This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Politics NewsState News

ಸಿದ್ದರಾಮಯ್ಯ ಜೀವನದಲ್ಲಿ ನಿಜನೇ ಹೇಳಿಲ್ಲ, ಬಿಜೆಪಿಯವರು ಸುಳ್ಳುಗಾರರು ಎಂದು ಒಳ್ಳೆಯ ರೀತಿಯಲ್ಲಿ ಹೇಳಿದ್ದಾರೆ – ವಿ. ಸೋಮಣ್ಣ

ಸಿದ್ದರಾಮಯ್ಯ ಜೀವನದಲ್ಲಿ ನಿಜನೇ ಹೇಳಿಲ್ಲ, ಬಿಜೆಪಿಯವರು ಸುಳ್ಳುಗಾರರು ಎಂದು ಒಳ್ಳೆಯ ರೀತಿಯಲ್ಲಿ ಹೇಳಿದ್ದಾರೆ – ವಿ. ಸೋಮಣ್ಣ

ರಾಯಚೂರು: ಸಿಎಂ ಸಿದ್ದರಾಮಯ್ಯ ಅವರು ಸಿದ್ದರಾಮಯ್ಯ ಜೀವನದಲ್ಲಿ ನಿಜನೇ ಹೇಳಿಲ್ಲ. ಬಿಜೆಪಿಯವರು ಸುಳ್ಳುಗಾರರು ಎಂದು ಒಳ್ಳೆಯ ರೀತಿಯಲ್ಲಿ ಹೇಳಿದ್ದಾರೆ ಎಂದು ಮಾಜಿ ಸಚಿವ ವಿ.ಸೋಮಣ್ಣ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ಮೋದಿ ಸುಳ್ಳು ಹೇಳುತ್ತಾರೆ ಅನ್ನೋ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದವರು,ಸಿದ್ದರಾಮಯ್ಯ ಜೀವನದಲ್ಲಿ ನಿಜನೇ ಹೇಳಿಲ್ಲ. ಸಿದ್ದರಾಮಯ್ಯ ಬಾರಿ ಚೆನ್ನಾಗಿ ಹೇಳಿದ್ದಾರೆ.ನಾವೆಲ್ಲಾ ಸುಳ್ಳುಗಾರರು ಬಿಜೆಪಿಯವರು ಒಳ್ಳೆಯವರು ಅನ್ನೋ ಭಾವನೆಯಿಂದ ಹೇಳಿದ್ದಾರೆ.

ಪ್ರಜ್ವಲ್ ರೇವಣ್ಣ ವಿರುದ್ಧದ ಹಗರಣಗಳ ಬಗ್ಗೆ ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡಿ, “ಯಾರೇ ತಪ್ಪು ಮಾಡಿದರೂ ಅದು ತಪ್ಪೇ. ಕುಮಾರಸ್ವಾಮಿ ಈಗಾಗಲೇ ಹೇಳಿದ್ದಾರೆ… ಉಪ್ಪು ತಿಂದವನು ನೀರು ಕುಡಿಯಲೇ ಬೇಕು ಅಂತ. ಅದರಲ್ಲಿ ನಮ್ದು ಎರಡನೇ ಮಾತಿಲ್ಲ. ಅದರಲ್ಲಿ ಏನೆ ಇದ್ರೂ ರಾಜ್ಯಸರ್ಕಾರ ನೇಮಿಸಿರುವ ಎಸ್ ಐ ಟಿ ಕ್ರಮ ತೆಗೆದುಕೊಳ್ಳುತ್ತದೆ. ಇದರಿಂದ ನಮಗೆ ಏನ್ ಏನ್ ಆಗಲ್ಲ.ಕಾಂಗ್ರೆಸ್ ನಿಂದ ಇಂತಹದ್ದು ನೂರಾರು ನಡೆಯುತ್ತಲೇ ಇರುತ್ತವೆ’’ ಎಂದರು.

ಸಿದ್ದರಾಮಯ್ಯ ಎಮೋಶನ್ ನಲ್ಲಿ ಬಿಜೆಪಿಯನ್ನ ಹೊಗಳುವರು ಅವರೇ‌ ಸಿದ್ದರಾಮಣ್ಣನ ನಾನು 40 ವರ್ಷದಿಂದ ನೋಡಿದ್ದೀನಿ.ಅವರ ಎಲ್ಲಾ ಮುಖಗಳು ನನಗೆ ಗೊತ್ತಿದೆ. ಸಿದ್ದರಾಮಣ್ಣ ಹಳೆಯ ಸಿದ್ದರಾಮಣ್ಣ ಇಲ್ಲ. ಹೊಸ ಸಿದ್ದರಾಮಣ್ಣ ಇದ್ದಾರೆ, ಅವರ ಮಾತಿಗೆ ಅಂತಹ ಮಹತ್ವ ಇಲ್ಲ. ಒಬ್ಬ ಮುಖ್ಯಮಂತ್ರಿ ಆಗಿ,ಒಬ್ಬ ಪ್ರಧಾನ ಮಂತ್ರಿ ಬಗ್ಗೆ ಮಾತನಾಡ್ತಾರೆ.ಈ ಮೂಲಕ‌ ಅವರ ಸ್ಟ್ಯಾಂಡರ್ಡ್ ಎಂಥದ್ದು ಅಂತ ಗೊತ್ತಾಗುತ್ತದೆ ಎಂದು ಟೀಕಿದ್ದಾರೆ.

 

";