This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

State News

ಲಸಿಕೆ ಪಡೆದರಷ್ಟೇ ಅಂಗಡಿ ಓಪನ್

ಜೂನ್ 14 ನಂತರ ಕೆಲವು ವಲಯಗಳಿಗೆ ಲಾಕ್‍ಡೌನ್‍ದಿಂದ ವಿನಾಯಿತಿ

ನಿಮ್ಮ ಸುದ್ದಿ ಬಾಗಲಜೋಟೆ

ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಜೂನ್ 14 ರ ಬಳಿಕ ಸರಕಾರ ಕೆಲವೊಂದು ವಲಯಗಳಿಗೆ ಸರಕಾರ ವಿನಾಯಿತಿ ಘೋಷಿಸುವ ಸಾಧ್ಯತೆ ಇದೆ. ವಿನಾಯಿತಿ ಪಡೆಯಲಿರುವ ವಲಯದವರು ಕೋವಿಡ್ ಲಸಿಕೆ ಹಾಕಿಸಿಕೊಂಡ ಬಗ್ಗೆ ದೃಡೀಕರಣ ಪತ್ರವನ್ನು ಸ್ಥಳೀಯ ಸಂಸ್ಥೆಯ ಮುಖ್ಯಸ್ಥರಿಗೆ ನೀಡಿದಲ್ಲಿ ಮಾತ್ರ ವ್ಯವಹಾರಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಲಾಕ್‍ಡೌನ್‍ದಿಂದ ವಿನಾಯಿತಿ ಪಡೆಯಲಿರುವ ವಲಯಗಳಾದ ಕ್ಷೌರಿಕ, ಮಡಿವಾಳ, ಜ್ಯೂವೆಲರಿ, ಬಟ್ಟೆ ವ್ಯಾಪಾರಿಗಳು, ಕಿರಾಣಿ ಅಂಗಡಿ, ಹೊಟೆಲ್, ಸ್ಟೀಲ್ ಮಾರ್ಟ, ವಿದ್ಯುತ್ ಸಲಕರಣೆ, ನೀರಾವರಿ ಯೋಜನೆ ಸಲಕರಣೆ ವ್ಯಾಪಾರಸ್ಥರು ಹಾಗೂ ಹೂ-ಹಣ್ಣು, ತರಕಾರಿ ವ್ಯಾಪಾರಸ್ಥರು ಮತ್ತು ತಮ್ಮ ಅಂಗಡಿಗಳಲ್ಲಿ ದುಡಿಯುವ ಪ್ರತಿಯೊಬ್ಬ ಕಾರ್ಮಿಕರು ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆಯಬೇಕು. ಪಡೆಯದಿದ್ದಲ್ಲಿ ವ್ಯಾಪಾರ ವಹಿವಾಟುಗಳಿಗೆ ಅವಕಾಶ ನೀಡಲಾಗುವುದಿಲ್ಲ. ಈ ಕಾರ್ಯಕ್ಕೆ ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಸಾರ್ವಜನಿಕರಲ್ಲಿ ಜಿಲ್ಲಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

";