This is the title of the web page
This is the title of the web page

Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Local NewsPolitics NewsState News

ಎಸ್‌ಐ ವರ್ಗಾವಣೆ ಅನಿರೀಕ್ಷಿತ

ಎಸ್‌ಐ ವರ್ಗಾವಣೆ ಅನಿರೀಕ್ಷಿತ

ಬಾಗಲಕೋಟೆ

ಅಮೀನಗಡದ ಠಾಣೆ ಎಸ್‌ಐ ಇತರರಿಗೆ ಸ್ಪೂರ್ತಿದಾಯಕರಾಗಿದ್ದು ಅವರ ವರ್ಗಾವಣೆ ಅನಿರೀಕ್ಷಿತ ಎಂದು ಪಿಕೆಪಿಎಸ್ ಅಧ್ಯಕ್ಷ ಸಿದ್ದು ಭದ್ರಶೆಟ್ಟಿ ಹೇಳಿದರು.

ಅಲ್ಲಿನ ಸಿದ್ದಗಂಗಾ ಪತ್ತಿನ ಸಹಕಾರಿ ಸಂಘದಿAದ ಸ್ಥಳೀಯ ಠಾಣೆಯಿಂದ ವರ್ಗಾವಣೆಗೊಂಡ ಪಿಎಸ್‌ಐ ಶಿವಾನಂದ ಸಿಂಗನ್ನವರ ಅವರನ್ನು ಸನ್ಮಾನಿಸಿ ಬೀಳ್ಕೊಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಳೆದೊಂದು ವರ್ಷದ ಹಿಂದೆ ಇಲ್ಲಿನ ಠಾಣೆಗೆ ಎಸ್‌ಐ ಆಗಿ ಆಗಮಿಸಿದ ಶಿವಾನಂದ ಅವರ ಠಾಣೆ ವ್ಯಾಪ್ತಿಯಲ್ಲಿ ಸಾಕಷ್ಟು ಬದಲಾವಣೆಗೆ ಮುನ್ನುಡಿ ಬರೆದಿದ್ದರು ಎಂದರು.

ಜನರು, ಜನಪ್ರತಿನಿಧಿಗಳು ಸೇರಿದಂತೆ ಎಲ್ಲರೊಂದಿಗೆ ಸಹಜವಾಗಿ ಬೆರೆತು ಉತ್ತಮ ಸಂಪರ್ಕದೊAದಿಗೆ ಎಲ್ಲರಿಗೂ ಸ್ಪೂರ್ತಿದಾಯಕರಾಗಿದ್ದರು. ಇಂತಹ ಕಡಿಮೆ ಅವಧಿಯಲ್ಲಿ ಅವರ ವರ್ಗಾವಣೆ ನಿರೀಕ್ಷಿಸಿರಲಿಲ್ಲ ಎಂದು ಹೇಳಿದರು.

ಸಂಘದ ನಿರ್ದೇಶಕ ಫಕೀರಪ್ಪ ವಡ್ಡರ, ಶಿವಾನಂದ ಅವರು ಒಬ್ಬ ದಕ್ಷ, ನಿಷ್ಟುರ, ಪ್ರಾಮಾಣಿಕ ಅಧಿಕಾರಿಯಾಗಿದ್ದರು. ರಸ್ತೆ ನಿಯಮ ಪಾಲನೆ, ಅಪಘಾತ ತಡೆ, ಕಾನೂನು ಬಾಹಿರ ಚಟುವಟಿಕೆಗಳಿಗೆ ಬ್ರೇಕ್ ಹಾಕಿದ್ದರು. ಇಂತವರ ಸೇವೆ ಪಟ್ಟಣಕ್ಕೆ ಇನ್ನಷ್ಟು ಬೇಕಿತ್ತು. ಆದರೂ ಮುಂದಿನ ಹಂತದಲ್ಲಿ ಉನ್ನತ ಸ್ಥಾನ ಹೊಂದಲಿ ಎಂದು ಹಾರೈಸಿದರು.

ಸಂಘದ ಉಪಾಧ್ಯಕ್ಷ ರಾಜಕುಮಾರ ರಕ್ಕಸಗಿ, ನಿರ್ದೇಶಕ ಗೌಡಪ್ಪ ಹೊರಗಿನಮನಿ, ವ್ಯವಸ್ಥಾಪಕ ಮಲ್ಲಿಕಾರ್ಜುನ ಕಮತಗಿ, ಸಿಬ್ಬಂದಿ ನಿರ್ಮಲಾ ಹುಣಶ್ಯಾಳ, ಪಿಸಿಗಳಾದ ಗಣಪತಿ ಪಮ್ಮಾರ, ರವಿ ದಾಸರ, ಹನಮಂತ ಆಡಗಲ್, ಹಿರಿಯರಾದ ಹುಲ್ಲಪ್ಪ ನೀರುಗ್ಗಿ, ಯಮನಪ್ಪ ಖಂಡೋಜಿ ಇತರರು ಇದ್ದರು.

 

Nimma Suddi
";