This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

State News

ಪ್ರವಾಹದಲ್ಲಿ ಕೊಚ್ಚಿಹೋದ ವ್ಯಕ್ತಿಯ ಶೋಧ ಕಾರ್ಯ

ಪ್ರವಾಹಕ್ಕೆ ತುತ್ತಾದ 161 ಕುಟುಂಗಳ ಸ್ಥಳಾಂತರ:ಸುನೀಲ್‍ಕುಮಾರ

ನಿಮ್ಮ ಸುದ್ದಿ ಬಾಗಲಕೋಟೆ

ಮಲಪ್ರಭಾ ನದಿಯ ಪ್ರವಾಹದಿಂದ ಹುನಗುಂದ ತಾಲೂಕಿನ 7 ಗ್ರಾಮಗಳ ಒಟ್ಟು 161 ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‍ಕುಮಾರ ತಿಳಿಸಿದ್ದಾರೆ.

ಹುನಗುಂದ ತಾಲೂಕಿನ ಗಂಜೀಹಾಳ ಗ್ರಾಮದಲ್ಲಿರುವ 1110 ಮನೆಗಳ ಪೈಕಿ 25 ಕುಟುಂಬಗಳನ್ನು ಗಂಜಿಹಾಳ ಆಸರೆ ಗ್ರಾಮಕ್ಕೆ ಸ್ಥಳಾಂತರಿಸಲಾಗಿದೆ. ಹಿರೇಮಳಗಾವಿ ಗ್ರಾಮದ 70 ಕುಟುಂಬಗಳನ್ನು ಆಸರೆ ಗ್ರಾಮಕ್ಕೆ, ಹೂವನೂರ ಗ್ರಾಮದ 1 ಕುಟುಂಬವನ್ನು ಸಂಬಂಧಿಕರ ಮನೆಗೆ, ವರಗೋಡದಿನ್ನಿ 2, ಖಜಗಲ್ 37 ಕುಟುಂಬಗಳನ್ನು ಆರ್‍ ಸಿ ಸೆಂಟರ್‍ ಸಮುದಾಯ ಭವನದಲ್ಲಿ ಹಾಗೂ ಚಿತ್ತರಗಿ ಗ್ರಾಮದ 26 ಕುಟುಂಬಗಳನ್ನು ಆಸರೆ ಗ್ರಾಮಕ್ಕೆ ಸ್ಥಳಾತರಿಸಲಾಗಿದೆ ಎಂದು ತಿಳಿಸಿದ್ದಾರೆ.

ಮಲಪ್ರಭಾ ನದಿ ದಡದಲ್ಲಿರುವ ಗಂಜೀಹಾಳ ಗ್ರಾಮದ ದೇವಾನಂದ ಕಮ್ಮಾರ (20) ನದಿ ದಡದಲ್ಲಿರುವ ತಮ್ಮ ಜಮೀನಿಗೆ ನೀರು ಹಾಯಿಸಲು ಕೂಡ್ರಿಸಿದ್ದ ಮೋಟಾರ್ ಪಂಪ್‍ಸೆಟ್ ತೆಗೆದುಕೊಳ್ಳಲು ಹೋದಾಗ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದು, ಅಗ್ನಿಶಾಮಕ ತಂಡ ವ್ಯಕ್ತಿಯ ಶೋಧನಾ ಕಾರ್ಯ ಕೈಗೊಂಡಿರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Nimma Suddi
";