾನದಲ್ಲಿ ಮಾತ್ರ ಕೊಡಗಿನ ಕಿತ್ತಳೆ ಬೆಳೆಯಲು ಸಾಧ್ಯ. ಕೊಡಗಿನ ಕಿತ್ತಳೆಗೆ 2005-06 ರಲ್ಲಿ ಭೌಗೋಳಿಕವಾಗಿ ಸೂಚಕ ಸ್ಥಾನಮಾನ ದೊರಕಿದೆ. ಹೀಗಿದ್ದರೂ, ಕೂರ್ಗ್‌ ಮ್ಯಾಂಡರಿನ್‌ ಬೆಳೆಯುವ ಪ್ರದೇಶಗಳು ಕೊಡಗಿನಲ್ಲಿ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿವೆ. ಒಂದು ಕಾಲಕ್ಕೆ 50 ಸಾವಿರ ಎಕರೆ ಪ್ರದೇಶದಲ್ಲಿದ್ದ ಕೊಡಗಿನ ಕಿತ್ತಳೆಯನ್ನು ಈಗ ಸುಮಾರು 3 ಸಾವಿರ ಎಕರೆಯಲ್ಲಷ್ಟೇ ಬೆಳೆಯಲಾಗುತ್ತಿದೆ.

ಕೂರ್ಗ್‌ ಮ್ಯಾಂಡರಿನ್‌ ಪುನಶ್ಚೇತನಕ್ಕಾಗಿ ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದ ವಿಜ್ಞಾನಿಗಳು ರಾಷ್ಟ್ರೀಯ ಕೃಷಿ ವಿಕಾಸ್‌ ಅಡಿಯಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಕ್ರಿಯಾ ಯೋಜನೆ ತಯಾರಿಸಿ ಸರಕಾರಕ್ಕೆ ಶಿಫಾರಸ್ಸು ಮಾಡಿದ್ದು, ಕಿತ್ತಳೆ ಅಭಿವೃದ್ಧಿಪಡಿಸಲು ಹಾಗೂ ಕಿತ್ತಳೆ ಬೆಳೆಯಲು ಕೊಡಗು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಮೂರು ಜಿಲ್ಲೆಯ ಬೆಳೆಗಾರರಿಗೆ ಉಚಿತವಾಗಿ ಚೆಟ್ಟಳ್ಳಿಯ ಕೇಂದ್ರಿಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರವು ಕಿತ್ತಳೆ ಗಿಡಗಳನ್ನು ಉಚಿತವಾಗಿ ವಿತರಿಸಿ ಅವರಿಗೆ ಕಿತ್ತಳೆ ಬೆಳೆಯ ಬಗ್ಗೆ ಅರಿವು ಹಾಗೂ ಆಸಕ್ತಿ ಮೂಡಿಸುವ ಉದ್ದೇಶ ಹೊಂದಿದ್ದಾರೆ.

Nimma Suddi
";