This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

State News

ಬಣ್ಣದಾಟ ಸಂಪ್ರದಾಯಕ್ಕೆ ಸೀಮಿತವಾಗಿರಲಿ:ಎಸ್‌ಐ ಕುಲಕರ್ಣಿ

ನಿಮ್ಮ ಸುದ್ದಿ ಬಾಗಲಕೋಟೆ

ಕೊರೊನಾ ತಡೆಗೆ ಬಹುತೇಕ ಹಬ್ಬಗಳು ಸಾಂಪ್ರದಾಯಕ್ಕೆ ಮಾತ್ರ ಸೀಮಿತವಾಗಿದ್ದು ಏ.೧೪ ಮತ್ತು ೧೫ರಂದು ನಡೆಯುವ ಬಣ್ಣದಾಟವೂ ಸಹ ಸಂಪ್ರದಾಯ ಮಾತ್ರ ನೆನಪಿಸುವಂತಿರಲಿ ಎಂದು ಪಿಎಸ್‌ಐ ಎಂ.ಜಿ.ಕುಲಕರ್ಣಿ ತಿಳಿಸಿದರು.

ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಜರುಗಿದ ಬಣ್ಣದಾಟದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು. ದೇಶದಲ್ಲಿ ಕೊರೊನಾ ೨ನೇ ಅಲೆ ಹೆಚ್ಚಾಗಿದೆ. ಅಲ್ಪ ಆಯ ತಪ್ಪಿದರೂ ಸಮುದಾಯಕ್ಕೆ ಒಕ್ಕರಿಸುವ ಅಪಾಯ ಬಂದೊದಗಿದೆ. ಇಂತಹ ಅವಧಿಯಲ್ಲಿ ಹಬ್ಬಗಳು ಸಾಂಪ್ರದಾಯಿಕವಾಗಿ ನಡೆಯುವಂತಾಗಬೇಕು ಎಂದರು.

ಯುಗಾದಿ ನಿಮಿತ್ತ ನಡೆಯುವ ಬಣ್ಣದಾಟ ಮನೆ ಸದಸ್ಯರು ಹಾಗೂ ಮನೆ ಆವರಣದೊಳಗೆ ಸೀಮಿತವಾಗಿರಲಿ. ಜಾತ್ರೆ, ಉತ್ಸವಗಳು ಪೂಜೆ ಹಾಗೂ ಅಭಿಷೇಕಕ್ಕೆ ಮಾತ್ರವಿರಲಿ. ಕೊರೊನಾ ನಿಯಂತ್ರಣಕ್ಕೆ ಬರುವವರೆಗೆ ಸರಕಾರದ ನಿಯಮ ಎನ್ನುವ ಬದಲಾಗಿ ನಮ್ಮ ಜೀವ ಕಾಪಾಡಿಕೊಳ್ಳಲು ಎಲ್ಲರೂ ಮಾರ್ಗಸೂಚಿಗಳನ್ನು ಪಾಲಿಸೋಣ ಎಂದರು.

ಪಪಂ ಸದಸ್ಯ ಗುರುನಾಥ ಚಳ್ಳಮರದ, ನಾವು ಎಚ್ಚೆತ್ತುಕೊಳ್ಳೋಣ, ಸುಧಾರಣೆಗೆ ಮೊದಲ ಹೆಜ್ಜೆ ನಮ್ಮದಾಗಲಿ, ಇತರರಿಗೂ ತಿಳಿ ಹೇಳೋಣ ಎಂದರು. ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಅಜ್ಮೀರ ಮುಲ್ಲಾ, ಕಾಂಗ್ರೆಸ್ ಮುಖಂಡ ಅಮರೇಶ ಮಡ್ಡಿಕಟ್ಟಿ ಮಾತನಾಡಿದರು.

ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಹಾಸೀಂಪೀರ ಫಿರಜಾದೆ, ಡಿ.ಪಿ.ಅತ್ತಾರ,  ಪಪಂ ಸದಸ್ಯ ವಿಜಯಕುಮಾರ ಕನ್ನೂರ, ಮಹಾಂತೇಶ ಹಿರೇಮಠ, ಪರಶುರಾಮ ಪುರ್ತಗೇರಿ, ರವಿ ರಾಠೋಡ ಇತರರು ಇದ್ದರು.

 

Nimma Suddi
";